ಕನಕ ಕೀರ್ತನ ಕೌಸ್ತುಭ

Author : ಜಗನ್ನಾಥ ಆರ್. ಗೇನಣ್ಣವರ

Pages 152

₹ 60.00




Year of Publication: 2018
Published by: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ

Synopsys

ಕನಕದಾಸರು ಎಲ್ಲ ಕಾಲಕ್ಕೂ ಪ್ರಸ್ತುತರಾಗುತ್ತಾರೆ ಎಂಬುದನ್ನು ಜಗನ್ನಾಥ ಆರ್. ಗೇನಣ್ಣವರ ‘ಕನಕ ಕೀರ್ತನ ಕೌಸ್ತುಭ’ ಕೃತಿಯು ವಿವರಿಸುತ್ತದೆ. ಸಾಮಾಜಿಕ ವಿಡಂಬನೆ, ಮೌಢ್ಯ, ಕಂದಾಚಾರ, ಜಾತೀಯತೆಯಂತಹ ವಿಷಯಗಳನ್ನು ಸಮಾಜದಿಂದ ದೂರವಿರಿಸಬೇಕೆಂದು ಇವರ ಒಟ್ಟು ಸಾಹಿತ್ಯದ ಆಶಯವಾಗಿದೆ. ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ, ವರವ ಕೊಡು ಎನಗೆ ವಾಗ್ದೇವಿ, ಶಿವ ಶಿವ ಶಿವ ಎನ್ನಿರೊ ಮೂಜಗದವರೆಲ್ಲ, ದಾಸನಾಗಬೇಕು ಸದಾಶಿವನ ದಾಸನಾಗಬೇಕು, ಅರಸಿನಂತೆ ಬಂಟನೋ ಹನುಮರಾಯ, ಸೇವಕತನದ ರುಚಿಯನೇನರಿದೆಯೊ, ಎನ್ನ ಕಂದ ಹಳ್ಳಿಯ ಹನುಮ, ರಾಮಾನುಜರೇ ನಮೋ ನಮೋ, ಪರಮ ಪದವಿಯನೀವ ಗುರುಮುಖ್ಯ ಪ್ರಾಣನ, ಶರಣು ಶರಣು, ಜಯಮಂಗಲಂ ನಿತ್ಯ ಶುಭಮಗಲಂ, ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆ, ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತ, ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತ, ಯಾತರವನೆಂದುಸರಲಿ, ನಾವು ಕುರುಬರು ನಮ್ಮ ದೇವರು ಬೀರಯ್ಯ, ದಾಸದಾಸರ ಮನೆಯ ದಾಸಿಯರ ಮಗನ ನಾನು, ಬಾಗಿಲನು ತೆರೆದು ಸೇವೆಯನು ಕೊಡು ಹರಿಯೆ, ನಮಗೆಲ್ಲಿ ಮನೆಗಳಯ್ಯ ನಾರಾಯಣ, ಆರಿಗಾಗಿಲ್ಲ ಆಪತ್ಕಾಲದೊಳಗೆ ಹೀಗೆ ಈ ಕರತಿಯು ಹಲವಾರು ಭಜನಾ ಕೀರ್ತನೆಗಳನ್ನು ಒಳಗೊಂಡಿದೆ.

About the Author

ಜಗನ್ನಾಥ ಆರ್. ಗೇನಣ್ಣವರ

ಲೇಖಕ ಜಗನ್ನಾಥ ಆರ್. ಗೇನಣ್ಣವರ ಅವರು ಮೂಲತಃ ಹಾವೇರಿ ಜಿಲ್ಲೆಯ ಕಾಗಿನೆಲೆಯವರು. ಪ್ರಸ್ತುತ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರದ ಸಹಾಯಕ ಸಂಶೋಧಕ ಹಾಗೂ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು: ಕನಕದಾಸರ ಸಾಹಿತ್ಯ ದರ್ಶನ, ಸಂತ ಶ್ರೀ ಕನಕದಾಸರ ಜೀವನ ಸಂದೇಶ, ಕನಕ ಕೀರ್ತನ ಕೌಸ್ತುಭ ...

READ MORE

Related Books