ನನ್ನ ಬಾಳಿನೊಳಗೆ ಭಗವಂತ ಹೇಗೆ ಪ್ರವೇಶಿಸಿದ (ಶ್ರೇಣಿ-2)

Author : ಟಿ.ಎಸ್. ವೆಂಕಣ್ಣಯ್ಯ

Pages 80

₹ 10.00




Year of Publication: 2013

Synopsys

ದೇಶ ವಿದೇಶಗಳ ಹಲವಾರು ಸಂತರು ತಮ್ಮ ವೈಯಕ್ತಿಕ ಜೀವನದಲ್ಲಿ ಪರಮಾತ್ಮನ ನೇರ ಸಂಪರ್ಕ ಹೇಗೆ ದೊರೆಯಿತು, ಆ ಅನುಭವದ ನೆಲೆಗಳು ಯಾವುದು, ಅದಕ್ಕೆ ಕಾರಣವಾದ ವ್ಯಕ್ತಿಗಳು ಯಾರು ಎಂಬುದನ್ನು ತಮ್ಮ ಮಾತಿನಲ್ಲಿಯೇ ತಿಳಿಸಿದ್ದಾರೆ. ಆ ಕ್ಷಣವು ತದನಂತರದ ಬಾಳಿನಲ್ಲಿ ಅವರನ್ನು ಹೇಗೆ ಕೈ ಹಿಡಿದು ನಡೆಸಿಕೊಂಡು ಹೋಯಿತು ಎಂಬುದನ್ನು ತಿಳಿಸಿರುವುದು ಸಾಧಕರಿಗೆ ಕೈದೀವಿಗೆಯಾಗುತ್ತದೆ. ಅಂತಹ ಸಾಧಕರಲ್ಲಿ ಪರಮಹಂಸರು, ದೇವೇಂದ್ರನಾಥ ಹಾಗೂ ರವೀಂದ್ರನಾಥ ಠಾಕೂರರು, ಅನಿ ಬೆಸೆಂಟ್, ವಿವೇಕಾನಂದ, ಮಹಾತ್ಮ ಗಾಂಧಿ, ಅರವಿಂದರು, ಬಕ್ಮನ್, ಸಿಂಕ್ಲೇರ್ ಅವರುಗಳ ಕುರಿತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.

About the Author

ಟಿ.ಎಸ್. ವೆಂಕಣ್ಣಯ್ಯ
(01 October 1885 - 28 February 1939)

ಲೇಖಕ, ಅನುವಾದಕ ಟಿ.ಎಸ್. ವೆಂಕಣ್ಣಯ್ಯನವರು (ಜನನ:01-10-1885) ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳೇಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ. ಮೈಸೂರಿನಲ್ಲಿ ಕನ್ನಡ, ತೆಲುಗು ಸಾಹಿತ್ಯಾಧ್ಯಯನ ಮಾಡಿ, ಮದರಾಸು ವಿಶ್ವವಿದ್ಯಾಲಯದಿಂದ 1914ರಲ್ಲಿ ಎಂ.ಎ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ. ಬೆಂಗಳೂರು ಸೇಂಟ್ ಜೋಸೆಫ್ ಕಾಲೇಜು, ದೊಡ್ಡಬಳ್ಳಾಪುರ ಮುಂತಾದೆಡೆ ಶಿಕ್ಷಕ ವೃತ್ತಿ. ಬಹುಭಾಷಾ ವಿಶಾರದರು ಅವರು ಕನ್ನಡ, ತೆಲುಗು, ತಮಿಳು, ಸಂಸ್ಕೃತ, ಬಂಗಾಳಿ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದಾರೆ. ’ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಭಾಗ, ರವೀಂದ್ರರ ಪ್ರಬಂಧಗಳನ್ನಾಧರಿಸಿ ಬರೆದ ‘ಪ್ರಾಚೀನ ಸಾಹಿತ್ಯ’ ಅನುವಾದ ಕೃತಿಗಳು. ’ಹರಿಹರನ ...

READ MORE

Related Books