ಹರಿದಾಸರ ಸಮಾಜಮುಖಿ ಕೀರ್ತನೆಗಳು ಸಂಪುಟ-3

Author : ಸ್ವಾಮಿರಾವ್ ಕುಲಕರ್ಣಿ

Pages 262

₹ 200.00




Published by: ವಿಜಯ ಪ್ರಕಾಶನ
Address: ವಿಜಯಪುರ
Phone: 9342018470

Synopsys

‘ಹರಿದಾಸರ ಸಮಾಜಮುಖಿ ಕೀರ್ತನೆಗಳು ಸಂಪುಟ-3’ ಕೃತಿಯು ಸ್ವಾಮಿ ರಾವ್ ಕುಲಕರ್ಣಿ ಅವರ ಲೇಖನಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಬಹುತೇಕ ಸಾಹಿತ್ಯ, ಅರಮನೆ-ಗುರುಮನೆ ಮತ್ತು ಪಂಡಿತರ ಮನೆಮನೆಗಳಷ್ಟೇ ಸೀಮಿತವಾಗಿರುತ್ತದೆ. ಆದರೆ ಹರಿದಾಸ ಸಾಹಿತ್ಯವು ಈ ಮೂರೂ ಮನೆಗಳೊಂದಿಗೆ ಪಾಮರರ ಮನೆಯನ್ನೂ ಮುಟ್ಟಿತು. ಹರಿದಾಸ ಸಾಹಿತ್ಯವು ಎಲ್ಲ ಯುಗದಲ್ಲೂ ಸಲ್ಲುವಂಥದ್ದು. ದಲಿತವರ್ಗದಿಂದ ಹಿಡಿದು ಸಮಾಜದ ಅತ್ಯಂತ ಪ್ರಬಲ ವರ್ಗದವರೆಗೆ ಎಲ್ಲರಲ್ಲೂ ಹರಿದಾಸ ಸಾಹಿತ್ಯ ಸ್ವೀಕಾರವಾಗಿದೆ. ದ್ಯಾವವ್ವ, ದುರ್ಗವ್ವರ ಗುಡಿಗಳಲ್ಲಿ, ಎಲ್ಲ ವರ್ಗದ ಭಜನೆಗಳಲ್ಲಿ ಕೂಡ ದಸರ ಪದಗಳು ಅಂದಿನಿಂದಲೂ ಪ್ರವೇಶ ಪಡೆದಿದೆ ಎಂದು ವಿಶ್ಲೇಷಿಸಲಾಗಿದೆ. ದೇವರ ಆರಾಧನೆಗೆ ಜನಸಾಮಾನ್ಯರಿಗಿದ್ದ ಎಲ್ಲ ತೊಡಕುಗಳನ್ನು ನಿವಾರಣೆ ಮಾಡಿದ್ದು ದಾಸ ಸಾಹಿತ್ಯದ ಬಹುಮುಖ್ಯ ಲಕ್ಷಣವಾಗಿದೆ ಎಂದು ಈ ಕೃತಿಯು ಹೇಳುತ್ತದೆ.

About the Author

ಸ್ವಾಮಿರಾವ್ ಕುಲಕರ್ಣಿ

ಶಿರಪುರ ಪ್ರಕಾಶನದ ಪ್ರಕಾಶಕರು ಹಾಗೂ ಲೇಖಕರು ಆಗಿರುವ ಸ್ವಾಮಿರಾವ ಕುಲಕರ್ಣಿ ಅವರು ವೃತ್ತಿಯಲ್ಲಿ ಅಧ್ಯಾಪಕರು. ಕನ್ನಡ ಸಾಹಿತ್ಯದಲ್ಲಿ ಪದವಿ ಹಾಗೂ ದಾಸ ಸಾಹಿತ್ಯ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಸುಮಾರು 19 ವರ್ಷಗಳ ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಗೋನವಾರದ ರಾಮದಾಸರು, ಹಳ್ಳಿಯಿಂದ ದಿಲ್ಲಿಗೆ, ಕಳದೈತೋ ಪ್ರೀತಿ ಕಳದೈತಿ, ರಂಗ ನಾಟಕಗಳ ರಸಪ್ರಸಂಗಗಳು, ಬಾನಂಗಳದಿಂದ, ದಾಸ ದರ್ಶನ, ಹುಟ್ಟಿ ಬೆಳೆದಾ ಹಳ್ಳಿ, ಪುರಂದರದಾಸರು, ಮಂಥನ, ಮಂತ್ರಾಲಯದ ರಾಘವೇಂದ್ರರು ಮುಂತಾದವು ಇವರ ...

READ MORE

Related Books