ಜೀವನ ದರ್ಶನ-1

Author : ಸಾ. ಕೃ. ರಾಮಚಂದ್ರರಾವ್

Pages 446

₹ 65.00




Year of Publication: 1985
Published by: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
Address: ನೃಪತುಂಗ ರಸ್ತೆ, ಬೆಂಗಳೂರು-560002

Synopsys

ಪುರಂದರ ದಾಸ ಸಾಹಿತ್ಯ ಹಾಗೂ ಜೀವನ ದರ್ಶನ ಕುರಿತು ಹಿರಿಯ ಸಾಹಿತಿ ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರು ಬರೆದ ಕೃತಿ-ಪುರಂದರ ಸಾಹಿತ್ಯ-ಜೀವನ ದರ್ಶನ-1'. ಶ್ರೀ ಪುರಂದರ ದಾಸರ 5ನೇ ಶತಮಾನೋತ್ಸವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಈ ಕೃತಿ ಪ್ರಕಟಿಸಿದೆ. ಜಗನ್ನಾಥ ದಾಸರು, ವಿಜಯ ದಾಸರು, ತ್ಯಾಗರಾಜ ದಾಸರು, ಪ್ರಸನ್ನ ವೆಂಕಟ ದಾಸರು ಹೀಗೆ ವಿವಿಧ ದಾಸರ ಮಹಿಮೆಗಳನ್ನು ಬಿಂಬಿಸುವ ಮೊದಲ ಅಧ್ಯಾಯ-ಮಹಿಮಾ ದರ್ಶನ, ನಂತರದಲ್ಲಿ ಪುರಂದರ ದಾಸರ ಸಂಪೂರ್ಣ ಜೀವನದ ಚಿತ್ರಣ ಮತ್ತು ಅರುಣಗಿರಿ, ಅಹೋಬಲ, ಕಂಚಿ, ಉಡುಪಿ, ಬೇಲೂರು, ಭದ್ರಾಚಲ, ಮೇಲುಕೋಟೆ, ಶೃಂಗಾರ ಪುರ, ಹರಿಹರ, ಹಂಪಿ ಹೀಗೆ ಪುರಂದರ ಸುತ್ತಿದ ಕ್ಷೇತ್ರಗಳ ಮಹಿಮೆ ಚಿತ್ರಣ ಈ ಕೃತಿಯ ವೈಶಿಷ್ಟ್ಯ.

About the Author

ಸಾ. ಕೃ. ರಾಮಚಂದ್ರರಾವ್
(04 September 1927 - 02 February 2006)

ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು ಅದ್ವಿತೀಯ ವಿದ್ವಾಸರು. ಹಾಸನದಲ್ಲಿ ಜನಿಸಿದರು. ತಂದೆ ಶ್ರೀಕೃಷ್ಣ ನಾರಾಯಣ ರಾವ್, ತಾಯಿ ಕಮಲಾಬಾಯಿ. ಬೆಂಗಳೂರಿನಲ್ಲಿಯ ತಾತನ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಇವರು 12ನೇ ವಯಸ್ಸಿನಲ್ಲಿದ್ದಾಗ ತಾತನವರು ತೀರಿಕೊಂಡರು. ನಂತರ ನಂಜನಗೂಡಿಗೆ ಹೋಗಿ ತಂದೆಯವರಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮುಂದುವರಿಸಿದರು. ಅಲ್ಲಿ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಸಂಪರ್ಕದಲ್ಲಿ ವಿದ್ಯಾಭ್ಯಾಯ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರಿಗೆ ಸಂಗೀತಾಭ್ಯಾಸದ ಆಸಕ್ತಿ ಯೂ ಆಪಾರವಾಗಿತ್ತು. ಭಾರತೀಯ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ...

READ MORE

Related Books