ಜಾಲದಲ್ಲಿ ಸಿಲುಕಿದ ಜಾಹ್ನವಿ

Author : ಕಿಗ್ಗಾಲು. ಎಸ್. ಗಿರೀಶ್

Pages 130

₹ 125.00




Year of Publication: 2021
Published by: ಶೀಲಾ ಪ್ರಕಾಶನ
Address: ಮೈಸೂರು.

Synopsys

ಲೇಖಕ ಕಿಗ್ಗಾಲು. ಎಸ್. ಗಿರೀಶ್ ಅವರ ಮೊದಲನೆಯ ಪತ್ತೆದಾರಿ ಕಾದಂಬರಿ ಮತ್ತು ಹತ್ತನೆಯ ರಚನೆಯಿದು. ಸುಮಾರು ಹನ್ನೆರಡು ವರ್ಷಗಳ ಹಿಂದೆ,ಅದೊಂದು ಬೆಳಗಿನ ಜಾವ, ಆ ಬಸ್ ನಿಲ್ದಾಣದ ಬಳಿ ಶೌಚಕ್ಕೆಂದು ಹೋದ ಹರೆಯದ,ಚೆಂದದ ಹೆಣ್ಣೊಂದು ಶೌಚಾಲಯದ ಬಳಿ ಕುಸಿದುಬಿದ್ದು ಶವವಾಗುತ್ತಾಳೆ. ಅವಳು ಯಾರು? ಅವಳೇಕೆ ಅಲ್ಲಿಗೆ ಬಂದಳು? ಅದು ಹೃದಯಾಘಾತವೇ ಅಥವಾ ಕೊಲೆಯೇ? ಅವಳ ಬಳಿ ಇದ್ದ ಚಿನ್ನದ ಆಭರಣಗಳು ಏನಾದುವು? ಅನಂತರ ಶವವು ಏನಾಯಿತು? ಅವಳ ಜೊತೆ ಹಿಂದಿನ ರಾತ್ರಿ ಹೋಟೆಲ್ ಹನಿಮೂನ್ ನಲ್ಲಿ ಇದ್ದವರು ಯಾರು? ಮುಖದಲ್ಲಿ ಅತ್ಯಾಕರ್ಷಕ ಕಿರು ನಗುವನ್ನು,ತನಗೆ ಬೇಕಾದಾಗ, ಬೇಕಾದಂತೆ, ಬೇಕಾದವರೊಡನೆ ಮೂಡಿಸಿಕೊಳ್ಳಲು ಶಕ್ತನಾದ ಆ ಕೊಲೆಗಾರ ಯಾರು? ಅವಳನ್ನು ಕೊಲೆಮಾಡಿದ ಅಪರಾಧಿಯನ್ನು ಪತ್ತೇದಾರ ರಾಮನಾರಾಯಣ ಕೊಲೆಯಾದ ಕೆಲವೇ ಗಂಟೆಗಳೊಳಗೆ ಹೇಗೆ ಪತ್ತೆಮಾಡುತ್ತಾನೆ? ಈ ಎಲ್ಲ ಕುತೂಹಲಕಾರೀ ಅಂಶಗಳುಳ್ಳ ಪತ್ತೇದಾರಿ ಕಾದಂಬರಿ ಜಾಲದಲ್ಲಿ ಸಿಲುಕಿದ ಜಾಹ್ನವಿ. ಸಭ್ಯತೆಯ ಚೌಕಟ್ಟಿನೊಳಗೆ ರಚಿತಗೊಂಡ ಈ ಕೃತಿಯು ಕೆಳಮಧ್ಯಮವರ್ಗದ ಮಹಿಳೆಯರನ್ನು ವಿಕೃತ ಮನಸ್ಸಿನವರಿಂದ ಹೇಗೆ ಬಲೆಗೆ ಕೆಡವಲಾಗುತ್ತದೆ ಎಂಬ ಅಂಶವನ್ನು ಒಳಗೊಂಡಿದೆ. ವಿವಾಹದ ಪ್ರಾಯಕ್ಕೆ ಬರುವ ಮಹಿಳೆಯರು ಕೃಷಿಕರನ್ನು ಮದುವೆಯಾಗಲು ಬಯಸದೆ,ಸಣ್ಣ ಸಂಬಳಕ್ಕೆ ಪೇಟೆಯಲ್ಲಿ ಕೆಲಸಕ್ಕೆ ಸೇರುತ್ತಾರೆ,ಅಲ್ಲಿನ ಥಳುಕು ಜೀವನಕ್ಕೆ ಮಾರುಹೋಗುತ್ತಾರೆ.ಇಂತಹವರನ್ನು ಬಹಳ ಸುಲಭದಲ್ಲಿ ಮೋಸಮಾಡುವವರು ನಮ್ಮ ಸುತ್ತಲೂ ತುಂಬಿರುತ್ತಾರೆ. ಇವರಿಗೆಲ್ಲ ಈ ಕಥೆಯು ಎಚ್ಚರಿಕೆಯ ಗಂಟೆಯಾಗಬಹುದು. ನೈಜಘಟನೆಯನ್ನು ಆಧಾರವಾಗಿರಿಸಿಕೊಂಡು,ಅದಕ್ಕೆ ಕಲ್ಪನೆಯ ಉಡುಪು ತೊಡಿಸಿ,ಓದುಗರ ಮುಂದೆ ಇಡಲಾಗಿದೆ.

