ದಾಸ ಸಾಹಿತ್ಯ ಸೌರಭ

Author : ಟಿ.ಎನ್. ನಾಗರತ್ನ

Pages 360

₹ 225.00




Year of Publication: 2015
Published by: ಡಿ.ವಿ.ಕೆ. ಮೂರ್ತಿ
Address: ಕೃಷ್ಣಮೂರ್ತಿಪುರಂ, ಮೈಸೂರು-4

Synopsys

ಲೇಖಕಿ ಟಿ.ಎನ್. ನಾಗರತ್ನ ಅವರು ಬರೆದ ದಾಸ ಸಾಹಿತ್ಯ ಸೌರಭ ಕೃತಿಯು ದಾಸ ಸಾಹಿತ್ಯ ಅಧ್ಯಯನಯೋಗ್ಯವಾಗಿದೆ. ಸಾಮಾಜಿಕ ಸುಧಾರಣೆಯಲ್ಲಿ ಭಕ್ತಿಪಂಥದ ದಾಸ ಸಾಹಿತ್ಯದ ಪಾತ್ರವೂ ಇದೆ. ದೇವರನ್ನು ಒ;ಲಿಸಿಕೊಳ್ಳುವ ಮಾರ್ಗವನ್ನು ಬೋಧಿಸುತ್ತಲೇ ದಾಸ ಸಾಹಿತ್ಯವು ಜನಮಾನಸದಲ್ಲಿ ಬೇರೂರಿದ್ದ ಜಾತಿ ತಾರತಮ್ಯ, ವೈಮನಸ್ಸು ಹಾಗೂ ಕೋಮುಭಾವನೆಳನ್ನು ನಿರ್ಮೂಲನೆಗೊಳಿಸಲು ಯತ್ನಿಸಿದ್ದನ್ನು ಕಾಣಬಹುದು. ದಾಸ ಸಾಹಿತ್ಯವು ಕೇವಲ ದೇವರ ನಾಮಸ್ಮರಣೆಯಲ್ಲೇ ತೃಪ್ತಿ ಹೊಂದುತ್ತದೆ ಎನ್ನುವುದಕ್ಕಿಂತ, ಸಮಾಜದ ಆರೋಗ್ಯಕ್ಕಾಗಿ ಜನರನ್ನು ತಯಾರುಗೊಳಿಸುತ್ತದೆ. ಈ ನಿಟ್ಟಿನಲ್ಲಿ ದಾಸ ಸಾಹಿತ್ಯದ ಅಧ್ಯಯನ ಇಲ್ಲಿದೆ. ದಾಸ ಸಾಹಿತ್ಯದ ಸೌಂದರ್ಯವನ್ನು ಮನದಟ್ಟು ಮಾಡಿಕೊಡಲಾಗಿದೆ.

About the Author

ಟಿ.ಎನ್. ನಾಗರತ್ನ
(29 May 1945)

ಶ್ರೀಮತಿ ಡಾ. ಟಿ.ಎನ್.ನಾಗರತ್ನ ಇವರು ಹರಿದಾಸ ಸಾಹಿತ್ಯದಲ್ಲಿ ಮಹತ್ವದ ಹೆಸರು. 35 ವರ್ಷಗಳ ಕಾಲ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರಿನಲ್ಲಿ, ಸಂಶೋಧನ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಹಲವು ಕೀರ್ತನೆಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ನಾಗರತ್ನರವರು ಹುಟ್ಟಿದ್ದು ಮಧ್ಯಪ್ರದೇಶದ ಸಿಯೋನಿಯಲ್ಲಿ 1945 ಮೇ 29ರಂದು. 1965ರಲ್ಲಿ ಪ್ರಥಮದರ್ಜೆ, ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಪಡೆದ ಬಿ.ಎ. ಪದವಿ. ನಂತರ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿ. ಇಲ್ಲೂ ಕೂಡ ಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕದೊಡನೆ ಗಳಿಸಿದ ಪದವಿ. 1970ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ ...

READ MORE

Related Books