ನನ್ನ ಹಿಂದೂಧರ್ಮ

Author : ನಾ. ಸೋಮೇಶ್ವರ

Pages 292

₹ 350.00




Year of Publication: 2022
Published by: ಯಾಜಿ ಪ್ರಕಾಶನ
Address: ಯಾಜಿ ಪ್ರಕಾಶನ, ಉಮಾಮಹೇಶ್ವರ ಬಿಲ್ಡಿಂಗ್, ಸೀನಂಭಟ್ಟ ಕಚೇರಿ ಹತ್ತಿರ, ನಾಲ್ಕನೇ ವಾರ್ಡ್, ಪಟೇಲ ನಗರ, ಹೊಸಪೇಟೆ-583201, ಕರ್ನಾಟಕ
Phone: 7019637741, 94499 22800, 9481042400

Synopsys

ನನ್ನ ಹಿಂದೂಧರ್ಮ ನಾ ಸೋಮೆಶ್ವರ ಅವರ ಕೃತಿಯಾಗಿದೆ. ವ್ಯಾಖ್ಯೆಯಿಲ್ಲದ ಧರ್ಮ, ನಿರ್ದಿಷ್ಟ ಅವಧಿಯಲ್ಲಿ ಜನಿಸದ ಸನಾತನಧರ್ಮ, ಒಬ್ಬನಿಂದ ಆರಂಭವಾಗದ ಪ್ರಾಕೃತಿಕ ಧರ್ಮ, ನಿರ್ದಿಷ್ಟ ಗ್ರಂಥವಿರದ ಧರ್ಮ, ಆಕ್ರಮಣಶೀಲದವಲ್ಲದ ಧರ್ಮ, ಮತಾಂತರಕ್ಕೆ ಒಲವನ್ನು ತೋರದ ಧರ್ಮ. ಎల్ల ಜೀವರಾಶಿಗೂ ಒಳಿತನ್ನೇ ಬಯಸುವ ವಿಶ್ವಧರ್ಮ, ವಿದೇಶಿ ಆಕ್ರಮಣಗಳಾದಾಗ ಮತ್ತೆ ಮತ್ತೆ ಪುಟಿದೆದ್ದು ನಿಂತ, ನಿಲ್ಲುತ್ತಿರುವ ಧರ್ಮ- ಹಿಂದೂಧರ್ಮ. ಮನುಕುಲಕ್ಕೆ ವೇದ, ಉಪನಿಷತ್ತು, ಭಗವದ್ಗೀತೆ ಮುಂತಾದ ಧರ್ಮ-ಹಿಂದೂಧರ್ಮ ಆದಿ ಸಾಹಿತ್ಯವನ್ನು ನೀಡಿದ ಹಿಂದೂಧರ್ಮದ ಸಿದ್ಧಾಂತಗಳೆಲ್ಲ ಚೆನ್ನಿರಬಹುದೇನೋ! ಆದರೆ ದಿನನಿತ್ಯದ ಸಾಮಾಜಿಕ ಬದುಕಿನಲ್ಲಿ ಹೆಮ್ಮೆ ಪಡುವಂತಹ ವಿಚಾರಗಳು ಕಡಿಮೆ. ಹಿಂದೂಧರ್ಮದ ಯಜ್ಞಯಾಗಾದಿಗಳಲ್ಲಿ ನಡೆಯುತ್ತಿದ್ದ ವಿಪರೀತ ಹಿಂಸೆ, ಜೈನ ಮತ್ತು ಬೌದ್ಧ ಧರ್ಮಗಳ ಹುಟ್ಟಿಗೆ ಕಾರಣವಾದದ್ದು ಸುಳ್ಳಲ್ಲ. ಸಾಂಖ್ಯ ಶ್ವಪಚ, ಅಗಸ್ತ್ರಕಬ್ಬಿಲ, ದೂರ್ವಾಸ ಮಚ್ಚಿಗ, ದಧೀಚಿ ಕೀಲಿಗ, ಕಶ್ಯಪಕಮ್ಮಾರ, ರೋಮಜಕಂಚುಗಾರ, ಕೌಂಡಿಲ್ಯ ನಾವಿದನಾದರೂ ಅವರ ಬೌದ್ಧಿಕ ಪ್ರತಿಭೆಗೆ ಯಷಿಸ್ಥಾನವನ್ನು ನೀಡಿದ ಹಿಂದೂಧರ್ಮ, ಕರ್ಣನನ್ನು ಸೂತನೆಂದು ಹಳಿದದ್ದು, ಶಂಭೂಕನನ್ನು ಕೊಂದಷ್ಟು ಸೈದ್ಧಾಂತಿಕ ಶಿಥಿಲತೆಗೆ ಸಾಕ್ಷಿ ಎಂದು ನಾ ಸೋಮೆಶ್ವರ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ನಾ. ಸೋಮೇಶ್ವರ
(14 May 1955)

ನಾ. ಸೋಮೇಶ್ವರ  ಮೇ 14 1955 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ತಂದೆ ನಾರಪ್ಪ ಹಾಗೂ ತಾಯಿ ಅಂಜನಾ. ವಿದ್ಯಾರ್ಥಿಯಾಗಿದ್ದಾಗಲೇ 'ಜೀವನಂದಿ' ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸಿದ್ದರು. ತಮ್ಮ ಬಿ.ಎಸ್.ಸಿ ಪದವಿಯ ಬಳಿಕ, ಎಮ್.ಬಿ.ಬಿ.ಎಸ್ ಪದವಿಯನ್ನು ಗಳಿಸಿದರು. ವೃತ್ತಿಯಿಂದ ವೈದ್ಯರಾದ ಸೋಮೇಶ್ವರರು ಒಂದು ಫಾರ್ಮಸ್ಯೂಟಿಕಲ್ ಕಂಪೆನಿಗೆಸಲಹೆಗಾರರಾಗಿ ಕಾರ್ಯನಿರ್ವಹಿಸಿದರು.  ಡಾ. ಸೋಮೆಶ್ವರ ಚಂದನ ಟೆಲಿವಿಷನ್ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಎನ್ನುವ ಕನ್ನಡ ಕ್ವಿಜ್ ಕಾರ್ಯಕ್ರಮದ ರೂವಾರಿಯಾಗಿ ಪ್ರಸಿದ್ಧರಾದವರು. ವೃತ್ತಿಯಿಂದ ವೈದ್ಯರಾಗಿ ಪ್ರವೃತ್ತಿಯಿಂದ  ಲೇಖಕರಾಗಿ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ. ಅನಂತದೆಡೆಗೆ, ಓ ನನ್ನ ಚೇತನ, ದೈಹಿಕ ಸ್ವಚ್ಛತೆ, ತಲ್ಲಣಿಸದಿರು ಕಂಡ್ಯ ತಾಳು ಮನವೆ, ಅದೃಶ್ಯ ಲೋಕದ ಅಗೋಚರ ಜೀವಿಗಳು, ನಮ್ಮ ದಿನನಿತ್ಯದ ಆಹಾರ, ಹೀಗೆ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. 2003 ರಲ್ಲಿ ವೈದ್ಯ ಸಾಹಿತ್ಯ ಪ್ರಶಸ್ತಿ, ಡಾಕ್ಟರ್ಸ್ ಡೇ ಪ್ರಶಸ್ತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...

READ MORE

Related Books