About the Author

ಕಿಗ್ಗಾಲು. ಎಸ್. ಗಿರೀಶ್
(24 December 1951)

ಕೊಡಗು ಜಿಲ್ಲೆಯ ಕಿಗ್ಗಾಲು ಗ್ರಾಮದ ನಿವಾಸಿ ಕಿಗ್ಗಾಲು ಗಿರೀಶ್ ರವರು 1951ರ ಡಿಸೆಂಬರ್ 24 ರಂದು ಶ್ರೀನಿವಾಸ ರಾಜಲಕ್ಷ್ಮಿ ಹವ್ಯಕದಂಪತಿಗಳ ದ್ವಿತೀಯ ಪುತ್ರನಾಗಿ ಕಿಗ್ಗಾಲುವಿನಲ್ಲಿ ಜನಿಸಿದರು. ಮೂರ್ನಾಡುವಿನಲ್ಲಿ ಪ್ರಾಥಮಿಕ ಹಾಗೂ ಪ್ರೌಡಶಿಕ್ಷಣವನ್ನು ಪಡೆದ ಇವರು ಮಡಿಕೇರಿಯ ಅಂದಿನ ಸರಕಾರೀ ಕಾಲೇಜಿನಲ್ಲಿ ಬಿ.ಎಸ್ ಸಿ ಪದವಿಯನ್ನು ಗಳಿಸಿದರು.ಅನಂತರ,ಭಾರತೀಯ ವಾಯುಪಡೆಗೆ ಆಯ್ಕೆಯಾಗಿ,ಗುಜರಾತಿನ ಭುಜ್ ಪಟ್ಟಣದಲ್ಲಿ ವಾಯುಸೇನಾ ಕರ್ತವ್ಯಕ್ಕಿಳಿದರು. ವಿದ್ಯಾರ್ಥಿಯಾಗಿರುವಾಗಲೇ ಸುಧಾ,ಪ್ರಜಾವಾಣಿ ಮುಂತಾದ ನಿಯತಕಾಲಿಕಗಳಿಗೆ ಬರೆಹಗಳನ್ನು ನೀಡುತ್ತಿದ್ದ ಇವರು ವಾಯುಪಡೆಯಲ್ಲಿಯೂ ಲೇಖನಗಳನ್ನು ಬರೆಯುತ್ತಿದ್ದರು.ಆಗ್ರಾ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲಭಾಷೆಯಲ್ಲಿ ಎಮ್ ಏ ಪದವಿ ಗಳಿಸಿ,ಹದಿನೇಳು ವರ್ಷ ಸೇವೆಮಾಡಿ ಅನಂತರ ಸೇನೆಯಿಂದ ನಿವೃತರಾದರು. ಮಡಿಕೇರಿ ಆಕಾಶವಾಣಿಯಲ್ಲಿ ...

READ MORE

Related Books