ಹಾರುವತಟ್ಟೆಯ ದಶಾವತಾರ

Author : ನಾಗೇಶ ಹೆಗಡೆ

Pages 140

₹ 120.00




Year of Publication: 2016
Published by: ಭೂಮಿ ಬುಕ್ಸ್
Address: # ಮಳಿಗೆ ಸಂಖ್ಯೆ 150, 1ನೇ ಮೇನ್, 2ನೇ ಮುಖ್ದರಸ್ತೆ, ಶ್ರೀರಾಮಪುರ, ಶೇಷಾದ್ರಿಪುರಂ, ಬೆಂಗಳೂರು-560020.
Phone: 0802356 5885

Synopsys

ಲೇಖಕ ನಾಗೇಶ ಹೆಗಡೆ ಅವರ ಕೃತಿ- ಹಾರುವ ತಟ್ಟೆಯ ದಶಾವತಾರ. ವಿಜ್ಞಾನ ತಂತ್ರಜ್ಞಾನ,  ಸಾಮಾಜಿಕ ವಿಚಾರ ಹಾಗೂ ವಿಕಾರಗಳು ಕುರಿತ ಕೃತಿ. ಸಿಯಾಚಿನ್‌ ಹಿಮಕುಸಿತದಲ್ಲಿ ಬದುಕಿ ಮೇಲೆದ್ದ ಹನಮಂತಪ್ಪ ಕೊಪ್ಪದ ಅವರನ್ನು ಕೊಂದಿದ್ದು ಯಾರು? ತಮಿಳುನಾಡಿನ ಸಾಗರತೀರಕ್ಕೆ ತಿಮಿಂಗಲುಗಳು ಬಂದು ಪ್ರಾಣಾರ್ಪಣೆ ಮಾಡಿದ್ದೇಕೆ? ಪವಿತ್ರ ಪಂಚಗವ್ಯದಲ್ಲೂ ಬ್ರಸೆಲ್ಲಾ ರೋಗಾಣುಗಳು ನುಸಳಬಹುದು ಹೇಗೆ? ಮಹಾದಾಯಿ ಸಮಸ್ಸೆ ನಿವಾರಣೆಗೆ ವಕೀಲರಿಗಿಂತ ವಿಜ್ಞಾನಿಗಳೇ ಶ್ರೇಷ್ಠ ಯಾಕಾಗುತ್ತಾರೆ? ಡ್ರೋನ್‌ಗಳು ನಾಳೆ ಎಂತೆಂಥ ಅವತಾರ ಎತ್ತಿ ಅಂತರಿಕ್ಷದಲ್ಲಿ ಸುತ್ತಲಿವೆ?- ಚಿಕ್ಕ ಸುದ್ದಿಯಾಗಿ ಮಿಂಚಿ ಮರೆಯಾಗುವ ಇಂಥ ವಾರ್ತೆಗಳನ್ನು ಕೆದಕಿ ತೆಗೆದ ಬ್ರಹ್ಮಾಂಡ ಸತ್ಯದ ಕಥನಗಳು ಈ ಕೃತಿಯಲ್ಲಿವೆ.

About the Author

ನಾಗೇಶ ಹೆಗಡೆ
(14 February 1948)

ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ನಾಗೇಶ ಹೆಗಡೆ ಅವರ ಹುಟ್ಟೂರು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಕ್ಕಮನೆ. ಮಾಧ್ಯಮಿಕ ಶಿಕ್ಷಣವನ್ನು ಯಡಳ್ಳಿಯ ವಿದ್ಯೋದಯ ಹೈಸ್ಕೂಲಿನಲ್ಲಿ ಪೂರೈಸಿದ ಅವರು ಶಿರಸಿಯ ಮೋಟಿನಸರ ಸ್ಮಾರಕ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭೂವಿಜ್ಞಾನದಲ್ಲಿ ಬಿಎಸ್‍ಸಿ ಮುಗಿಸಿದರು. ಖರಗಪುರ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಂಎಸ್‍ಸಿ (ಟೆಕ್) ಮಾಡಿದರು. ದೆಹಲಿಯ ಜವಾಹರಲಾಲ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಂ.ಫಿಲ್ ಮಾಡಿದರು. ಶಿಕ್ಷಕ, ಪರಿಸರವಾದಿ ಹಾಗೂ ಪತ್ರಕರ್ತರಾಗಿ ವಿಭಿನ್ನ ಪಾತ್ರಗಳನ್ನು ವಹಿಸುತ್ತಿರುವ ನಾಗೇಶ ಹೆಗಡೆ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕರಾಗಿದ್ದರು. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನದ ಲೇಖನಗಳನ್ನು ಬರೆದಿರುವ ...

READ MORE

Related Books