ಸಂಸಾರದಲ್ಲಿ ಸನಿದಪ

Author : ಕೆ.ವಿ. ಅಕ್ಷರ

Pages 60

₹ 45.00




Year of Publication: 2002
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಈ ನಾಟಕವು ಮೇಲ್ನೋಟಕ್ಕೆ ಒಂದು ಸರಳ ಸಾಂಸಾರಿಕ ಹಾಸ್ಯ ನಾಟಕದಂತೆ, ಗುರುತುಗಳು ಬದಲಾದ ಗಡಿಬಿಡಿಯಿಂದ ಉದ್ಭವಿಸುವ ಒಂದು ಸಿದ್ಧ ಪ್ರಹಸನವೆಂಬಂತೆ ಕಾಣುತ್ತದೆ. ಆದರೆ, ತುಸು ಪರಿಶೀಲಿಸಿ ನೋಡಿದರೆ, ಇದು ಮೇಲ್ನೋಟಕ್ಕೆ ಕಾಣುವಂತೆ, ಕೇವಲ ನಗಿಸುವುದನ್ನೇ ಮೂಲಬಂಡವಾಳ ಮಾಡಿಕೊಂಡು ‘ಅ-ರಾಜಕೀಯ’ ಕೃತಿಯೂ ಅಲ್ಲವೆಂಬುದನ್ನು ನಮ್ಮ ಗಮನಕ್ಕೆ ಬರುತ್ತದೆ. ನಿಜವಾಗಿ ಈ ನಾಟಕವು, ಸಾದಾ ರಾಜಕೀಯ ನಾಟಕಗಳಿಹಿಂತ ಭಿನ್ನವಾದ ಇನ್ನೊಂದು ರೀತಿಯ ರಾಜಕಾರಣವನ್ನು ಕೇಂದ್ರೀಕರಿಸಿಕೊಂಡಿದೆ- ಅದು ಸಾಮಾಜಿಕ ವ್ಯಾಪ್ತಿಯ ವಿಶಾಲ ರಾಜಕಾರಣವಲ್ಲ; ಕೌಟುಂಬಿಕ ವ್ಯಾಪ್ತಿಯ ವೈಯಕ್ತಿಕ ರಾಜಕಾರಣ. ಈ ರಾಜಕಾರಣವು ಸಮಾಜ, ದೇಶ, ಅಧಿಕಾರ ಮೊದಲಾದ ವಿಷಯಗಳ ಬಗ್ಗೆ ಸೂಕ್ಷ್ಮದರ್ಶಕದಲ್ಲಿಟ್ಟುಕೊಂಡು ಆ ಮೂಲಕವೇ ವಿಶಾಲವಾದ ಎಲ್ಲ ಸಂಗತಿಗಳ ಪ್ರತಿಫಲವನ್ನು ಗ್ರಹಿಸಲು ಹೊರಡುತ್ತದೆ.

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books