ಕಲ್ಲ ಪಾರಿವಾಳಗಳ ಬೇಟ

Author : ಎಸ್. ಮಂಜುನಾಥ್ (ಜೀವಯಾನ)

Pages 112

₹ 60.00




Year of Publication: 2005
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕವಿ ಮಂಜುನಾಥರ ಇತನಕದ ಹಲವು ಸಂಕಲನಗಳಲ್ಲಿ ಅವರ ಕವಿತಾಸಾಧನೆ ನಡೆದಿದ್ದು, ಅದು ಸಹೃದಯರ ಗಮನವನ್ನು ಸೆಳೆದಿತ್ತು. ಈ ಸಂಕಲನದಲ್ಲಿ ಅವರು, ಹಳೆಯ ಸಾಧನೆಗಳಿಂದ ಚಿಮ್ಮಿ ಹೊಸ ಹಂತದ ಸಿದ್ಧಿಗೆ ಬಂದು ನಿಂತಿರುವಂತೆ ಕಾಣುತ್ತದೆ... ಇಪ್ಪತ್ತನೇ ಶತಮಾನದ ಕನ್ನಡ ಸಾಹಿತ್ಯದಲ್ಲಿ ಮುರು ನಾಲ್ಕು ಅಲಿಗಳ ಉಬ್ಬರವಿಳಿತ ಕಂಡಿದ್ದೇವೆ... ಈ ದಿನಗಳಲ್ಲಿ ಅನೇಕ ಹಳೆ-ಹೊಸ ಬರಹಗಾರರು ಸಾಕಷ್ಟು ಸಂಖ್ಯೆಯಲ್ಲಿ ಒಳ್ಳೊಳ್ಳೆಯ ಕವಿತೆಗಳನ್ನು ಬರೆಯುತ್ತಿದ್ದಾರೆ... ಈ ಹೊಸ ಕವಿತೆಗಳ ಹಿನ್ನೆಲೆಯಲ್ಲಿ ಮಂಜುನಾಥರು ಬಹುಗಣ್ಯರಷ್ಟೇ ಅಲ್ಲ, ಅನನ್ಯರು. ಅವರು ಕವಿತೆಯೊಂದಕ್ಕೆ ತನ್ನನ್ನು ಪೂರ್ತಾ ಮಿಸಲು ಮಾಡಿಕೊಂಡಿರುವುದೂ ಅನನ್ಯತೆಯೇ. -ಕೆ. ವಿ. ಸುಬ್ಬಣ್ಣ (ಮುನ್ನುಡಿಯಿಂದ)

About the Author

ಎಸ್. ಮಂಜುನಾಥ್ (ಜೀವಯಾನ)

ಕಾವ್ಯ ಜೋಗಿ ಎಂದೆ ಹೆಸರುವಾಸಿಯಾದ ಎಸ್. ಮಂಜುನಾಥ್ ಅವರು 1960 ಜೋಗದಲ್ಲಿ ಜನಿಸಿದರು. ತಾಳಗುಪ್ಪ ಹಾಸನ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಇಂಗ್ಲಿಷ್ ಎಂ.ಎ ಪದವೀಧರರು.  ’ಹಕ್ಕಿ ಪಲ್ಟಿ', 'ಬಾಹು ಬಲಿ' 'ನಂದ ಬಟ್ಟಲು' 'ಮೌನದ ಮಣಿ' ಕಲ್ಲ ಪಾರಿವಾಳಗಳ ಬೇಟ' 'ಜೀವಯಾನ' ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವರಿಗೆ ಮುದ್ದಣ ಪ್ರಶಸ್ತಿ, ಪು.ತಿ.ನ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿಗಳು ದೊರಕಿವೆ. ಇವರ ಮತ್ತೊಂದು ಕೃತಿ ‘ಸುಮ್ಮನಿರುವ ಸುಮಾನ’ ಎಂಬ ತಾವೋ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.   ...

READ MORE

Related Books