ಫಲಜ್ಯೋತಿಷ ನಂಬುವಿರಾ ?

Author : ಎಸ್. ಬಾಲಚಂದ್ರರಾವ್

Pages 120

₹ 40.00

Buy Now


Year of Publication: 2013
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ನಂ.11, ಕ್ರೆಸೆಂಟ್ ರಸ್ತೆ, ಬೆಂಗಳೂರು-560 001
Phone: 080-22203580/01/02

Synopsys

ಎಸ್. ಬಾಲಚಂದ್ರರಾವ್ ಅವರು ಬರೆದ ವೈಜ್ಞಾನಿಕ ಕೃತಿ-ಫಲ, ಜ್ಯೋತಿಷ ನಂಬುವಿರಾ?. ಜನರ ಮುಗ್ದತೆ ಹಾಗೂ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಅನೇಕರು ಮಂತ್ರ-ಮಾಟ-ಫಲ-ಜ್ಯೋತಿಷ ಎಂದು ಹೇಳಿ ಜನರ ಆರ್ಥಿಕ ಶೋಷಣೆ ಅಷ್ಟೇ ಅಲ್ಲ; ಮಾನಸಿಕ ಹಾಗೂ ಧೈಹಿಕವಾಗಿಯೂ ಶೋಷಿಸುತ್ತಾರೆ. ಇಂತಹ ಮೂಢನಂಬಿಕೆ ವಿರುದ್ಧ ಸಮರ ಸಾರಿದಂತೆ ಲೇಖಕರು ಫಲ, ಜ್ಯೋತಿಷ ನಂಬುವಿರಾ? ಎಂದು ಪ್ರಶ್ನಿಸುವ ಮೂಲಕ ವೈಜ್ಞಾನಿಕ ಮನೋಭಾವವನ್ನು ರೂಢಿಸಿಕೊಳ್ಳಿ ಎಂದು ಅರಿವು ಮೂಡಿಸಿದ ಕೃತಿ ಇದು. ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ‘ಡಾ. ಎಚ್.ಎನ್.ದತ್ತಿನಿಧಿ ಪ್ರಶಸ್ತಿ’ (2001) ಲಭಿಸಿದೆ.

About the Author

ಎಸ್. ಬಾಲಚಂದ್ರರಾವ್

ಎಸ್.ಬಾಲಚಂದ್ರ ರಾವ್ ಅವರು ಬೆಂಗಳೂರು ಭಾರತೀಯ ವಿದ್ಯಾಭವನದ ಗಾಂಧೀ ಸೆಂಟರ್ ಅಫ್ ಸೈನ್ಸ್ ಅಂಡ್ ಹ್ಯೂಮನ್ ವ್ಯಾಲ್ಯೂಸ್ ವಿಭಾಗದ ಗೌರವ ನಿರ್ದೇಶಕರೂ ಹಾಗೂ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.  ಆರ್ಯಭಟ, ಗಣಿತಶಾಸ್ತ್ರದ ಪ್ರವರ್ತಕರು ಮತ್ತು ಸ್ವಾರಸ್ಯಗಳು, ಭಾರತೀಯ ಖಗೋಳಶಾಸ್ತ್ರ, ಶ್ರೀನಿವಾಸ ರಾಮಾನುಜನ್, ವೇದಾಂಗ ಜ್ಯೋತಿಷ, ಭಾರತೀಯ ಖಗೋಳವಿಜ್ಞಾನದಲ್ಲಿ ಗ್ರಹಣಗಳು ಮುಂತಾದ ಕೃತಿಗಳು.  ...

READ MORE

Awards & Recognitions

Related Books