ಇಡಗುಂಜಿ-ಮುರ್ಡೇಶ್ವರ ಮತ್ತು ಇತರ ಕ್ಷೇತ್ರಗಳು

Author : ಜೀಯು ಭಟ್ (ಗಜಾನನ ಉಮಾಮಹೇಶ್ವರ ಭಟ್)

Pages 88

₹ 70.00




Year of Publication: 2014
Published by: ಮಹಿಮಾ ಪ್ರಕಾಶನ
Address: ಮೈಸೂರು

Synopsys

‘ಇಡಗುಂಜಿ-ಮುರ್ಡೇಶ್ವರ ಮತ್ತು ಇತರ ಕ್ಷೇತ್ರಗಳು ’ ಜೀಯು ಭಟ್ ಅವರ ಅಧ್ಯಯನ ಗ್ರಂಥವಾಗಿದೆ. ಉತ್ತರ ಕನ್ನಡ ಪುರಾಣಪ್ರಸಿದ್ಧ ಪುಣ್ಯಕ್ಷೇತ್ರಗಳವೆ. ಗೋಕರ್ಣದ ಹೊರತಾಗಿ ಇಡಗುಂಜಿ ಮತ್ತು ಮುರ್ಡೇಶ್ವರ ನಿತ್ಯ ಸಹಸ್ರಾರು ಭಕ್ತರನ್ನು ತನ್ನತ್ತ ಸೆಳೆಯುತ್ತದೆ. ಈ ಕ್ಷೇತ್ರಗಳನ್ನು ರಾಷ್ಟ್ರದ ನಕ್ಷೆಯಲ್ಲಿ ಗುರುತಿಸುವಂತೆ ಬೆಳಸಿದ ಕೀರ್ತಿ ಇಬ್ಬರು ಪುಣ್ಯಾತ್ಮರಿಗೆ ಸಲ್ಲುತ್ತದೆ. ವಿ. ಡಾ. ಟಿ.ಎನ್. ಸಭಾಹಿತ ತಮ್ಮ ಕುಟುಂಬದ ಆಡಳಿತದಲ್ಲಿದ್ದ ದೇವಾಲಯವನ್ನು ಪರಿವರ್ತಿಸಿ ಎಲ್ಲರಿಗೆ ಸಮರ್ಪಿಸಿ, ಕ್ಷೇತ್ರದ ಬೆಳವಣಿಗೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ಮಗ ಡಾ. ಟಿ.ಟಿ. ಸಭಾಹಿತ ತಂದೆಯ ಹೆಜ್ಜೆಯಲ್ಲಿ ನಡೆಯುತ್ತ ಕ್ಷೇತ್ರವನ್ನು ಬೆಳೆಸಿದ್ದಾರೆ.

About the Author

ಜೀಯು ಭಟ್ (ಗಜಾನನ ಉಮಾಮಹೇಶ್ವರ ಭಟ್)
(03 May 1948)

ಜೀಯು ಭಟ್ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು. ಪತ್ರಿಕೋದ್ಯಮ ಮತ್ತು ಕೃಷಿಯನ್ನು ವೃತ್ತಿಯಾಗಿಸಿಕೊಂಡಿದ್ದಾರೆ. ಉದಯವಾಣಿ ಹಿರಿಯ ವರದಿಗಾರನಾಗಿ 50 ವರ್ಷಗಳಿಂದ ಕೆಲಸನಿರ್ವಹಿಸಿದ್ದಾರೆ . ಸಂಯುಕ್ತ ಕರ್ನಾಟಕ ಪತ್ರಿಕೆಯ ಹೊನ್ನಾವರದ ವರದಿಗಾರನಾಗಿ , ಗ್ರಾಮ ವಿಕಾಸ ವಾರಪತ್ರಿಕೆಯ ಸಂಪಾದಕನಾಗಿ, ಸಮನ್ವಯ ವಾರಪತ್ರಿಕೆಯ ಸ್ಥಾನಿಕ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದಾರೆ. “ಜೋಕುಮಾರ ಸ್ವಾಮಿ”, “ಅಂಧಯುಗ”, “ಬೇಲಿ ಮತ್ತು ಹೊಲ”, “ಆಷಾಢದ ಒಂದು ದಿನ”, ನಾಟಕಗಳನ್ನು ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೂ ಹರಿಶ್ಚಂದ್ರ ಭಟ್ ನಿರ್ದೇಶಿಸಿದ “ಶೋಧ”,, ಕಾಶಿನಾಥರ “ಅನುಭವ”, ಅಂಬರೀಶ ಜೊತೆ “ಗಿರಿಬಾಲೆ”, ಚಲನಚಿತ್ರದಲ್ಲಿ, “ಅಪ್ಸರಧಾರಾ” ,ವಿಶಾಲರಾಜ್ ನಿರ್ದೇಶನದ ...

READ MORE

Related Books