ಕಂದನ ಕವಿತೆ

Author : ಸಿ.ಎಂ.ಗೋವಿಂದರೆಡ್ಡಿ

Pages 126

₹ 80.00




Year of Publication: 2002
Published by: ಅಮರಾವತಿ ಪ್ರಕಾಶನ
Address: 5ನೇ ಮೇನ್‌, ೨ನೇ ಕ್ರಾಸ್‌, ಆದರ್ಶನಗರ, ಮಾಲೂರು- 563130
Phone: 9448587027

Synopsys

‘ಕಂದನ ಕವಿತೆ’ ಮಕ್ಕಳ ಪದ್ಯಗಳ ಸಂಕಲನ. ಮಕ್ಕಳ ಮನಸ್ಸಿಗೆ ಹಿತವಾಗುವಂತಹ ಸಣ್ಣ ಸಣ್ಣ ಪದ್ಯಗಳನ್ನು ಆಯ್ದು ಇಲ್ಲಿ ಸಂಕಲಿಸಲಾಗಿದೆ. ವೈವಿಧ್ಯತೆ ಇರಲೆಂದು ಹನ್ನೊಂದು ಪಟ್ಟ ಕವನಗಳು, ಇಪ್ಪತ್ಮೂರು ಶಿಶು ಪ್ರಾಸಗಳು ಹಾಗೂ ಅರವತ್ನಾಲ್ಕು ಹನಿ ಪದ್ಯಗಳನ್ನು ಒಟ್ಟು ಗೂಡಿಸಿ ಕೊಡಲಾಗಿದೆ.

About the Author

ಸಿ.ಎಂ.ಗೋವಿಂದರೆಡ್ಡಿ
(11 August 1958)

ಮಕ್ಕಳ ಸಾಹಿತಿ ಎಂದು ಹೆಸರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರು ಮಕ್ಕಳ ಸಾಹಿತ್ಯದ ಜೊತೆಗೆ ಇತರೆ ಸಾಹಿತ್ಯದಲ್ಲೂ ಕೃತಿಗಳನ್ನು ರಚಿಸಿದ್ದಾರೆ. ಇವರು ೧೯೫೮ರ ಆಗಸ್ಟ್ ೧೧ರಂದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಚನ್ನಿಗರಾಯಪರ ಗ್ರಾಮದ ಮುನಿಸ್ವಾಮಿರೆಡ್ಡಿ ಮತ್ತು ಸುಬ್ಬಮ್ಮ ದಂಪತಿಗಳ ಮಗನಾಗಿ ಜನಿಸಿದರು. ತಾಳಕುಂಟೆ, ಲಕ್ಕೂರು ಮತ್ತು ಮಾಲೂರಿನಲ್ಲಿ ಕ್ರಮವಾಗಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದು, ಮೈಸೂರು ವಿಶ್ವವಿದ್ಯಾಲಯದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದುಕೊಂಡದ್ದಲ್ಲದೆ ‘ಕೋಲಾರಜಿಲ್ಲೆಯ ಜಾತ್ರೆಗಳು’ ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನೂ ಪಡೆದರು. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿ, ಪ್ರೌಢಶಾಲಾ ...

READ MORE

Excerpt / E-Books

ಹಸಿರು ಗಿಡ ಮರಗಳ ಹಸಿರು ಇಳೆಯ ಜೀವಿಯುಸಿರು ಹಸಿರಳಿದರೆ ಉಳಿಯದು ಧರೆ ಎಂಬ ಸತ್ಯ ತಿಳಿದಿರು ಕಪ್ಪು ಹಸುವು ಇರಲು ಕಪ್ಪು ಕೊಡುವ ಹಾಲು ಬಿಳಿಪು ಕಪ್ಪು ಚೆಂದ ಇಲ್ಲ ಎನಲು ಅದುವೆ ನಮ್ಮ ತಪ್ಪು ಎಲ್ಲಿರೊಂದೆ ಜಾತಿ ಬೇರೆಯಾದರೂ ಬಣ್ಣ ಬೇರೆಯಾದರೂ ಹಳ್ಳಿಯಿರಲಿ ದಿಲ್ಲಿಯಿರಲಿ ಕೆಂಪು ಹರಿವ ನೆತ್ತರು! ಇಲಿ ಒಂದು ಪುಟ್ಟ ಇಲಿ ಕುಣಿಸಿ ತನ್ನ ತಲಿ ಮೈಯ ಮೇಲೆ ಹರಿದಾಡಲು ಚಕ್ಕಲಿಗಿಲಿಗಿಲಿ! ಬೆಕ್ಕು ನಮ್ಮ ಮನೆಯ ಬೆಕ್ಕು ಅದಕೆ ಬಹಳ ಸೊಕ್ಕು ತನಗೆ ಇಹುದು ಎನ್ನುತಿಹುದು ಇಲಿಯ ಹಿಡಿವ ಹಕ್ಕು! ಒಳ್ಳೆತನ ಮಾತು ಒಳಿತು ಇದ್ದರೆ ಒಳ್ಳೆತನವು ಇದ್ದರೆ ಬದುಕಿನಲ್ಲಿ ಎಂದೂ ಕೂಡ ಬರದು ಯಾವ್ದೇ ತೊಂದರೆ ಇಬ್ಬನಿ ಹುಲ್ಲ ಮೇಲೆ ಇಬ್ಬನಿ ಹೇಗೆ ಬಂತು ಹೇಳು ನೀ ಬಡವ ಪಡುವ ಬವಣೆ ಕಂಡು ಭೂಮಿ ಸುರಿವ ಕಂಬನಿ! ಗುಣ ಹುಣಸೆ ಮರದಿ ಪುಟ್ಟ ಕಾಯಿ ಕಿತ್ತುಬಿಟ್ಟ ತಿಂದು ಹುಳಿ ಬಂದು ಬಳಿ ಅಂದ-‘ಕಾಯಿ ಸೊಟ್ಟ!’

Related Books