ದಣಿ ಇಲ್ಲದ ಧರಣಿ

Author : ಟಿ. ಆರ್. ಅನಂತರಾಮು

Pages 158

₹ 80.00




Year of Publication: 2006
Published by: ಸುಧಾ ಎಂಟರ್ ಪ್ರೈಸೆಸ್
Address: ನಂ. 761, ಎಂಟನೇ ಮುಖ್ಯರಸ್ತೆ, ಮೂರನೇ ಬ್ಲಾಕ್, ಕೋರಮಂಗಲ, ಬೆಂಗಳುರು- 560 034
Phone: 080 22443996

Synopsys

ಹಲವು ಪ್ರಶ್ನೆಗಳನ್ನು ನಾವು ಎತ್ತಬಹುದು. ದಿಢೀರೆಂದು ಮನುಕುಲ ಭೂಮಿಯಿಂದಲೇ ಕಣ್ಮರೆಯಾದರೆ ಪರಿಸ್ಥಿತಿ ಹೇಗಿರಬಹುದು? ಜೀವಿಸಂಕುಲವೇ ಸೊರಗಬಹುದೆ ಅಥವಾ ನಳನಳಿಸಬಹುದೆ? ಕುಡಿಯುವ ನೀರೇ ವಿಷವಾಗುತ್ತಿದೆ, ಪ್ರಕೃತಿ ಮುನಿದಿದೆ, ಭೂಮಿಯೇ ಪೂತನಿಯಾಗುತ್ತಿದ್ದಾಳೆ, ಹವಾಗುಣ ಕೆಡುತ್ತಿದೆ, ಧರೆ ಹೊತ್ತಿ ಉರಿಯುತ್ತಿದೆ, ಪ್ರಗತಿಯ ಹೆಸರಲ್ಲಿ ಭೂಸಂಪನ್ಮೂಲವನ್ನೆಲ್ಲ ಉಡಾಯಿಸಿ, ನಾವು ಮಾಡುತ್ತಿರುವ ಅಪಚಾರ ಒಂದೇ ಎರಡೆ? ಪ್ಲೂಟೋ ಗ್ರಹಕ್ಕೆ ಹಿಂಬಡ್ತಿ ನೀಡಿದ್ದೇಕೆ? ಚಂಡಮಾರುತಳಿಗೇಕೆ ನಾವು ಚಂದದ ಹೆಸರು ಕೊಡುತ್ತೇವೆ? ಸಾಗರವನ್ನು ಮಾಲಿನ್ಯಗೊಳಿಸಿ ಅದಕ್ಕೆ ಅಸಿಡಿಟಿ ತಂದಿದ್ದೇವೆಯೆ? ಸೂಪರ್ ಜ್ವಾಲಾಮುಖಿಗಳು ಕೆರಳಿದರೆ ನಾವು ಉಳಿಯುತ್ತೇವೆಯೆ? ಹಿಮದ ಮರುಭೂಮಿಯಾದ ಅಂಟಾರ್ಕ್‍ಟಿಕ ಖಂಡದಲ್ಲಿ ವಿಜ್ಞಾನಿಗಳು ಯಾವುದನ್ನು ಶೋಧಿಸುತ್ತಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೂ `ದಣಿ ಇಲ್ಲದ ಧರಣಿ’’ ಪುಸ್ತಕದಲ್ಲಿ ನಿಮಗೆ ಒಪ್ಪುವ ಉತ್ತರಗಳು ದೊರೆಯುತ್ತವೆ. ಕ್ಲಿಷ್ಟ ಎನ್ನುವ ವಿಜ್ಞಾನವನ್ನು ನವಿರಾದ ಭಾಷೆಯಲ್ಲಿ ಹೇಳುವಾಗ, ವಿಜ್ಞಾನದ ಹಿನ್ನೆಲೆ ಇಲ್ಲದವರೂ ಈ ಕ್ಷೇತ್ರದ ಬಗ್ಗೆ ಆಕರ್ಷಿತರಾಗುತ್ತಾರೆ. ಅದಕ್ಕೆ ತಕ್ಕ ನಿರೂಪಣೆಯನ್ನು ಈ ಕೃತಿ ಸಾಧಿಸಿದೆ.

 

About the Author

ಟಿ. ಆರ್. ಅನಂತರಾಮು
(03 August 1949)

ಭೂ ವಿಜ್ಞಾನಿ, ಸಂಶೋಧಕ, ಅಂಕಣಕಾರ, ವಿಜ್ಞಾನ ಲೇಖಕ ಟಿ.ಆರ್. ಅನಂತರಾಮು ಅವರು ಜನಿಸಿದ್ದು 1949 ಆಗಸ್ಟ್ 3ರಂದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ತಾಳಗುಂದದಲ್ಲಿ.ತಾಳಗುಂದ ರಾಮಣ್ಣ ಅನಂತರಾಮು ಅವರ ಪೂರ್ಣ ಹೆಸರು. ಸಿರಾದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದ ಅವರು ಸಿರಾದ ಮುನಿಸಿಪಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದಾರೆ. ಆನಂತರ ತುಮಕೂರಿನ ಸರ್ಕಾರಿ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎನ್ಸಿ(ಜಿಯಾಲಜಿ) ಪದವಿ ಪಡೆದಿದ್ದಾರೆ.  ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತನ ಬೆಂಗಳೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.  ...

READ MORE

Related Books