ಎಡೆಗಳು ಹೇಳುವ ಕಂನಾಡ ಕತೆ

Author : ಶಂ.ಬಾ. ಜೋಶಿ

Pages 260

₹ 30.00




Year of Publication: 2011
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ ಜೆ.ಸಿ. ರಸ್ತೆ, ಬೆಂಗಳೂರು

Synopsys

ಕಂನಾಡು ಎಂಬುದು ಊರ ಹೆಸರಿನ ಸೊಗಸೆ? ವೇದ ಕಾಲದವರ ಕತೆಯೇ? ಪಂಜಾಬಿನಿಂದ ಬಂಗಾಳದವರಗೆ ಕಂನಾಡದವರ ಪ್ರಭಾವ, ಕುರುಬರು, ತುರುಕಾರರು, ತುಳುವರು, ಕುಡು ಒಕ್ಕಲಿಗರು ಮಾತ್ರವಲ್ಲ; ಗೌಡರು-ಒಕ್ಕಲಿಗರು, ಪಾಟೀಲರು, ಬಿಲ್ಲವರು, ಅಂಬಿಗರು, ಬ್ರಾಹ್ನಣರು, ದೇಶಸ್ಥರು, ಸಾರಸ್ವತರು, ಹವ್ಯಕರು, ಯಜುರ್ವೇದಿಗಳು ಇವರೆಲ್ಲರೂ ಯಾರು? ಇವರ ಮೂಲವೇನು? ಆಚಾರ-ವಿಚಾರಗಳೇನು? ಸಂಸ್ಕೃತಿ ವೈಶಿಷ್ಟ್ಯವೇನು? ಯತಿಗಳು-ಜಂಗಮರು ಯಾರು? ಹೀಗೆ ಸಂಶೋಧನೆಯ ಆಳಕ್ಕೆ ಸೆಳೆಯುವ ಕೃತಿ -ಎಡೆಯರು ಹೇಳುವ ಕಂನಾಡ ಕತೆ. ಖ್ಯಾತ ಸಂಶೋಧಕ ಡಾ. ಶಂ.ಬಾ.ಜೋಶಿ ಅವರು ರಚಿಸಿದ್ದಾರೆ.

1937ರಲ್ಲಿ ಧಾರವಾಡದ ಮಾಧವ ಬಲ್ಲಾಳ ಬಂಧುಗಳು ಈ ಪುಸ್ತಕವನ್ನು ಪ್ರಕಟಿಸಿದ್ದರು.
 

About the Author

ಶಂ.ಬಾ. ಜೋಶಿ
(04 January 1896 - 28 September 1991)

ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಕನ್ನಡ ಸಂಶೋಧನಾ ಕ್ಷೇತ್ರದ ಬಲುದೊಡ್ಡ ಹೆಸರು. 1896ರ ಜನೇವರಿ 4ರಂದು ಗುರ್ಲಹೊಸೂರಿನಲ್ಲಿ ಜನಿಸಿದರು. ತಂದೆ ಬಾಳದೀಕ್ಷಿತ ಜೋಶಿ ಮತ್ತು ತಾಯಿ ಉಮಾಬಾಯಿ. ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. 1916ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು. ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ (1926-27) ಸೇವೆ ಸಲ್ಲಿಸಿದ ಮೇಲೆ 1928ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದ ಅವರು 1946ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ...

READ MORE

Related Books