ಹಾವು ಮತ್ತು ಏಣಿ

Author : ಸುಚೇತಾ ಗೌತಮ್

Pages 90

₹ 69.00




Published by: ಮೈಲಾಂಗ್‌ ಬುಕ್ಸ್

Synopsys

ಲೇಖಕಿ ಸುಚೇತಾ ಗೌತಮ್ ಅವರ ಕಾದಂಬರಿ ಕೃತಿʻಹಾವು ಮತ್ತು ಏಣಿʼ. ಪುಸ್ತಕದ ವಸ್ತುವು ಒಂದು ಕಡೆ ಇಂದಿನ ರಾಜಕೀಯಕ್ಕೆ ಕನ್ನಡಿ ಹಿಡಿದರೆ ಇನ್ನೊಂದು ಕಡೆ ಗಣಿಗಾರಿಕೆಯಿಂದ ಒಂದು ಸಮಾಜದ ಅಧಿಪತನಕ್ಕೆ ಕನ್ನಡಿ ಹಿಡಿಯುತ್ತದೆ. ಹಾಗಾಇ ಇದು ಒಂದು ಸಾಮಾಜಿಕ ಕಾದಂಬರಿಯೂ ಹೌದು ಪತ್ತೇದಾರಿ ಕಾದಂಬರಿಯೂ ಹೌದು. ತಗದೂರಿನ ಸುರೇಶ ಗೌಡನನ್ನು ಪೊಲೀಸರು ಕೊಂದಿದ್ದಾರೆ, ಅದರ ಬಗ್ಗೆ ತನಿಖೆ ನಡಿಸಿ ನಮಗೆ ನ್ಯಾಯ ಕೊಡಿಸ ಎಂದು ಅವನ ಕುಟುಂಬದ ಸದಸ್ಯರು ಬೆಂಗಳೂರಿನಲ್ಲಿ ಧರಣಿಗೆ ಕೂರುತ್ತಾರೆ. ಹೀಗೆ ಹೇಳುತ್ತಾ ಲಖಕರು ಓದುಗರಲ್ಲಿ ಕುತೂಹಲ ಮೂಡಿಸುತ್ತಾ ಕಾದಂಬರಿಯ ಹೇಳಲು ಕತೆಯನ್ನು ಶುರುಮಾಡುತ್ತಾರೆ. ಈ ಕತೆಯಲ್ಲಿ ತಗದೂರಿನ ಸುರೇಶ ಗೌಡ, ಪೊಲೀಸರು, ಎಮ್.ಎಲ್.ಎ ಮಲ್ಲೇಶಿ, ಕಡು ವೈರಿಗಳಾದ ಸೋಮಣ್ಣ ಹಾಗೂ ಪರಮೇಶ್ವರಪ್ಪ, ಪತ್ರಕರ್ತ ರಾಜೇಶ, ಸೈಬರ್ ಕ್ರೈಮ್ ಸ್ಪೆಷಲ್ ಆಫೀಸರ್ ವೇಣು ಹೀಗೆ ಒಂದರ ಮೇಲೊಂದರಂತೆ ಪಾತ್ರಗಳು ಕಾಣಿಸಿಕೊಳ್ಳುತ್ತಾ ಹೋದಂತೆ ಓದುಗನಲ್ಲಿ ಕತೆಯ ಬಗೆಗಿನ ಕುತೂಹಲ ಮತ್ತಷ್ಟು ಹೆಚ್ಚಾಗುತ್ತದೆ.

About the Author

ಸುಚೇತಾ ಗೌತಮ್

ಸುಚೇತಾ ಗೌತಮ್ ಅವರು ಎಂ. ಟೆಕ್ ಪದವೀಧರೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಸದ್ಯ, ಸಾಫ್ಟ್ ವೇರ್ ಕಂಪೆನಿಯಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದಾರೆ. ಸೈಬರ್ ಕ್ರೈಮ್ ಸರಣಿ, ವೈಜ್ಞಾನಿಕ ಹಾಗೂ ಸಾಮಾಜಿಕ ಕಥೆ, ಕಾದಂಬರಿಗಳನ್ನು ತರಂಗ, ಸುಧಾ, ಕರ್ಮವೀರ, ಕಸ್ತೂರಿ ಮತ್ತು ಇತರೆ ವಾರ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಪ್ರವಾಸ ಕಥನಗಳನ್ನುಬ್ಲಾಗ್ ( https://suchetagautham.blogspot.com) ನಲ್ಲಿ ಬರೆಯುತ್ತಾರೆ. “ಮೂವತ್ತು ಸಾವಿರ ವರ್ಷಗಳ ನಂತರ ಮತ್ತು ಇತರ ಕಥೆಗಳು” ಅವರ ಸಾಮಾಜಿಕ, ವೈಜ್ಞಾನಿಕ ಕಥೆಗಳ ಹಾಗೂ ಐಟಿ ಕ್ಷೇತ್ರದಲ್ಲಿ ನಡೆಯುವ ಒಂದು ವಿಭಿನ್ನ ಪತ್ತೇದಾರಿ ಕಥಾ ಸಂಕಲನ. "BLR ಝೀರೋ” ಮತ್ತು “ಬೈನರಿ” ಸೈಬರ್ ಕ್ರೈಮ್ ಸರಣಿಯ ಮೊದಲ ಹಾಗೂ ಎರಡನೆಯ ಕಿರು ...

READ MORE

Related Books