ರೋಚಕಥೆ

Author : ಸಿ.ಎಸ್. ನಾಗೇಶ್ ಕುಮಾರ್

Pages 120

₹ 150.00




Year of Publication: 2021
Published by: ನ್ಯೂ ವೇವ್ ಬುಕ್ಸ್
Phone: 9840564240

Synopsys

ಕತೆಗಾರ ನಾಗೇಶ್ ಕುಮಾರ್ ಸಿ.ಎಸ್ ಅವರ ಪತ್ತೇದಾರಿ ಕಾದಂಬರಿ ರೋಚಕತೆ. ನಾಲ್ಕು ಪತ್ತೇದಾರಿ ಸಸ್ಪೆನ್ಸ್ ಕಥೆಗಳು ಈ ಕೃತಿಯಲ್ಲಿವೆ. 1.ನಾನವಳಲ್ಲ!- ಪೆರಿ ಮೇಸನ್ ಕಾದಂಬರಿ ಅನುಕರಣೆ. ಕೋರ್ಟ್ ರೂಂ ಮಿಸ್ಟರಿ. ಲಾಯರ್ ಪತ್ತೇದಾರಿ! ಇಬ್ಬರು ಯುವತಿಯರಾದರೆ ಐಡೆಂಟಿಟಿ ಸ್ವಿಚ್, ಕೊಲೆಗೆ ಯಾರು ಕಾರಣ? , 2.ರೈಲು ಬಿಟ್ಟೆವು- ರೈಲಿನಲ್ಲಿ ಒಬ್ಬ ನಕಲು ವೇಷಧಾರಿ.‌ ಆದರೆ ಅವನು ಕಳ್ಳನೋ, ಪೋಲೀಸೊ... ಕಣ್ಣಾಮುಚ್ಚಾಲೆ! 3. ದಾರಿ ತಪ್ಪದ ಮಗಳು - ಸಾಮಾಜಿಕ ನಾಯಕಿ ಪ್ರಧಾನ ಕಥೆಯಲ್ಲಿ ಮನೆ ಗೌರವ ಉಳಿಸಬಲ್ಲಳೆ ಚಾಣಾಕ್ಷ ಮಗಳು?... ಹೊಸ ಬಗೆಯ ಪತ್ತೇದಾರಿ ! ಹಾಗೂ 4ನೇಯದ್ದು ಸರಿದ ಪರದೆ- ಸಿನೆಮಾ ಥಿಯೇಟರಿನಲ್ಲಿ ಶೂಟ್ ಮಾಡಿದ್ದು ಚಿತ್ರದಲ್ಲಿ. ಆಗಲೇ ಗುಂಡು ತಗುಲಿ ಸತ್ತಿದ್ದು ಪ್ರೇಕ್ಷಕನೊಬ್ಬ... ಹೇಗೆ? ಏನು?... ಜರ್ನಲಿಸ್ಟ್ ಪತ್ತೇದಾರಿ!.

About the Author

ಸಿ.ಎಸ್. ನಾಗೇಶ್ ಕುಮಾರ್

ಹವ್ಯಾಸಿ ದ್ವಿಭಾಷಾ ಬರಹಗಾರ ನಾಗೇಶ್ ಕುಮಾರ್ ಸಿ.ಎಸ್‌. ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಚೆನ್ನೈ ನಗರದ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಬರೆದ ಸಣ್ಣ ಕತೆ, ಕಿರು ಕಾದಂಬರಿಗಳು ತರಂಗ, ತುಷಾರ ಉತ್ಥಾನ, ಸುಧಾ, ಕರ್ಮವೀರ ಸೇರಿದಂತೆ ಹಲವಾರು ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ರಕ್ತಚಂದನ, ನಾಳೆಯನ್ನು ಗೆದ್ದವನು ಇವರ ಪ್ರಮುಖ ಕೃತಿಗಳು. ‘ಕರಾಳ ಗರ್ಭ’ ಅವರ ಆಡಿಯೋ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿದ್ದು ಕೇಳುಗರಿಂದ ಮೆಚ್ಚುಗೆ ಪಡೆದಿದೆ. ...

READ MORE

Related Books