ಆಪರೇಷನ್ ಆನೆಮಲೆ

Author : ಹೆಚ್.ಎಸ್. ಬ್ಯಾಕೋಡ (ಹ.ಸ.ಬ್ಯಾಕೋಡ)

Pages 88

₹ 70.00




Year of Publication: 2014
Published by: ಶ್ರೀಅಮ್ಮ ಪ್ರಕಾಶನ
Address: ಸರಸ್ವತಿ ನಿಲಯ, ತಿಮ್ಮಯ್ಯ ಕಾಂಪೌಂಡ್, ಇಮ್ಮಡಿಹಳ್ಳಿ ಮುಖ್ಯರಸ್ತೆ, ವೈಟ್ ಫೀಲ್ಡ್, ಬೆಂಗಳೂರು- 560066

Synopsys

‘ಆಪರೇಷನ್ ಆನೆಮಲೆ’ ಲೇಖಕ ಹ.ಸ.ಬ್ಯಾಕೋಡ ಅವರು ಬರೆದಿರುವ ಮಕ್ಕಳ ಕಾದಂಬರಿ. ಈ ಕೃತಿಗೆ ವೈದೇಹಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಕಥನ ಮಾರ್ಗದ ಮೂಲಕವೇ ಮಕ್ಕಳಲ್ಲಿ ಮಮತೆ ಮಮಕಾರ, ಕಾರುಣ್ಯದ ಒರತೆ ಚಿಮ್ಮಿಸುವ, ಜೀವಪ್ರೀತಿ ಉದ್ಭವಿಸುವಂತೆ ಮಾಡುವ ಅವರ ಈ ಪ್ರಯತ್ನ ಸಾರ್ಥಕವೇ ಸರಿ. ಈ ದಿಸೆಯಲ್ಲಿ ಅವರ ಪ್ರಸ್ತುತ ಕಾದಂಬರಿ ಒಂದು ಶ್ಲಾಘನೀಯ ಯತ್ನ ಎನ್ನಬೇಕು. ಬ್ಯಾಕೋಡ ಅವರು ಮಕ್ಕಳ ಕತೆಗಳನ್ನು ಇನ್ನಷ್ಟು ಬರೆಯುತ್ತಲೇ ಇದ್ದಾರೆ. ಅವು ಯಾವುವೂ ಬರಿಯ ಕಾಗೆ ಗುಬ್ಬಿಗಳ ರೋಚಕ ಕತೆಗಳಿಗೆ ಮುಗಿಯುವುದಿಲ್ಲ. ಬದಲು ಇವತ್ತಿನ ಪಾರಿಸರಿಕ ಸಮಸ್ಯೆಗಳ ಕಡೆಗೂ ಶೋಷಣೆ, ಶೋಷಕ ಮತ್ತು ಶೋಷಿತ ವರ್ಗದ ಕಡೆಗೂ ಅವುಗಳದೇ ರೀತಿಯಲ್ಲಿ ಗಮನ ಹರಿಸುತ್ತವೆ. ಅಂತಹ ಯಾವ ಶಬ್ದಗಳನ್ನೂ ಅಂತಂತೇ ಸೀದ ಬಳಸದೇನೇ ಒಟ್ಟು ಭಾವವನ್ನು ತಲುಪಿಸುವ ಆಶಯ ಇವುಗಳ ಚೌಕಟ್ಟಿನಲ್ಲಿ ಹಾಗೂ ಹಿನ್ನೆಲೆಯಲ್ಲಿ ಅಡಗಿದೆ. ಕತೆಗಳ ನೇಯ್ಗೆಯ ಕ್ರಮದಲ್ಲೇ ಆದಷ್ಟೂ ಸರಳವಾಗಿ ಹೇಳುತ್ತ ಮಕ್ಕಳ ಮನಸ್ಸನ್ನು ಸೆಳೆಯಬೇಕೆಂಬ ಅಭಿಲಾಷೆ ಇರುವುದು ಎದ್ದು ಕಾಣುತ್ತದೆ ಎಂದಿದ್ದಾರೆ ವೈದೇಹಿ.

About the Author

ಹೆಚ್.ಎಸ್. ಬ್ಯಾಕೋಡ (ಹ.ಸ.ಬ್ಯಾಕೋಡ)

ಲೇಖಕ ಹ.ಸ. ಬ್ಯಾಕೋಡ ಮಕ್ಕಳ ಸಾಹಿತ್ಯಕ್ಕೆ ಅರ್ಥಪೂರ್ಣ ಸತ್ವವನ್ನು ತಂದುಕೊಟ್ಟ ಸಾಹಿತಿ. ಇವರು ಪ್ರಸಿದ್ಧ ಛಾಯಾಗ್ರಾಹಕರೂ ಹೌದು. ಅಂತಾರಾಷ್ಟ್ರೀಯ ಮಟ್ಟದ ಹಲವು ಗೌರವಗಳಿಗೆ ಪಾತ್ರರಾಗಿರುವ ಬ್ಯಾಕೋಡ ಕರ್ನಾಟಕದ ಬಯಲುಸೀಮೆ ಪ್ರದೇಶದಲ್ಲಿ ಹುಟ್ಟಿ, ಕರಾವಳಿ ಪ್ರದೇಶದಲ್ಲಿ ಆಡಿ ಬೆಳೆದು, ಮಲೆನಾಡಿನ ಹಸಿರು ಪರಿಸರದ ಒಡನಾಟದಲ್ಲಿದ್ದವರು. ಸದ್ಯ ಬೆಂಗಳೂರಿನ ಹೊರವಲಯದಲ್ಲಿ ನೆಲೆಸಿದ್ದಾರೆ. ಅತ್ಯುತ್ತಮ ವನ್ಯಜೀವಿ ಛಾಯಾಗ್ರಾಹಕರು, ಲೇಖಕರು, ಪತ್ರಕರ್ತರೂ ಆಗಿರುವ ಬ್ಯಾಕೋಡ ಬಹುಮುಖ ಪ್ರತಿಭೆ. ಬಂಗಾರ, ರಜತ, ಕಂಚಿನ ಪದಕಗಳು, ಗೌರವ ಪ್ರಶಸ್ತಿಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವನ್ಯಜೀವಿ ಛಾಯಾಚಿತ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶ್ರೀಲಂಕಾ, ಹಾಂಗ್ ಕಾಂಗ್, ಮ್ಯಾಟ್ ಲ್ಯಾಂಡ್, ...

READ MORE

Related Books