ಕುದುರೆಮುಖ

Author : ಶಿವರಾಮಯ್ಯ

Pages 72

₹ 75.00




Year of Publication: 2003
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬಾರ್‌ ಬ್ಲಾಕ್, ವ್ಯಾಲಿಕಾವಲ್, ಬೆಂಗಳೂರು. 560003

Synopsys

ನವಸಾಮ್ರಾಜ್ಯಶಾಹಿ ಪಶ್ಚಿಮರಾಷ್ಟ್ರಗಳು ಪೂರ್ವದ ನೆಲ ಜಲ - ಖನಿಜ ಸಂಪನ್ಮೂಲಗಳನ್ನು ಲೂಟಿ ಹೊಡೆಯುತ್ತವೆ. ಪರಿಣಾಮವಾಗಿ ಭಾತದಂತಹ ಕೃಷಿ ಪ್ರಧಾನ ರಾಷ್ಟ್ರದ ಪ್ರಜೆಗಳು ಪ್ರತಿಯೊಂದಕ್ಕೂ ಸರ್ಕಾರದತ್ತ ಕೈ ಚಾಚುವ ಸ್ಥಿತಿಗೆ ಒಳಗಾಗಿದ್ದಾರೆ. ಓಟಿನ ರಾಜಕಾರಣಿಗಳು ಜವರ ಸ್ವಾವಲಂಬನೆಯನ್ನೇ ಹಾಳು ಮಾಡಿದ್ದಾರೆ. ಅಂಥ ವ್ಯವಸ್ಥೆಯ ವಿರುದ್ಧ ನಮ್ಮ ಜನರು ಸಂಘಟಿತರಾಗಿ ಮೇಲೆದ್ದು ತಮ್ಮ ಉದ್ದಾರವನ್ನು ತಾವೇ ಮಾಡಿಕೊಳ್ಳಬೇಕು ಎಂಬ ಆಶಯವನ್ನು ’ಕುದುರೆಮುಖ” ಸಂಕಲನದ ಈ ಲೇಖನಗಳು ಗಟ್ಟಿ ದನಿಯಲ್ಲಿ ಹೇಳುತ್ತವೆ. ಈ ಸಂಕಲನದ ಬಹಳಷ್ಟು ಲೇಖನಗಳು ಪಶ್ಚಿಮ ಘಟ್ಟದ ಕುದುರೆಮುಖ ಗಣಿಗಾರಿಕೆಯನ್ನು ಕುರಿತು ಇದೆ. ಅಭಿವೃದ್ಧಿಯ ಹೆಸರಿನಲ್ಲಿ ನಮ್ಮ ಅಪೂರ್ವ ಅರಣ್ಯಗಳ ಜೈವಿಕ ನೆಲೆಗಳನ್ನು ನಾಶ ಮಾಡಬಾರದೆಂಬುದೇ ಈ ಸಂಕಲನದ ಮುಖ್ಯ ಆಶಯವಾಗಿದೆ.

About the Author

ಶಿವರಾಮಯ್ಯ
(10 August 1940)

ಪ್ರೊ. ಶಿವರಾಮಯ್ಯ ನವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕ್ ಅವಿನಮಡು ಗ್ರಾಮದಲ್ಲಿ 1940 ರ ಆಗಸ್ಟ್‌ 10ರಂದು ಜನಿಸಿದರು. ತಂದೆ ಕಂಪಲಪ್ಪ, ತಾಯಿ ಬೋರಮ್ಮ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ಅವರು ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಅಧ್ಯಾಪನ ಹಾಗೂ ಸಂಶೋಧನ ವೃತ್ತಿಯ ಜೊತೆಯಲ್ಲಿಯೇ ಜನಪರ ಸಂಘಟನೆಗಳೊಂದಿಗೆ ಗುರುತಿಸಿಕೊಂಡರು. ಸಕ್ರಿಯ ಹೋರಾಟಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.  ಸ್ವಪ್ನ ಸಂಚಯ (ಕವನ ಸಂಕಲನ), ಬೌದ್ಧ ಭಿಕ್ಷಣಿ (ಮಕ್ಕಳ ಪುಸ್ತಕ ), ಸಾಹಿತ್ಯ ಪರಿಸರ, ಉರಿಯ ಉಯಾಲೆ (ವಿಮರ್ಶೆ), ಹರಿಹರ-ರಾಘವಾಂಕ (ಜಾನಪದ ಅಧ್ಯಯನ), ದನಿ ಇಲ್ಲದವರ ದನಿ, ಕುದುರೆಮುಖ (ವೈಚಾರಿಕ), ಇವರ ಕೆಲವು ಪ್ರಕಟಿತ ಕೃತಿಗಳು. ''ನಾಡೋಜ ...

READ MORE

Related Books