ಹೊಸ ವಿಚಾರಗಳು

Author : ಕೆ.ಪಿ. ಪೂರ್ಣಚಂದ್ರ ತೇಜಸ್ವಿ

Pages 780

₹ 480.00




Year of Publication: 2012
Published by: ಪುಸ್ತಕ ಪ್ರಕಾಶನ
Address: 91, 9ನೇ ಮುಖ್ಯರಸ್ತೆ, ಸರಸ್ವತಿಪುರಂ, ಮೈಸೂರು-570 009
Phone: 0821-2545774, 9448203730

Synopsys

ಹೊಸ ವಿಚಾರಗಳು (2012) ಕೃತಿಯು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ಜೀವಿತಾವಧಿಯಲ್ಲಿ ಬರೆದ ಲೇಖನ, ಭಾಷಣ, ಸಂದರ್ಶನಗಳನ್ನು ಒಳಗೊಂಡ ಕೃತಿ. ತೇಜಸ್ವಿ ಅವರು ಬದುಕಿದ್ದಾಗಲೇ ಈ ಕೃತಿಯನ್ನು ಪ್ರಕಟಿಸಲು ಬಯಸಿದ್ದರು. ೨೧ನೇ ಶತಮಾನದಲ್ಲಿ ಪ್ರಕಟವಾದ 'ಹೊಸ ವಿಚಾರಗಳು' ಅನೇಕ ಕಾರಣಗಳಿಂದ ಮಹತ್ವದ ಪುಸ್ತಕ. ಜಗತ್ತು ಆಯಾ ಕಾಲಕ್ಕೆ ಎದುರಾದ ಸಮಸ್ಯೆಗಳ ಕುರಿತು ಚರ್ಚಿಸುತ್ತಿದ್ದಾಗಿನ ಪ್ರತಿಕ್ರಿಯೆ ಒಂದು ಬಗೆಯದಾದರೆ, ತೇಜಸ್ವಿ ಅವರ ಪ್ರತಿಕ್ರಿಯೆಯೇ ಭಿನ್ನ ದೃಷ್ಟಿಕೋನಗಳಿಂದ ಕೂಡಿರುತ್ತಿತ್ತು ಎಂಬುದಕ್ಕೆ ಇಲ್ಲಿನ ಒಳಸಂಗತಿಗಳಂತೆ, ನಿರುದ್ಯೋಗ ಜಾಗತೀಕರಣ, ಪರಿಸರ, ಅನೇಕ ಲೇಖನಗಳು ಸಾಕ್ಷಿಯಾಗಿವೆ. ಕನ್ನಡ ಭಾಷೆ, ಪರಿಸರ, ಅರ್ಥಿಕ, ಸಾಮಾಜಿಕ, ರಾಜಕೀಯ, ಧರ್ಮ, ಜಾಗತೀಕರಣ, ಕಲಿಕೆಯ ಮಾಧ್ಯಮ, ಕ್ರೀಡೆ, ಕೃಷಿ, ರಾಷ್ಟ್ರೀಯತೆ, ನಿರುದ್ಯೋಗ ಸಮಸ್ಯೆ, ತಂತ್ರಜ್ಞಾನ - ಹೀಗೆ ಅಸಂಖ್ಯ ಸಂಗತಿಗಳನ್ನು ಕುರಿತು ವಿಭಿನ್ನ ದೃಷ್ಟಿಕೋನಗಳಿಂದ ಕೂಡಿರುವ ಒಳನೋಟಗಳುಳ್ಳ ಕೃತಿ ಇದು.

About the Author

ಕೆ.ಪಿ. ಪೂರ್ಣಚಂದ್ರ ತೇಜಸ್ವಿ
(08 September 1938 - 05 April 2007)

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...

READ MORE

Related Books