ತೊಟ್ಟಿಲಗೊಂಬೆ

Author : ಮಾದು ಪ್ರಸಾದ ಹುಣಸೂರು

Pages 80

₹ 70.00




Year of Publication: 2018
Published by: ಅಭಿನವ ಪ್ರಕಾಶನ
Address: ಮಾರೇನಹಳ್ಳಿ, ಬೆಂಗಳೂರು.
Phone: 9448892305

Synopsys

ತೊಟ್ಟಿಲಗೊಂಬೆ 20ನೆಯ ಶತಮಾನದ ಮಕ್ಕಳ ಸಾಹಿತಿ ಮೇವುಂಡಿ ಮಲ್ಲಾರಿಯವರ ನೆನಪಿನಲ್ಲಿ 'ಮೇವುಂಡಿ ಮಲ್ಲಾರಿ ಮಕ್ಕಳ ಕಾದಂಬರಿ' ಸರಮಾಲೆಯನ್ನು 'ಅಭಿನವ' ಮತ್ತು 'ಸಂಧ್ಯಾ ಸಾಹಿತ್ಯ ವೇದಿಕೆ' ಒಟ್ಟಿಗೆ ಸೇರಿ ಪ್ರಕಟಿಸುತ್ತಿದ್ದು, ಈ ಮಾಲೆಯ ಆರನೆಯ ಕಾದಂಬರಿ ಮಾದುಪ್ರಸಾದ ಹುಣಸೂರು ಬರೆದಿರುವ 'ತೊಟ್ಟಿಲಗೊಂಬೆ'. ಮೇವುಂಡಿ ಮಲ್ಲಾರಿಯವರ ನೆನಪಿನಲ್ಲಿ ಇವರು ಒಂದರ ಹಿಂದೆ ಒಂದರಂತೆ ಮಕ್ಕಳ ಕಾದಂಬರಿಯನ್ನು ಪ್ರಕಟಿಸುತ್ತಿರುವ ಪರಿ ಅನನ್ಯವಾಗಿದೆ. 

ಕನ್ನಡದಲ್ಲಿ ಮಕ್ಕಳಿಗೆ ಬೇಕಾಗುವ ಪಠ್ಯೇತರ ಪುಸ್ತಕಗಳು ತೀರ ಕಡಿಮೆ.ಅಂಗ್ಲ ಭಾಷೆಯಲ್ಲಿ ದಾರಳವಾಗಿ ಪಠ್ಯೇತರ ಪುಸ್ತಕಗಳಿವೆ.ಕನ್ನಡದಲ್ಲಿ ಈ ಬಗೆಯ ಬರಹಗಳ ಕೊರತೆಯನ್ನು ನೀಗಿಸಲು ಲೇಖಕರು ಪ್ರಯತ್ನಸಿದ್ದಾರೆ ನಮ್ಮ ಲೇಖಕರು ಹಳೆಯ ಮಾದರಿಯ ಜನಪದ ಕತೆಗಳು, ಪಂಚತಂತ್ರದ ಕತೆಗಳು, ನೀತಿ ಕತೆಗಳ ಮಾದರಿಯಲ್ಲೇ ತಮ್ಮ ಸಾಹಿತ್ಯವನ್ನು ರಚಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ಈ ಕತೆಗಳನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ ಎನ್ನುವಂತಾಗಿದೆ.ಇದಕ್ಕೆ ವಿಭಿನ್ನವಾಗಿ ಲೇಖಕರು ಮಕ್ಕಳಲ್ಲಿ ಆಸಕ್ತಯನ್ನು ಹೆಚ್ಚಿಸುವ ಪುಸ್ತಕ ರಚನೆಗೆ ಒತ್ತು ನೀಡಿದ್ದಾರೆ.

About the Author

ಮಾದು ಪ್ರಸಾದ ಹುಣಸೂರು
(20 March 1982)

ಡಾ. ಮಾದುಪ್ರಸಾದ್ ಹುಣಸೂರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರಂಗಯ್ಯನಕೊಪ್ಪಲು ಗ್ರಾಮದವರು. ತಂದೆ ಕುಂಡಯ್ಯ, ತಾಯಿ ಕಾಳಮ್ಮ. ಜನನ 1982ರ ಮಾರ್ಚ್ 20 ರಂದು. ಪ್ರಾಥಮಿಕ ಶಿಕ್ಷಣ-ಹುಟ್ಟೂರಿನಲ್ಲಿ, ಮಾಧ್ಯಮಿಕ ಶಿಕ್ಷಣ-ಬೋಳನಹಳ್ಳಿಯಲ್ಲಿ, ಪ್ರೌಢಶಾಲಾ ಶಿಕ್ಷಣ-ಅರಸಿ ಹುಣಸೂರಿನಲ್ಲಿ ನಡೆಯಿತು.  ಮೈಸೂರಿನ ವಸಂತ ಮಹಲ್ ನಲ್ಲಿ ಶಿಕ್ಷಕ ತರಬೇತಿ ಪಡೆದು, 2004 ರಲ್ಲಿ ಪಿರಿಯಾಪಟ್ಟಣದ ಭೂತನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದರು.  ಕೃತಿಗಳು: ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ  'ಮಕ್ಕಳ ಕಥಾ ಸಾಹಿತ್ಯ ಸ್ವರೂಪ: ತಾತ್ವಿಕತೆ ' ವಿಷಯವಾಗಿ ಮಹಾಪ್ರಬಂಧ ಮಂಡಿಸಿ ಪಿ.ಎಚ್.ಡಿ,  ಎಂ.ಎಸ್. ಪುಟ್ಟಣ್ಣರ ಮಕ್ಕಳ ಸಾಹಿತ್ಯದ ಕೊಡುಗೆ ಎಂಬುದು ಸಂಶೋಧನಾ ಗ್ರಂಥ ಪ್ರಕಟಣೆ, ‘ಹಾಡೋಣ ಬಾರೋ ಕಿಶೋರ,   'ಬೆಂದವರ ಬೆವರು, ಹಕ್ಕಿಗಾನ ...

READ MORE

Related Books