ಸಮಗ್ರ ದಾಸ ಸಾಹಿತ್ಯ ಸಂಪುಟ: 10 ಭಾಗ 1

Author : ಕೆ. ಗೋಕುಲನಾಥ

Pages 421

₹ 60.00




Year of Publication: 2003
Published by: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
Address: ಬೆಂಗಳೂರು

Synopsys

‘ಸಮಗ್ರ ದಾಸ ಸಾಹಿತ್ಯ ಸಂಪುಟ: 10 ಭಾಗ 1’ ಶ್ರೀವಿಜಯದಾಸರ ಸುಳಾದಿಗಳು (ಕ್ಷೇತ್ರದರ್ಶನ) ಈ ಕೃತಿಯನ್ನು ಡಾ. ಕೆ. ಗೋಕುಲನಾಥ ಅವರು ಸಂಪಾದಿಸಿದ್ದಾರೆ. ಈ ಕೃತಿಯಲ್ಲಿ ಮುನ್ನುಡಿ, ಎರಡು ಮಾತು, ಯೋಜನೆಯ ಕುರಿತು, ಪ್ರಕಾಶಕರ ಮಾತು, ಸಂಪಾದಕ ಮಂಡಲಿಯ ನುಡಿ, ಪ್ರಸ್ತಾವನೆ, ವಿಜಯದಾಸರ ಕ್ಷೇತ್ರದರ್ಶನ ಸುಳಾದಿಗಳು ಸೇರಿದಂತೆ ಅನುಬಂಧಗಳಲ್ಲಿ ಕಠಿಣಶಬ್ದಗಳ ಅರ್ಥ, ಟಿಪ್ಪಣಿಗಳು, ಸುಳಾದಿಗಳ ಆಕಾರಾದಿ, ಸುಳಾದಿಗಳ ಕ್ಷೇತ್ರಾನುಕ್ರಮಣಿಕೆ ಹಾಗೂ ಸಹಾಯಕ ಸಹಾಯಕ ಸಾಹಿತ್ಯ ಸಂಕಲನಗೊಂಡಿವೆ.

About the Author

ಕೆ. ಗೋಕುಲನಾಥ

ಕೆ. ಗೋಕುಲನಾಥ್ ಅವರು ಮೈಸೂರಿನವರು. ಸ್ನಾತಕೋತ್ತರ ಪದವೀಧರರು ದಾಸ ಸಾಹಿತ್ಯದ ಹಿರಿಯ ಸಂಶೋಧಕ.  ‘ವಿಜಯದಾಸರ ಜೀವನ ಮತ್ತು ಕೃತಿಗಳ ಸಮೀಕ್ಷೆ’ ಗೋಕುಲನಾಥರ ಪಿಎಚ್.ಡಿ ಅಧ್ಯಯನದ ವಿಷಯ.  ದಾಸ ಸಾಹಿತ್ಯದ ದಾಖಲೀಕರಣ ಮತ್ತು ಪ್ರಚಾರವನ್ನೇ ಬದುಕಿನ ಮಾರ್ಗವಾಗಿಸಿ ಕೊಂಡಿರುವರು. .ಆಚಾರ್ಯ ಪಾಠಶಾಲಾ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರು. ದಾಸ ಸಾಹಿತ್ಯ ರಚನೆ, ಪ್ರವಚನ, ಪ್ರಬಂಧ ಮಂಡನೆ, ಉಪನ್ಯಾಸಗಳೇ ಇವರ ಬದುಕಿನ ನಡೆ. 19 ಕೃತಿಗಳನ್ನು ರಚಿಸಿದ್ದು, ರಾಷ್ಟ್ರ-ರಾಜ್ಯ ಮಟ್ಟದ ಸಮ್ಮೇಳನಗಳಲ್ಲಿ 100ಕ್ಕೂ ಅಧಿಕ ಪ್ರಬಂಧಗಳ ಮಂಡಿಸಿದ್ದಾರೆ. ಕೀರ್ತನ ಕಮ್ಮಟಗಳ ಆಯೋಜನೆ,  25ಕ್ಕೂ ಹೆಚ್ಚು ಉಪನ್ಯಾಗಳು, 76 ಪುಸ್ತಕ ವಿಮರ್ಶೆ,  ಸಮಗ್ರ ದಾಸಸಾಹಿತ್ಯ ಯೋಜನೆಯ ಸಂಪಾದಕತ್ವದಲ್ಲಿಯೂ ಆಸಕ್ತಿ.    ಕೃತಿಗಳು : ...

READ MORE

Related Books