ಪುರಂದರದಾಸರ ಬಂಡಾಯ ಪ್ರಜ್ಞೆ

Author : ಶ್ರೀನಿವಾಸ್ ಸಿರನೂರಕರ್

₹ 180.00




Year of Publication: 2020
Published by: ಸಂಸ್ಕೃತಿ ಪ್ರಕಾಶನ
Address: ವಾಹಿನಿ ವಿಹಾರ, ಬಸವನಗರ, ಸೇಡಂ, ಕಲಬುರಗಿ ಜಿಲ್ಲೆ

Synopsys

‘ಪುರಂದರದಾಸರ ಬಂಡಾಯ ಪ್ರಜ್ಞೆ’ ಕೃತಿಯು ಶ್ರೀನಿವಾಸ ಸಿರನೂರಕರ್ ಅವರ ದಾಸ ಲೇಖನಗಳ ಸಾಹಿತ್ಯವಾಗಿದೆ. ವಚನ ಸಾಹಿತ್ಯ, ಹರಿದಾಸ ಸಾಹಿತ್ಯಗಳ ಸೃಷ್ಟಿಯ ಹಿಂದಿನ ಆಶಯಗಳನ್ನೂ ಇಲ್ಲಿನ ಒಂದು ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ. ಪುರಂದರ-ಕನಕರಿಬ್ಬರೂ ವ್ಯಾಸರಾಯರ ನೇತೃತ್ವದಲ್ಲಿ ಸಾಹಿತ್ಯ ಕೃಷಿಯನ್ನು ಆಂದೋಲನದ ರೀತಿಯಲ್ಲಿ ನಡೆಸಿದ್ದನ್ನೂ ಈ ಕೃತಿ ನೆನಪಿಸಿಕೊಡುತ್ತದೆ. ಕೀರ್ತನೆಗಳನ್ನು ಸಂಗೀತಕ್ಕೆ ಅಳವಡಿಸಿಕೊಳ್ಳುವ ಮಾರ್ಗವನ್ನೂ ತೋರಿಸಿ ಕರ್ನಾಟಕ ಸಂಗೀತಕ್ಕೆ ಬುನಾದಿ ಹಾಕಿಕೊಟ್ಟ ಪುರಂದರದಾಸರ ಕೊಡುಗೆಯನ್ನೂ ಇಲ್ಲಿ ನೆನಪಿಸಲಾಗಿದೆ.

About the Author

ಶ್ರೀನಿವಾಸ್ ಸಿರನೂರಕರ್

ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ್‌ ಅವರು ಸದ್ಯ ಕಲಬುರಗಿ ನಿವಾಸಿ ಆಗಿದ್ದಾರೆ. ಇಂಡಿಯನ್‌ ಎಕ್ಸ್‌ಪ್ರೆಸ್‌, ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿರುವ ಶ್ರೀನಿವಾಸ ಅವರು ಸದ್ಯ ನಿವೃತ್ತರಾಗಿದ್ದಾರೆ. ಹಿಂದೂ ಕಾನೂನು ಗ್ರಂಥ ರಚಿಸಿದ ವಿಜ್ಞಾನೇಶ್ವರನ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀನಿವಾಸ ಅವರು ಆ ಕುರಿತು ಎರಡು ಪುಸ್ತಕ ಪ್ರಕಟಿಸಿದ್ದಾರೆ. ಹೈದರಾಬಾದ್‌ ಕರ್ನಾಟಕದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಲೇಖನ ರಚಿಸಿದ್ದಾರೆ. ...

READ MORE

Related Books