ವಿಶ್ವಾತ್ಮಕ ದೇಶಭಾಷೆ

Author : ಕೆ.ವಿ. ಅಕ್ಷರ

Pages 176

₹ 160.00




Year of Publication: 2015
Published by: ಅಕ್ಷರ ಪ್ರಕಾಶನ
Address: ಹೆಗ್ಗೋಡು, ಹೊನ್ನೇಶ್ವರ ಅಂಚೆ, ಸಾಗರ ತಾಲೂಕು, ಶಿವಮೊಗ್ಗ - 577417
Phone: 9480280401 / 08183-265476

Synopsys

ಕನ್ನಡ ಭಾಷೆಯು ತನ್ನ ಸಾಹಿತ್ಯವನ್ನು ನಿರ್ಮಿಸಿಕೊಂಡ ಆದಿಕಾಲವನ್ನು ಕೇಂದ್ರವಾಗಿಟ್ಟುಕೊಂಡಿರುವ ಪ್ರಸ್ತುತ ಪುಸ್ತಕದ ಎರಡು ಲೇಖನಗಳು `ದೇಶಭಾಷಾ ನಿರ್ಮಾಣ'ವೆಂಬ ಪ್ರಕ್ರಿಯೆಯನ್ನು ಕುರಿತು ಹೊಸ ಸಿದ್ಧಾಂತನಿರ್ಮಾಣಕ್ಕೆ ತೊಡಗುತ್ತವೆ. ಜತೆಗೆ, ಈ ಕಾಲದ ಕನ್ನಡಕ್ಕೂ ಮತ್ತು ಅದಕ್ಕೆ ಭಿತ್ತಿಯನ್ನು ಒದಗಿಸಿಕೊಟ್ಟ ವಿಶ್ವಾತ್ಮಕ ವ್ಯಾಪ್ತಿಯ ಸಂಸ್ಕ ತಕ್ಕೂ ನಡುವಿನ ಸಂಬಂಧಗಳು ಏನು, ಅವೆರಡು ಭಾಷೆಗಳ ನಡುವಣ ವ್ಯವಹಾರಗಳು ಯಾವ ಮಾದರಿಯವು -- ಮೊದಲಾದ ಪ್ರಶ್ನೆಗಳನ್ನೂ ಈ ಲೇಖನಗಳು ತುಂಬ ಹೊಸ ಬೆಳಕಿನಲ್ಲಿ ಕಾಣಲು ಪ್ರಯತ್ನಿಸಿವೆ. ಹಾಗೂ ಈ ಎಲ್ಲ ಚರ್ಚೆಗಳ ಮೂಲಕ ಇವತ್ತು ಎದುರಾಗಿರುವ ಜಾಗತೀಕರಣವೆಂಬ ವಿದ್ಯಮಾನಕ್ಕೂ ನಾವು ತುಂಬ ಹೊಸದೇ ಆದ ನೆಲೆಯಲ್ಲಿ ಪ್ರತಿಸ್ಪಂದಿಸುವುದು ಸಾಧ್ಯವೆ -- ಎಂಬುದನ್ನು ಪರೋಕ್ಷವಾಗಿ ಪರಿಶೀಲಿಸುವ ಒಂದು ಮಹತ್ತ್ವಾಕಾಂಕ್ಷೆಯೂ ಕೂಡಾ ಈ ಎರಡು ಲೇಖನಗಳ ಹಿನ್ನೆಲೆಯಲ್ಲಿ ಅಡಕವಾಗಿದೆ.

About the Author

ಕೆ.ವಿ. ಅಕ್ಷರ

ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕ. ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.  ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ. ...

READ MORE

Related Books