ಫಲಶ್ರುತಿ

Author : ಬಿ.ಜಿ.ಎಲ್. ಸ್ವಾಮಿ

Pages 152

₹ 99.00

Buy Now


Year of Publication: 2017
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

ಲೇಖಕ ಬಿ.ಜಿ.ಎಲ್. ಸ್ವಾಮಿ ಅವರು ಬರೆದ ಕೃತಿ-ಫಲಶ್ರುತಿ. ಹೂದೋಟ, ಫಲಾಹಾರ ಶಾಕಾಹಾರ, ಸಾಂಬಾರ, ಔಷಧೀಯ, ಧಾನ್ಯ, ಕಳೆ, ಐತರೇಯ ಎಂಬ ವಿಭಾಗಗಳಲ್ಲಿ ಸುಮಾರು 75 ಸಸ್ಯಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ವಿವಿಧ ಸಂಸ್ಕೃತಿ ಹಾಗೂ ಜನಾಂಗಗಳಲ್ಲಿ ಈ ಸಸ್ಯಗಳು ಆಹಾರ, ಔಷಧಿ, ಅಲಂಕಾರ ಹಾಗೂ ಧಾರ್ಮಿಕ ಆಚರಣೆಗೆಗಳಿಗೆ ಬಳಸಲಾಗುತ್ತದೆ. "ಹೂದೋಟ" ಸುಗಂಧರಾಜ, ಸಂಜೆಮಲ್ಲಿಗೆ, ದವನ, ಚೆಂಡುಮಲ್ಲಿಗೆ, ಗೋರಂಟಿ, ಗುಲಾಬಿ, ಕಣಗಿಲೆ, ದೇವಕಣಗಿಲೆ, ಬೋಗನ್ ವಿಲ್ಲಿಯ, ಕ್ಯಾನ, ಗುಲ್‌ಮೊಹರ್, ಸೀಮೆ ಬಾಳೆ, ಡೇಲಿಯ, ರಂಗಮಾಲೆ, ನಾಗಲಿಂಗ ಮತ್ತು ಲಾಂಟಾನಾ.“ಫಲಾಹಾರ" ವಿಭಾಗದಲ್ಲಿ ದಾಳಿಂಬೆ, ಸೇಬು, ಚಕ್ಕೋತ, ಅಂಜೂರ, ಮಂಗೋಸ್ತೀನ್, ಮರಸೇಬು, ಕಲ್ಲಂಗಡಿ, ಖರ್ಜೂರ, ದ್ರಾಕ್ಷಿ ಮತ್ತು ಕಿರುನೆಲ್ಲಿ ಬಗ್ಗೆ ಮಾಹಿತಿ ಒದಗಿಸಿದ್ದಾರೆ. “ಶಾಖಾಹಾರ" ದಲ್ಲಿ ತೆಂಗು, ಬೆಂಡೆಕಾಯಿ, ಬಟಾಣಿ, ಈರುಳ್ಳಿ, ಬೆಳ್ಳುಳ್ಳಿ, ಸೀ ಕುಂಬಳ, ಬೂದುಕುಂಬಳ, ಕೆಂಪು ಮೂಲಂಗಿ, ಮೂಲಂಗಿ ಮತ್ತು ಗೋರಿಕಾಯಿ ಹಾಗೂ  “ಐತರೇಯ" ದಲ್ಲಿ ಯೂಕಲಿಪ್ಟಸ್ ಸಸ್ಯ ಹೀಗೆ ಮಾಹಿತಿ ನೀಡಿದ್ದು,, ಓದು  ಕುತೂಹಲ ಕೆರಳಿಸುತ್ತದೆ. 

About the Author

ಬಿ.ಜಿ.ಎಲ್. ಸ್ವಾಮಿ
(05 February 1916 - 02 November 1980)

ಬಿ. ಜಿ. ಎಲ್. ಸ್ವಾಮಿ ಅಂತರ್‌ರಾಷ್ಟ್ರೀಯ ಮಟ್ಟದ ಸಸ್ಯವಿಜ್ಞಾನಿ, ಹಿರಿಯ ವಿದ್ವಾಂಸ, ಸಾಹಿತಿ, ಚಿಂತನಶೀಲ ಬರಹಗಾರ ಡಾ. ಬಿ.ಜಿ.ಎಲ್‌. ಸ್ವಾಮಿ.  `ಶ್ರೇಷ್ಠ ವಿಜ್ಞಾನಿ' ಎಂದು ಹೆಸರಾಗಿದ್ದ ಖ್ಯಾತ ಸಂಶೋಧಕ ಸ್ವಾಮಿ ಅವರ ಪೂರ್ಣ ಹೆಸರು ’ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ’. ಕನ್ನಡದ ಹಿರಿಯ ಸಾಹಿತಿ ಡಿವಿಜಿಯವರ ಪುತ್ರ. 1916ರ ಫೆಬ್ರುವರಿ ಐದರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ತಂದೆಯ ಗುಂಡಪ್ಪ ಹಾಗೂ ಅವರ ಗ್ರಂಥ ಭಂಡಾರದಿಂದ ಪ್ರತಿಭಾನ್ವಿತರಾದ ವ್ಯಕ್ತಿ. ಪ್ರಾಥಮಿಕದಿಂದ ಪದವಿಯವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಅವರು ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ವಿದ್ಯಾರ್ಥಿ ಆಗಿರುವಾಗ ಕರ್ನಾಟಕ ಸಂಘದ ಕಾರೈದರ್ಶಿ ...

READ MORE

Related Books