ತತ್ತ್ವ ದರ್ಶನ ಮತ್ತು ಆಧುನಿಕ ಆನ್ವಯಿಕತೆ

Author : ಗೋಪಾಲಕೃಷ್ಣ ಎನ್‌.ಭಟ್

Pages 216

₹ 250.00




Year of Publication: 2022
Published by: ವೈಟ್‌ ಸ್ಟೋನ್‌
Address: ವಿದ್ಯಾಪೀಠ ಬನಶಂಕರಿ 3ನೇ ಹಂತ ಬೆಂಗಳೂರು 560028

Synopsys

ಬಿ.ಎನ್.ಭಟ್ಟರ ಸುದೀರ್ಘವಾದ ಅಧ್ಯಯನ, ಅಧ್ಯಾಪನದಿಂದಲೂ, ವೈದಿಕ ಪರಂಪರೆಯ ಕುಲಸಂಸ್ಕಾರ ಸೌಲಭ್ಯದಿಂದಲೂ ಭಗವದ್ಗೀತೆಯ ಆಳವಿಸ್ತಾರವನ್ನು ಮುಟ್ಟಲು ಅವರಿಗೆ ಸೌಕರ್ಯವಾಯಿತು. ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನೆಯ ಸಂದರ್ಭದಲ್ಲಿ ವಿಶ್ಲೇಷಣಾತ್ಮಕ ದೃಷ್ಟಿಯಿಂದ ಭಗವದ್ಗೀತೆಯ ತತ್ತ್ವಸಂದೇಶಗಳನ್ನು ನಿರ್ದಿಷ್ಟವಾಗಿ-ನಿರ್ದುಷ್ಟವಾಗಿ ಅರಿತು ಆಧುನಿಕ ಜಗತ್ತಿಗೆ ಅನ್ವಯಿಸಲು ಸಮರ್ಥರಾದ ಪ್ರೊ ಭಟ್ಟರು ಈ ಪುಸ್ತಕದಲ್ಲಿ ನಮ್ಮ ತನನನ್ನು ದಾಖಲಿಸಿದ್ದಾರೆ. ವ್ಯಕ್ತಿಯ ವಿಕಾಸವೇ ಗೀತೆಯ ಪ್ರಧಾನ ತಾ, ಆಹಾರ-ವಿಹಾರ-ಆರೋಗ್ಯ- ಯೋಗಾಭ್ಯಾಸಗಳಿಂದ ಶರೀರವನ್ನು ಪ್ರಾಣಾಯಾಮಾದಿಗಳಿಂದ ಮನಸನ್ನ, ಧ್ಯಾನಾದಿಗಳಿಂದ ಬುದ್ಧಿ-ಅಹಂಕಾರ-ಚಿತ್ತಾದಿಗಳನ್ನು ಸಂಸ್ಕಾರಗೊಳಿಸಿದಾಗ ವ್ಯಕ್ತಿಯ ವಿಕಾಸವಾಗುತ್ತದೆ. ಬೆಳಗುವುದೇ ವ್ಯಕ್ತಿತ್ವ ವಿಕಾಸ, ಇದನ್ನು ಭಗವದ್ಗೀತೆಯ ಆನ್ವಯಿಕ ಮಾಸವೆಂದು ಪ್ರೊ. ಭಟ್ಟರು 'ಚೆನ್ನಾಗಿ ನಿರೂಪಿಸಿದ್ದಾರೆ. ಆತ್ಮಕತ್ತ್ವ,ಯಜ್ಞತತ್ತ್ವ ಮನೋನಿಗ್ರಹ, ಜ್ಞಾನ-ವಿಜ್ಞಾನ ದರ್ಶನ, ತ್ರಿಗುಣ ಮೀಮಾಂಸೆ, ಧರ್ಮ-ಕರ್ಮಯೋಗ, ವಿಕಸಿತ ವ್ಯಕ್ತಿಯ ಪ್ರಬದ್ಧತೆ ಮತ್ತು ಸಿದ್ಧಿಮಾರ್ಗ, ಸಂದಿಗ್ದತೆ ಸಂಕಷ್ಟಗಳ ನಿರ್ವಹಣೆ ಹೀಗೆ ಭಗವದ್ಗೀತೆಯ ಹಲವು ಸಂದೇಶಗಳನ್ನು ಇಹಪರಗಳಿಗೆ ಅನ್ವಯವಾಗುವಂತೆ ಎಳೆ ಎಳೆಯಾಗಿ ಬಿಡಿಸಿ ಮನದಟ್ಟು ಮಾಡುವ ಈ ಮನದಟ್ಟು ಮಾಡುವ ಈ ಗ್ರಂಥವು ಸರ್ವಥ ಸಂಗ್ರಹಯೋಗ್ಯವಾಗಿದೆ. ನಮಗೂ ಪ್ರಿಯ, ಬಂಧು ಮಾರಿಗೂ ಇದೊಂದು ಉತ್ತಮ ಉಡುಗೊರೆಯಾಗಿದೆ. ಎಂದು ಶಿಕಾರಿಪುರ ಕೃಷ್ಣಮೂರ್ತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ಗೋಪಾಲಕೃಷ್ಣ ಎನ್‌.ಭಟ್

ಗೋಪಾಲಕೃಷ್ಣ ಎನ್‌.ಭಟ್ (ಡಾ ಜಿ.ಎನ್.ಭಟ್ಟ) ಅವರು ಮಂಗಳೂರು ಕೆನರಾ ಕಾಲೇಜಿನಲ್ಲಿ ಸಂಸ್ಕೃತ ವಿಭಾಗದ ಮುಖ್ಯಸ್ಥ .ಅಂತ‌ರ್‌ ವಿಷಯ ಸಂಸ್ಕೃತ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸ್ಥಾಪಕ ನಿರ್ದೇಶಕ, ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದ್ದಾರೆ.  ಹಲವಾರು ಸಂಘಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. 16 ಪಿಹೆಚ್ ಡಿ ಸಂಶೋಧಕರಿಗೆ ಯಶಸ್ವಿ ಮಾರ್ಗದರ್ಶಕರಾಗಿ, ಮಂಗಳೂರು ವಿ.ವಿ. ನಿನ್ನನ ಸ್ನಾತಕೋತ್ತರ ಅಧ್ಯಯನ ಮಂಡಳಿ ಅಧ್ಯಕ್ಷ, ಸದಸ್ಯರಾಗಿ, ಪ್ರಸ್ತುತ ತತ್ವಶಾಸ್ತ್ರ  ಅಧ್ಯಯನ ಮಂಡಳಿಯ ಪರಿಣತ ಬಾಹ್ಯ ಸದಸ್ಯರು ಹಾಗೂ ಸಂಸ್ಕೃತ ಸಂಶೋಧನ ಸಂಘಟನೆ ಅಧ್ಯಕ್ಷರಾಗಿದ್ದಾರೆ.  ಕೃತಿಗಳು : ತತ್ವ ದರ್ಶನ ಮತ್ತು ಆಧುನಿಕ ಆನ್ವಯಿಕತೆ,  ಪ್ರಧಾನ ಉಪನಿಷತ್ತುಗಳ ತತ್ವವಿವೇಚನೆ, ...

READ MORE

Related Books