ಚಿನ್ಮಯಿ

Author : ಕೇಶವ ಕುಡ್ಲ

Pages 168

₹ 130.00




Year of Publication: 2014
Published by: ಸಿವಿಜಿ ಪಬ್ಲಿಕೇಷನ್ಸ್
Address: ನಂ.70, 2ನೇ ಮುಖ್ಯರಸ್ತೆ, ಜಬ್ಬರ್ ಬ್ಲಾಕ್, ವೈಯ್ಯಾಲಿಕಾವಲ್, ಬೆಂಗಳೂರು- 560003
Phone: 080-23313400

Synopsys

'ಚಿನ್ಮಯಿ' ಲೇಖಕ ಕೇಶವ ಕುಡ್ಲ ಅವರ ನೀಳ್ಗತೆ. ತುಳುನಾಡಿನ ಬಾಯ್ದೆರೆ ಸಾಹಿತ್ಯವಾದ ಪಾಡ್ದನದ ಬಗ್ಗೆ ಒಂದಷ್ಟು ತಿಳಿದುಕೊಳ್ಳಬೇಕು ಎಂದು ಪಾಡ್ದನ ಎಂಬುದು ಸುಲಭಕ್ಕೆ ಎಲ್ಲರ ಅಂಕೆಗೆ ಸಿಕ್ಕುವ ವಸ್ತುವಲ್ಲ. ಕೇವಲ ತುಳುಭಾಷೆ ಅಷ್ಟೆ ಅಲ್ಲದೆ ಜನಪದ ತುಳುವಿನ ಮಹಾಜ್ಞಾನವೂ ಇರಬೇಕಾಗುತ್ತದೆ. ನನಗೆ ಅದು ಗಗನಕುಸುಮ ಎನ್ನಿಸಿದರೂ, ಅದರ ಆಳಕ್ಕಿಳಿಯಲಾಗದಿದ್ದರೂ ಮೇಲ್ಪದರವನ್ನದರೂ ಸ್ಪರ್ಷಿಸುವ ಎನ್ನಿಸಿ ಮೊದಲಿಗೆ ಸಿರಿ ಪಾಡ್ದನದ ಬಗ್ಗೆ ಒಂದಷ್ಟು ಓದು ನಡೆಸಿದೆ. ತುಳು ಸಂಶೋಧಕರ ಜೊತೆ ಮಾತನಾಡಿದೆ.. ಆದರೆ ವಿಷಯವನ್ನು ಸರಿಯಾಗಿ ಸ್ವೀಕರಿಸಿದ್ದೇನೋ ಇಲ್ಲವೋ ಗೊತ್ತಿಲ್ಲ. ನಂತರ ಸಿರಿಯ ಮಹಾಕಥಾನಕ ಸಂಭವಿಸಿದ ಊರುಗಳನ್ನು ನೋಡುವ ಉಮೇದಿನಿಂದ ಕಥೆಯ ಪ್ರಕಾರ ಸಿರಿ ನಡೆದಾಡಿದ ಮತ್ತು ಆಕೆಯ ಜೀವನದ ಮಹತ್ವದ ಸಂಗತಿಗಳು ಸಂಭವಿಸಿದ ನಂದಳಿಕೆ, ಕವತ್ತಾರು, ಕಾಂತಾವರ, ಬೋಳ ಇತ್ಯಾದಿ ಹಲವಾರು ಜಾಗಗಳನ್ನು ನೋಡಿ ಬಂದೆ ಮತ್ತು ಅದ್ಭುತವಾದ ನಂದಳಿಕೆಯ ಸಿರಿಯ ಮಹಾಜಾತ್ರೆಯ ಎಲ್ಲವನ್ನೂ ರಾತ್ರೆಯಿಡೀ ನೋಡಿ ನೇರ ಅನುಭವ ಪಡೆದೆ. ಇವುಗಳ ಹಿನ್ನೆಲೆಯಲ್ಲಿ ಒಂದು ಕಥೆ ಬರೆಯಲು ಹೊರಟಾಗ ಅದು ನೀಳ್ಗತೆಯಾಯಿತು. ವಸ್ತು ನೀಳ್ಗತೆಯ ವ್ಯಾಪ್ತಿಗೆ ಕಡಿಮೆಯಾಯಿತೇನೋ ಎನ್ನಿಸಿದರೂ ಮೂಲ ಕಥೆಯ ಜೊತೆಗೆ ಇಲ್ಲಿನ ಜನಜೀವನದ ಕೆಲವು ಅಂಶಗಳನ್ನು ಸೇರಿಸಬೇಕೆಂಬ ಬಯಕೆಯ ಕಾರಣದಿಂದ ನೀಳ್ಗತೆಯಾಗಿದೆ.

About the Author

ಕೇಶವ ಕುಡ್ಲ

ಕೇಶವ ಕುಡ್ಲ ಅವರು ಮೂಲತಃ ದಕ್ಷಿಣ ಕನ್ನಡದವರು. ವಿಮಾಕಂಪೆನಿಯಲ್ಲಿ ಮೂರು ದಶಕ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮುಖ್ಯವಾಗಿ ಕೀಟ ಲೋಕದ ಛಾಯಾಗ್ರಹಣ, ಚಾರಣ ಮತ್ತು ಬರವಣಿಗೆ ಅವರ ಪ್ರಿಯ ಹವ್ಯಾಸ. ಇದುವರೆಗೆ 112 ಕಥೆಗಳು ಮತ್ತು ಒಂದು ಕಾದಂಬರಿ ಪ್ರಕಟವಾಗಿರುತ್ತದೆ., 400ಕ್ಕೂ ಹೆಚ್ಚು ಲೇಖನಗಳು ಮತ್ತು ಅದಕ್ಕೆ ಪೂರಕವಾಗಿ ಸುಮಾರು 2000 ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಶಸ್ತಿಗಳು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಬಹುಮಾನ, ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೃತಿಗಳು: ಒಡಲಾಳದ ಕತೆಗಳು, ಕಥಾ ಪಯಣ’ ...

READ MORE

Related Books