ಕಾವಿಕಲೆ

Author : ಕೃಷ್ಣಾನಂದ ಕಾಮತ್

₹ 15.00




Year of Publication: 1993
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ಬೆಂಗಳೂರು

Synopsys

‘ಕಾವಿಕಲೆ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಕಲೆಯ ಕುರಿತ ಸಂಸ್ಕೃತಿಯ ವಿಚಾರದ ಬರವಣಿಗೆಯಾಗಿದೆ. ಈ ಕೃತಿಯು 11 ಅಧ್ಯಾಯಗಳನ್ನು ಒಳಗೊಂಡಿದೆ. ಕರಾವಳಿಯ ದೇವಾಲಯಗಳು, ಚಿತ್ರ ಶೈಲಿ, ಜಾಮಿತಿ ಚಿತ್ರಗಳು, ಸಮಕಾಲಿನ ವ್ಯಕ್ತಿಗಳು, ಗ್ರಾಮೀಣ ಶೈಲಿ, ಪಶು-ಪಕ್ಷಿಗಳು, ಹೆಂಗಳೆಯರು, ಹೂ ಬಳ್ಳಿಗಳು, ದ್ವಾರಪಾಲಕರು, ಆದಿ ಬೆಳವಣಿಗೆ, ವಿನಾಶದ ಹಾದಿಯಲ್ಲಿ ಇವೆಲ್ಲವನ್ನೂ ಒಳಗೊಂಡಿದೆ.

ಕೃತಿಯ ಬೆನ್ನುಡಿಯಲ್ಲಿ ಕೆಲವೊಂದು ವಿಚಾರಗಳು ಹೀಗೆ ಪ್ರಸ್ತಾಪಿತವಾಗಿದೆ : ಕಲೆಯ ದೃಷ್ಟಿಯಿಂದ ಪರಿಗಣಿಸಬಹುದಾದ ಆದರೆ ಹೆಚ್ಚು ಪ್ರಚಾರ ದೊರೆಯದೆ ಅವಜ್ಞೆಗೆ ಒಳಗಾದ ಕಲಾ ಪ್ರಕಾರಗಳನ್ನು ಗುರುತಿಸಿ ,ಬೆಳಕಿಗೆ ತರುವುದು ಪ್ರಸ್ತುತ ಅಕಾಡೆಮಿಯ ಯೋಜನೆಗಳಲ್ಲಿ ಮುಖ್ಯವಾದುದು. ಅಂತೆಯೇ, ಕರ್ನಾಟಕದ ಉತ್ತರ ಕರಾವಳಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ದೊರೆಯುವ ಕಾವಿಕಲೆಯ ಚಿತ್ರಗಳ ಬಗ್ಗೆ ಇದೇ ಪ್ರಥಮ ಬಾರಿಗೆ ಪುಸ್ತಕ ರೂಪದಲ್ಲಿ ಪರಿಚಯಿಸುತ್ತಿದ್ದೇವೆ. ಒಂದು ಕಾಲಕ್ಕೆ ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ, ಮನೆ-ಮನೆಗಳಲ್ಲಿ ಗುಡಿಗೋಪುರಗಳಲ್ಲಿ ಕಡ್ಡಾಯವೆಂಬಂತೆ ಇರುತ್ತಿದ್ದ ‘ಕಾವಿಕಲೆ’ ಇಂದು ಕಣ್ಮರೆಯಾಗುತ್ತಿವೆ, ವಿರಳವಾಗುತ್ತಿವೆ. ಇಂದಿನ ಆಧುನಿಕ ಕಟ್ಟಡಗಳಲ್ಲಿ ಈ ಬಗೆಯ ಚಿತ್ರಣಗಳಿಗೆ ಅವಕಾಶವೂ ಇಲ್ಲ. ಕಾಲನ ಆಘಾತಕ್ಕೆ ಸಿಕ್ಕಿ ಹಳೆಯದೆಲ್ಲವೂ ನಾಶವಾಗುತ್ತಿವೆ. ಅಳಿದುಳಿದಿರುವುದನ್ನಾದರೂ ಉಳಿಸಿ, ದಾಖಲಿಸಬೇಕಾಗಿದೆ. ಇಪ್ಪತ್ತು ವರ್ಷಗಳ ಹಿಂದಿನ ಸಂಗತಿ ನಾನು ಮೈಸೂರು ವಿಶ್ವವಿದ್ಯಾಲಯದ ಜಾನಪದ ವಸ್ತುಸಂಗ್ರಹಾಲಯದ ಕ್ಷೇತ್ರಕಾರ್ಯದಲ್ಲಿ ಉರಿಮಂಜಿನ ಅಂದರೆ ಕಾವಿಬಣ್ಣದ ಚಿತ್ರಗಳನ್ನು ನೋಡಿದ್ದೆ. ಕರ್ನಾಟಕದ ಯಾವ ಭಾಗದಲ್ಲೂ ಕಾಣದ ಈ ಕಲೆ ನನ್ನನ್ನು ಚಕಿತಗೊಳಿಸಿತು. ಅಲ್ಲಿ ಪ್ರಕಟಣೆಗಾಗಿ ಇರಿಸಿದ ಈ ಬಗೆಯ ಚಿತ್ರಗಳನ್ನು ಕೊಂಡಿದ್ದೆ ಎಂದು ವಿಶ್ಲೇಷಿಸಿದ್ದಾರೆ.

About the Author

ಕೃಷ್ಣಾನಂದ ಕಾಮತ್
(29 September 1934 - 20 February 2002)

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...

READ MORE

Related Books