ನೀವೂ ಮಾಡಿ ಪವಾಡ ಭಾಗ-1

Author : ಹುಲಿಕಲ್ ನಟರಾಜ್

Pages 118

₹ 135.00




Year of Publication: 2015
Published by: ಪವಾಡ ಸಂಶೋಧನಾ ಕೇಂದ್ರ
Address: ದೊಡ್ಡಬಳ್ಳಾಪುರ-561 203

Synopsys

ಪವಾಡ ಬಯಲು ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರ ಕೃತಿ-‘ನೀವೂ ಮಾಡಿ ಪವಾಡ ಭಾಗ-1. ದೇವರು, ಮಾಟ-ಮಂತ್ರ ಇತ್ಯಾದಿ ಹೆಸರಿನಲ್ಲಿ ಜನ ಸಾಮಾನ್ಯರಿ ಭಾವನೆಗಳೊಂದಿಗೆ ಚೆಲ್ಲಾಟವಾಡಿ ವಂಚನೆ ಎಸಗುತ್ತಿರುವ ಹಾಗೂ ಶೋಷಣೆ ಮಾಡುತ್ತಿರುವ ದುಷ್ಕರ್ಮಿಗಳ ವಿರುದ್ಧ ಲೇಖಕರು ವ್ಯಕ್ತಿಗತ ಮಟ್ಟದಲ್ಲಿ ಚಳವಳಿಯನ್ನೇ ಆರಂಭಿಸಿದರ ಫಲವಾಗಿ ಮೂಡಿದ ಕೃತಿ ಇದು. ದುಷ್ಕರ್ಮಿಗಳು ಮಾಡುವ ಪವಾಡದ ಹಿಂದಿನ ವಂಚನೆಯನ್ನು ಬಯಲು ಮಾಡಿದ್ದು ಮಾತ್ರವಲ್ಲ; ಪ್ರತಿಯೊಬ್ಬರೂ ಸಹ ಇಂತಹ ಪವಾಡಗಳನ್ನು ಮಾಡಿ ತೋರಿಸಬಹುದು ಎನ್ನುವ ಮೂಲಕ ಢೋಂಗಿ ಪವಾಡ ಪುರುಷರ ವಂಚನೆಯ ಬಣ್ಣವನ್ನು ಬಯಲಿಗೆಳೆಯುವುದನ್ನು ಈ ಕೃತಿಯಲ್ಲಿ ಸರಳವಾಗಿ ನಿರೂಪಿಸಲಾಗಿದೆ.

About the Author

ಹುಲಿಕಲ್ ನಟರಾಜ್

ಹುಲಿಕಲ್ ನಟರಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನವರು. ಪವಾಡ ಬಯಲು ಕಾರ್ಯಕ್ರಮದ ಮೂ;ಲಕ ಜನಸಾಮಾನ್ಯರಲ್ಲಿಯ ಮೂಢನಂಬಿಕೆಗಳ ನಿರ್ಮೂಲನೆಗಾಗಿ ತಮ್ಮ ವ್ಯಕ್ತಿಗತ ನೆಲೆಯಲ್ಲಿ ಹೊರಾಟವನ್ನೇ ಆರಂಭಿಸಿದವರು. ವೈಜ್ಞಾನಿಕ ತಳಹದಿಯ ಸಂಸ್ಥೆ-ಸಂಘಟನೆಗಳೊಂದಿಗೆ ಸೇರಿ ಸಾಮಾಜಿಕ ವೈಜ್ಞಾನಿಕತೆಯ ಬಲವರ್ಧನೆಗೆ ಶ್ರಮಿಸುತ್ತಿದ್ದು, ಇವರ ಈ ಸೇವೆಗಾಗಿ ರಾಷ್ಟ್ರ ಪ್ರಶಸ್ತಿಯೂ ದೊರಕಿದೆ. ಹುಲಿಕಲ್ ನಟರಾಜ್ ನೀವೂ, ಆರೋಗ್ಯದತ್ತ ನಮ್ಮ ಪಯಣ, ಮನಸೇಕೆ ಹೀಗೆ, ನಿಮ್ಮ ಯಶಸ್ಸಿಗೆ ನೀವೇ ರೂವಾರಿ, ನಿಮ್ಮ ಖುಷಿ ನಿಮ್ಮ ಕೈಯಲ್ಲಿ, ಅಂಗೈಯಲ್ಲಿ ಆರೋಗ್ಯ, ಜೀವ ಕೊಡುವ ಅಮೃತ ಬಿಂದು, ಇದೂ ಸಾಧ್ಯ, ನೀವೂ ಮಾಡಿ ಪವಾಡ, ಭಾಗ-1, ನೀವೂ ಂಆಡಿ ...

READ MORE

Related Books