ತೂತುಬೊಟ್ಟು

Author : ಕಲಿಗಣನಾಥ ಗುಡದೂರು

Pages 142

₹ 60.00




Year of Publication: 2010
Published by: ಲೋಹಿಯಾ ಪ್ರಕಾಶನ
Address: ಕ್ಷಿತಿಜಾ, ಕಪ್ಪಗಲ್ಲು ರಸ್ತೆ, ಗಾಂಧಿ ನಗರ, ಬೆಂಗಳೂರು
Phone: 0839225741

Synopsys

ಗಾಂಧಿಕಟ್ಟೆ, ಸೆಕೆಂಡ್‌ ಸ್ಯಾಟರ್‌ಡೇ, ಕ್ಷುಲ್ಲಕ ವಸ್ತುಗಳು, ತೋರುಬೆರಳು, ತೂತುಬೊಟ್ಟು, ಕಾಯದ ನೆರಳು, ಒನ್‌ ಲೈನ್‌ ಸುದ್ದಿ, ಹುಚ್ಚ ಡಾಟ್‌ ಕಾಂ ಕತೆಗಳ ಸಂಕಲನ ತೂತುಬೊಟ್ಟು ಕಲಿಗಣನಾಥ ಗುಡದೂರು ಅವರ ಪುಸ್ತಕ. ಜಾಗತೀಕರಣ, ಉದಾರೀಕರಣ ಹಾಗೂ ಖಾಸಗೀಕರಣದ ಪರಿಣಾಮಗಳನ್ನು ಗ್ರಾಮೀಣ ಮೂಲದಿಂದ ಇದಿರುಗೊಳ್ಳುವುದೇ ಈ ಕತೆಗಳಲ್ಲಿನ ವೈಶಿಷ್ಟ್ಯ. ಇಂದಿನ ಸಮಾಜ ಎದುರಿಸುತ್ತಿರುವ ಸವಾಲುಗಳು, ಯಾಂತ್ರೀಕರಣದ ಅಟ್ಟಹಾಸ, ಕುಸಿಯುತ್ತಿರುವ ಕೌಟುಂಬಿಕ ಮೌಲ್ಯಗಳ ಚರ್ಚೆ ಇದರಲ್ಲಿದೆ. 

About the Author

ಕಲಿಗಣನಾಥ ಗುಡದೂರು
(11 October 1974)

 ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಗುಡದೂರು ಗ್ರಾಮದವರಾದ ಕಲಿಗಣನಾಥ ಅವರು ವೃತ್ತಿಯಂದ ಪತ್ರಕರ್ತ. ಕಥೆ, ಕವನ, ಲೇಖನಗಳನ್ನು ಬರೆದಿದ್ದರೂ ಸಾಹಿತ್ಯಲೋಕದಲ್ಲಿ ’ಕತೆಗಾರ’ ಎಂದೇ ಚಿರಪರಿಚಿತ. ಜಾಗತೀಕರಣದ ನಂತರದ ಹೊಸ ತಲೆಮಾರಿನ ತಲ್ಲಣಗಳಿಗೆ ಸ್ಪಂದಿಸುವ ಕಲಿಗಣನಾಥ ಅವರು, ಬದಲಾದ ಗ್ರಾಮೀಣ ಆರ್ಥಿಕತೆ ಸಂಕಷ್ಟ ಹಾಗೂ ಸಾಮಾಜಿಕ ಸ್ಥಿತ್ಯಂತರಗಳನ್ನು ತಮ್ಮ ಕತೆಗಳಲ್ಲಿ ದಾಖಲಿಸುತ್ತಾರೆ. ಮತಾಂತರ, ಮಾಮೂಲಿ ಗಾಂಧಿ, ತೂತುಬೊಟ್ಟು (ಕಥಾ ಸಂಕಲನಗಳು) ಪ್ರಕಟಿತ ಕೃತಿಗಳು. ...

READ MORE

Related Books