ಪಾವನಗಂಗೆಯರು ಸಂಪುಟ -3

Author : ಎಸ್. ವಿ. ಪ್ರಭಾವತಿ

Pages 266

₹ 300.00




Year of Publication: 2022

Synopsys

ಲೇಖಕಿ ಎಸ್.ವಿ ಪ್ರಭಾವತಿ ಅವರ ಕಾದಂಬರಿ ‘ಪಾವನಗಂಗೆಯರು ಸಂಪುಟ -3’ " ಅನುದಿನ(ದ) ಅಂತರಗಂಗೆ " ಎಂಬ ಹೆಸರಿನ ಎರಡು ಸಂಪುಟಗಳಲ್ಲಿ ಪ್ರಕಟವಾದ ಈ ಎಂಟು ಕಾದಂಬರಿಗಳ ಪ್ರತಿಗಳು ಲಭ್ಯವಿಲ್ಲವಾಗಿ ಅದೇ ಪ್ರಕಾಶಕರಿಂದ ನಾಲ್ಕು ಸಂಪುಟಗಳಲ್ಲಿ " ಪಾವನ ಗಂಗೆಯರು " ಎಂಬ ಹೆಸರಿನಿಂದ ಪ್ರಕಟವಾಗಿದೆ. ಇದರ 3ನೇ ಸಂಪುಟ ಪಾವನಗಂಗೆಯರು ಸಂಪುಟ -3 (ಗಾರ್ಗಿ -ಯಶೋಧರೆ).

ಲೇಖಕಿಯ ಮಾತಿನಲ್ಲಿ, ’ಶಾಕುಂತಲ ಬರೆಯುವ ವೇಳೆಗೆ ಕಾಲಘಟ್ಟದ ಬಗ್ಗೆ ಭ್ರಮನಿರಸನವಾಗಿತ್ತು. ಮಹಾಭಾರತ ದ ಶಾಕುಂತಲೋಪಾಖ್ಯಾನ ಓದಿದ್ದೆ. ಕಾಳಿದಾಸನ ಪಾಠ ಮಾಡಿ ನುರಿತಿದ್ದೆ . ದುಷ್ಯಂತನನ್ನು ನಿರಪರಾಧಿಯಾಗಿಸಲು ಅವನು ಹೆಣೆದ ಮೋಹಕ ಹೆಣಿಗೆ ಯೇ ‘ ಉಂಗುರ’ ಮತ್ತು ‘ಶಾಪ’ . ಇವೆರಡೂ ಮೂಲ ಕತೆ ಯಲ್ಲಿ ಇಲ್ಲ. ನಾನು ಮೂಲ ಕತೆ ಯನ್ನು ಆಧರಿಸಿ ಬರೆದೆ . ಏಕೆಂದರೆ ಸ್ತ್ರೀ ವಾದಿಗಳು ದುಷ್ಯಂತನನ್ನು ಕ್ಷಮಿಸುವುದಿಲ್ಲ.ಮಾಸ್ತಿ ,ಎಂ ಎಸ್‌ ವೇದಾ ಇವರ ಕತೆ ಗೂ ನನ್ನ ಕತೆಗೂ ಇರುವ ಹೋಲಿಕೆ ಕಂಡು ಆಶ್ಚರ್ಯ ವಾಯಿತು . ಒಂದೇ ಸಮನೆ ವರ್ಷಕ್ಕೊಂದರಂತೆ ಬಂದ ಕಾದಂಬರಿ ಸರಣಿಗೆ ಬ್ರೇಕ್ ಬಿತ್ತು . ನಿಮ್ಮ ಬರವಣಿಗೆಯ ರೀತಿಗೆ ‘ಗಾರ್ಗಿ ಯ ಕತೆ ಹೊಂದುತ್ತದೆ ಎಂಬ ಮಲ್ಲೇಪುರಂ ಅವರ ಮಾತಿನಿಂದ ಯಜುರ್ವೇದ , ಬೃಹದಾರಣ್ಯಕ ತೈತ್ತಿರೀಯ ಮೊದಲಾದ ಉಪನಿಷತ್ತು ಗಳು , ದೇವುಡು ಅವರ ಮಹಾದರ್ಶನ .... ಇವಿಷ್ಟನ್ನು ಓದಿ ಕರಗತ ಮಾಡಿಕೊಂಡು ಗಾರ್ಗಿ ಬರೆಯುವ ವೇಳೆಗೆ ಐದು ವರ್ಷಗಳಾಗಿತ್ತು. ಆಗ ಮತ್ತೆ ಪ್ರಾರಂಭವಾಗಿದ್ಧ ಪ್ರಜಾಮತ ದಲ್ಲಿ ಧಾರಾವಾಹಿ ಯಾಗಲೆಂದು ಕೊಟ್ಟು , ಪ್ರಜಾಮತ ನಿಂತುಹೋಯಿತು. ಜೆರಾಕ್ಸ್ ಮಾಡಿಸಿರಲಿಲ್ಲವಾಗಿ ಗಾರ್ಗಿ ಕಳೆದುಹೋದಳು . ಹಸ್ತಪ್ರತಿ ಸಿಕ್ಕಿ ಮತ್ತೆ ಪ್ರಕಟವಾಗಿದ್ದು ನನ್ನ ಅದೃಷ್ಟ . ಕಮಲಾ ಹೆಮ್ಮಿಗೆ ಅವರು ಸಂಕ್ರಮಣ ಕ್ಕೆ ಬರೆದ ಇದರ ವಿಮರ್ಶೆ ಇನ್ನೊಂದು ಅದೃಷ್ಟ ಎಂಬುದಾಗಿ ಹೇಳಿದ್ದಾರೆ.

About the Author

ಎಸ್. ವಿ. ಪ್ರಭಾವತಿ
(27 May 1950)

ಸ್ತ್ರೀವಾದಿ ಚಿಂತಕಿ ಎಂದೇ ಹೆಸರು ಗಳಿಸಿರುವ ಪ್ರಭಾವತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆ ಪ್ರಾರಂಭಿಸಿದ ಅವರ ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಕಥೆ, ಕವನ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟ. ಕನ್ನಡಿಗರ ಕನ್ನಡಿ, ...

READ MORE

Related Books