ನೆಲ ಮುಗಿಲು

Author : ನಾರಾಯಣ ಯಾಜಿ

Pages 182

₹ 220.00




Year of Publication: 2023
Published by: ಯಾಜಿ ಪ್ರಕಾಶನ
Address: ಯಾಜಿ ಪ್ರಕಾಶನ, ಉಮಾಮಹೇಶ್ವರ ಬಿಲ್ಡಿಂಗ್, ಸೀನಂಭಟ್ಟ ಕಚೇರಿ ಹತ್ತಿರ, ನಾಲ್ಕನೇ ವಾರ್ಡ್, ಪಟೇಲ ನಗರ, ಹೊಸಪೇಟೆ-583201, ಕರ್ನಾಟಕ
Phone: 7019637741, 94499 22800, 9481042400

Synopsys

'ನೆಲ ಮುಗಿಲು' ಅಂಕಣ ಬರಹದಿಂದಲೇ ಜನಪ್ರಿಯರಾದ ಆತ್ಮೀಯ ನಾರಾಯಣ ಯಾಜಿ ಸಾಲೆಬೈಲುರವರು ತಮ್ಮ ಗಂಭೀರ ಲೇಖನಗಳಿಂದ ಓದುಗರ ಗಮನಸೆಳೆದವರು.ಪಾರಲೌಕಿಕದಿಂದ ಹಿಡಿದು ವರ್ತಮಾನದ ಲೌಕಿಕ ಪ್ರಪಂಚವನ್ನು, ಇತಿಹಾಸ ಸಾಹಿತ್ಯದಂತಹ ಸಾಂಸ್ಕ್ರತಿಕ ವಿಷಯ-ವಿಚಾರಗಳನ್ನು ಭಾರತೀಯ ಚಿಂತನಾಕ್ರಮದಲ್ಲಿ ಹೊಸ ವಿನ್ಯಾಸ ಚೌಕಟ್ಟಿನೊಂದಿಗೆ ಅನೂಹ್ಯ ಆಯಾಮದಲ್ಲಿ ನೋಡಿದವರು ನಾರಾಯಣ ಯಾಜಿಯವರು.ಈ ಕೃತಿಯಲ್ಲಿಯ ಪ್ರಬಂಧಗಳು ವಿದ್ವಾಂಸರಿಗೂ ಆಕರವಾಗುವಂತಹವುಗಳು. ಆದ್ದರಿಂದ ಈ ಗ್ರಂಥವು ಪಂಡಿತರಿಗೆ ಪಾಠಕರಿಗೆ ಅಗತ್ಯ ಕೈಪಿಡಿಯಗುವುದರಲ್ಲಿ ಸಂಶಯವಿಲ್ಲ. ' ನೆಲ ಮುಗಿಲು' ಎಂಬುದು ದ್ಯಾವಾ ಪೃಥಿವಿಯ ಶುದ್ಧ ಕನ್ನಡ ಪರ್ಯಾಯ ಪದವಾಗಿದೆ.ಹಾಗೆಯೇ ಪ್ರಕೃತಿ ಪುರುಷ ತಾತ್ವಿಕತೆಯೂ ಹೌದು. ಈ ಅಗಾಧ ವಿಷಯ ವ್ಯಾಪ್ತಿಯ ನುಡಿ ಬೆಡಗು ಏನೆಲ್ಲಾ ದರ್ಶಿಸಲು, ದರ್ಶನ ಪಡೆಯಲು, ದಿಟ್ಟಿಸಲು ಸಾಧ್ಯವೋ ಅವೆಲ್ಲದರ ಚಿಂತನೆಯ ಬೆಳಕು ಕೂಡ ಆಗಿದೆ ಎಂದು ಅಶೋಕ ಹಾಸ್ಯಗಾರ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.

About the Author

ನಾರಾಯಣ ಯಾಜಿ

ಕಲಾವಿದ, ಕತೆಗಾರ ನಾರಾಯಣ ಯಾಜಿ ಅವರು ಉತ್ತರ ಕನ್ನಡದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವವರು. ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅವರ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕರಾಗಿದ್ದು, ‘ನೈದಿಲೆಯ ಒಡಲು’ ಅವರ ಮೊದಲ ಕಥಾ ಸಂಕಲನ. ಉತ್ಥಾನ ಪತ್ರಿಕೆಯ ಕಥಾಸ್ಪರ್ಧೆಯಲ್ಲಿ ಅವರ ‘ವ್ಯಸ್ತ’ ಕಥೆಗೆ ಬಹುಮಾನ ಲಭಿಸಿದೆ. ...

READ MORE

Related Books