ಜ್ಞಾನದೇವನ ಬೋಧನೆಗಳು

Author : ಜಿ.ಕೆ. ರವೀಂದ್ರ ಕುಮಾರ್

Pages 62

₹ 10.00




Year of Publication: 2010
Published by: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560056
Phone: 080 - 23183311, 23183312

Synopsys

ಮರಾಠಿಯ ಶ್ರೇಷ್ಠ ಸಂತರಲ್ಲಿ ಒಬ್ಬನಾದ ಜ್ಞಾನೇಶ್ವರಿಯ ಜ್ಞಾನದೇವನ ಅನುಭವಾಮೃತದಂತಹ ಗಹನವಾದ ಕೃತಿ ಹಾಗೂ ಅದರ ಬಗ್ಗೆ ಖರ್ಷೀಕರ ಶಾಸ್ತ್ರಿಯವರ ಸರಳ ಪ್ರವಚನಗಳ ಕುರಿತು ಈ ಕೃತಿಯಲ್ಲಿ ವಿವರಿಸಲಾಗಿದೆ. ಗೌಡಪಾದ, ಶಂಕರ ಹಾಗೂ ಜ್ಞಾನದೇವರ ನಡುವೆ ತೋರಿರುವ ಸಾಮ್ಯತೆಗಳು ಜ್ಞಾನ ದೇವನ ವ್ಯಕ್ತಿತ್ವದ ಅಗಾಧತೆಯನ್ನು ಸೂಚಿಸುತ್ತದೆ. ಅನುಭವಾಮೃತ ರಹಸ್ಯದ ಮೇಲೆಯೇ ಪಿ.ವೈ. ದೇಶಪಾಂಡೆಯವರು ತಮ್ಮ ಮೂರು ಸಂಪುಟಗಳಲ್ಲಿ ಹೊರತಂದ ಅನುಭವಾಮೃತ ರಸರಹಸ್ಯದ ವಿಷಯವನ್ನೂ, ಜ್ಞಾನೇಶ್ವರಿ, ಅನುಭವಾಮೃತ, ಅಭಂಗಗಳು ಇವುಗಳಿಂದ ಆಯ್ದ ಭಾಗಗಳನ್ನು ಈ ಕೃತಿಯೂ ಒಳಗೊಂಡಿದೆ. ಈ ಕೃತಿಯನ್ನು ಜಿ.ಕೆ.ರವೀಂದ್ರ ಕುಮಾರ್ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

About the Author

ಜಿ.ಕೆ. ರವೀಂದ್ರ ಕುಮಾರ್

ಮೂಲತ: ಚಿತ್ರದುರ್ಗ ಜಿಲ್ಲೆಯವರಾದ ಜಿ.ಕೆ.ರವೀಂದ್ರಕುಮಾರ್ ಶಿಕ್ಷಣ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆಕಾಶವಾಣಿಯ ಭದ್ರಾವತಿ, ಧಾರವಾಡ, ಕಾರವಾರ, ಮಡಿಕೇರಿ, ಮೈಸೂರು ಕೇಂದ್ರಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ಮುಖ್ಯಸ್ಥರಾಗಿ ಹಾಗೂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. `ಸಿಕಾಡ', 'ಪ್ಯಾಂಜಿಯ', 'ಕದವಿಲ್ಲದ ಊರಲ್ಲಿ', 'ಒಂದುನೂಲಿನ ಜಾಡು' ಹಾಗು 'ಮರವನಪ್ಪಿದ ಬಳ್ಳಿ' ಕವನ ಸಂಕಲನಗಳನ್ನು ಪ್ರಕಟಿಸಿದ್ದು, ರವೀಂದ್ರ ಕುಮಾರ್ ಅವರಿಗೆ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಹಾಗು ಎರಡು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪುರಸ್ಕಾರ ಲಭಿಸಿದೆ. ಅಲ್ಲದೆ ಕಾಂತಾವರದ ...

READ MORE

Related Books