ಕರ್ತಾರನಿಗೊಂದು ಕಿವಿಮಾತು

Author : ಟಿ. ಆರ್. ಅನಂತರಾಮು

Pages 110

₹ 90.00




Year of Publication: 2003
Published by: ವಿಜ್ಞಾನ ಪುಸ್ತಕ ಪ್ರಕಾಶನ
Address: ನಂ. 277, 5ನೇ ಅಡ್ಡರಸ್ತೆ, ವಿಧಾನಸೌಧ ಬಡಾವಣೆ (ಕವಿಧಾಮನಗರ), ಬೆಂಗಳೂರು560 058

Synopsys

`ಕರ್ತಾರನಿಗೊಂದು ಕಿವಿಮಾತು’ ಹದಿನಾಲ್ಕು ವಿಜ್ಞಾನ ಲೇಖನಗಳ ಸಂಚಯ. ಇದರಲ್ಲಿ ವೈವಿಧ್ಯಮಯ ಲೇಖನಗಳಿವೆ. ಕರ್ತಾರನಿಗೊಂದು ಕಿವಿಮಾತು ಲೇಖನದಲ್ಲಿ ಮನುಷ್ಯನ ಅಂಗಾಂಗಗಳನ್ನು ಇನ್ನಷ್ಟು ನೇರ್ಪುಗೊಳಿಸಿದ್ದರೆ, ಅವನ ನಿತ್ಯ ಬದುಕಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂಬ ವಿಶೇಷ ತರ್ಕವಿದೆ. ಜೈವಿಕ ಯುದ್ಧ, ನಿಸರ್ಗದಲ್ಲಿ ನೀರಿನ ಸಮಸ್ಯೆ, ಪ್ರಾಣ ಪ್ರಯೋಗಾಲಯದಲ್ಲಿ ಅವುಗಳಿಗಾಗುವ ಹಿಂಸೆ, ಆಕಾಶದಿಂದ ಎರಗಿಬರುವ ಉಲ್ಕೆಗಳು ತರುವ ಆತಂಕ, ಮಂಗಳನಲ್ಲಿರುವ ಸದ್ಯದ ಸ್ಥಿತಿ, ಬೆಂಗಳೂರಿನ ಎಡೆಯೂರಿನಲ್ಲಿ ಪಚ್ಚೆ ಗಣಿ ಇದ್ದ ವಿಸ್ಮಯಕಾರಿ ವಿಚಾರ, ನ್ಯೂಟನ್ ಮತ್ತು ಷೇಕ್ಸ್ ಪಿಯರ್‍ಗೆ ಏಕೆ ಅಷ್ಟು ಮಹತ್ವ ಎನ್ನುವ ವಿಚಾರ, ಚರ್ಮ ಸೃಷ್ಟಿಸುವ ಕಪ್ಪು-ಬಿಳುಪಿನ ವಿವಾದ, ಲಾಲ್‍ಬಾಗ್ ಕಲ್ಲು ಕೇಳುವ ಕಥೆ, ಹಾಗೆಯೇ ಮನುಷ್ಯ ವಿಪರೀತವಾಗಿ ಬಯಸುವ ಚಿನ್ನ ಕುರಿತು ಅಮೂಲ್ಯ ಮಾಹಿತಿಗಳು ಈ ಸಂಗ್ರಹದಲ್ಲಿ ಸೇರಿವೆ. ಈ ಒಂದೊಂದೂ ಕ್ಷೇತ್ರಗಳ ನಿರೂಪಣೆ ಓದುಗರಿಗಿದೆ. ಆಪ್ತವಾಗುವ ಶೈಲಿಯಲ್ಲಿದೆ. ಈ ಕೃತಿಗೆ 2003ರ ಅತ್ಯುತ್ತಮ ವಿಜ್ಞಾನ ಕೃತಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ನೀಡಿ ಗೌರವಿಸಿದೆ.

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books