ಕಾಯಕ ಸಿದ್ಧಾಂತ

Author : ನಯನಾ ಕಾಶ್ಯಪ್

Pages 64

₹ 10.00




Year of Publication: 2010
Published by: ಕನ್ನಡ ಮತ್ತು ಸಂಸ್ಕೃತಿ ಇಲಾಖೆ
Address: ಕನ್ನಡ ಭವನ, ಜೆ. ಸಿ. ರಸ್ತೆ, ಬೆಂಗಳೂರು - 560002

Synopsys

ವೇದಾಂತವನ್ನು ಬದುಕಬೇಕು, ಅದು ಕಾರ್ಯ ಶೀಲವಾಗಿರಬೇಕು ಎಂದು ಸಾರುತ್ತಿದ್ದ ಮಹಾ ತೇಜಸ್ವಿ ಸಂತ ಸ್ವಾಮಿ ರಾಮತೀರ್ಥರ ಉಪದೇಶಗಳ ತಿರುಳನ್ನು ಈ ಕೃತಿಯು ನಮಗೆ ವಿವರಿಸುತ್ತದೆ. ಕಾಯಕ ಸಿದ್ಧಾಂತದ ಹಲವು ಮಜಲುಗಳಾದ ಆತ್ಮಸಮರ್ಪಣೆ, ಪ್ರಸನ್ನಚಿತ್ತತೆ, ಸ್ವಾವಲಂಬನೆ, ಪ್ರೇಮ, ಇವುಗಳನ್ನು ಸರಳವಾಗಿ ಸ್ವಾಮಿ ರಾಮತೀರ್ಥರು ವಿವರಿಸುತ್ತಾರೆ. ಈ ಕೃತಿಯನ್ನು ನಯನಾ ಕಾಶ್ಯಪ್ ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಗಣಿತಶಾಸ್ತ್ರದ ಬಗ್ಗೆ ಹೇಳುವ ಗಣಿತಶಾಸ್ತ್ರವು ಧರ್ಮಕ್ಕೆ ಆಸರೆಯಾಗುತ್ತದೆ. ನಮಗೆ ಐಹಿಕ ಜೀವನದಲ್ಲಿ ಏಕಾಗ್ರತೆಯನ್ನು ಬೆಳೆಸುತ್ತದೆ ಎಂಬ ಮಾತು ಬಹು ಮೌಲಿಕವಾದುದು. ಜನಸಂಖ್ಯೆ, ಮಹಿಳಾಶಿಕ್ಷಣ, ರಾಷ್ಟ್ರಧರ್ಮ, ಭಾರತದ ಭವಿಷ್ಯ ಈ ಸಂಗತಿಗಳ ಕುರಿತು ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ನಯನಾ ಕಾಶ್ಯಪ್
(04 April 1970)

ಕವಯತ್ರಿ, ಅನುವಾದಕಿ ನಯನಾ ಕಶ್ಯಪ್ ಅವರು 1970 ಏಪ್ರಿಲ್ 24 ರಂದು ಜನಿಸಿದರು. ಖ್ಯಾತ ಕಥೆಗಾರ್ತಿ ’ವೈದೇಹಿ’ಯವರ ಮಗಳು ನಯನಾ ಕಶ್ಯಪ್. ’ಮೆಟ್ಟಿಲ ಹಾದಿ’ ಅವರ ಕವನ ಸಂಕಲನ. ಚಿಲಿಯ ಕವಿ ಪಾಬ್ಲೊನರೂಡಾ ಆತ್ಮಕಥೆ “ನೆನಪು ತೆರೆವ ಕವಿಮನ” ಕೃತಿಯನ್ನು ಅನುವಾದಿಸಿದ್ದಾರೆ. “ಗುಲಾಬಿ ಟಾಕೀಸ್” ವೈದೇಹಿಯವರ ಕಥೆಗಳನ್ನು ಅನುವಾದಿಸಿದ್ದಾರೆ. ’ಜಾತ್ರ’ ವೈದೇಹಿಯವರ ಕೃತಿಯನ್ನು, ಸ್ವಾಮಿರಾಮ ಅವರ ಗಾಸ್ಟೆಲ್ ಆಫ್ ವರ್ಕ್ ’ಕಾಯಕ ಸಿದ್ದಾಂತ’ ಅನುವಾದ ಮಾಡಿದ್ಧಾರೆ. ಗೊರೂರು ಸಾಹಿತ್ಯ ಪ್ರಶಸ್ತಿ, ಕೊಡಗಿನ ಗೌರಮ್ಮ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ಧಾರೆ. ...

READ MORE

Excerpt / E-Books

Related Books