ಪುರಂದರ ಸಾಹಿತ್ಯ ದರ್ಶನ-2

Author : ಸಾ. ಕೃ. ರಾಮಚಂದ್ರರಾವ್

Pages 482

₹ 65.00




Year of Publication: 1985
Published by: ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ
Address: ನೃಪತುಂಗ ರಸ್ತೆ, ಬೆಂಗಳೂರು-560002

Synopsys

ಹಿರಿಯ ಸಾಹಿತಿ ಪ್ರೊ. ಎಸ್.ಕೆ. ರಾಮಚಂದ್ರರಾವ್ ಅವರು ಪುರಂದರ ಸಾಹಿತ್ಯ ಹಾಗೂ ಬದುಕು ಕುರಿತು ಚಿತ್ರಿಸಿದ ಕೃತಿ-ಪುರಂದರ ಸಾಹಿತ್ಯ ದರ್ಶನ-2. ಹರಿದಾಸರ ಅಧ್ಯಾತ್ಮಿಕ ದೃಷ್ಟಿ, ತಾರತಮ್ಯ ಸ್ತೋತ್ರ,ಗುರುಸ್ತುತಿ, ಗಣಪತಿ, ವಾಯು. ರಮಾ. ಹರಿ ಸೇರಿದಂತೆ ದೇವತಾ ದರ್ಶನ, ಹರಿಸರ್ವೋತ್ತಮ, ಅವತಾರ ವಿಶೇಷ ಸೇರಿದಂತೆ ಮಹಾತ್ಮರ ದರ್ಶನ, ವಿರಕ್ತಿ-ಭಕ್ತಿ ಸೇರಿದಂತೆ ಸಾಧನ-ದರ್ಶನ ಗಳನ್ನು ಕೃತಿಯಲ್ಲಿ ಚರ್ಚಿಸಲಾಗಿದೆ. ಪುರಂದರದಾಸರು ಹರಿದಾಸರಾಗುವ ಮುನ್ನ ಅವರ ಆಚಾರ-ವಿಚಾರಗಳೇನು? ನಂಬಿಕೆಗಳೇನು?, ನಿಲುವುಗಳೇನು ಎಂಬುದರ ಜಿಜ್ಞಾಸೆಗೆ ಲೇಖಕರು ಪ್ರಯತ್ನಿಸಿದ್ದಾರೆ. ಹರಿದೀಕ್ಷೆಯ ನಂತರ ಅವರು ಪುರಂದರ ದಾಸರಾಗಿ ಹರಿಯ ಪಥದಲ್ಲಿ ನಡೆದರು ಎಂಬ ನಿಟ್ಟಿನಲ್ಲಿ ಇಲ್ಲಿಯ ಚರ್ಚೆ ಸಾಗಿದೆ.

About the Author

ಸಾ. ಕೃ. ರಾಮಚಂದ್ರರಾವ್
(04 September 1927 - 02 February 2006)

ಪ್ರೊ. ಎಸ್.ಕೆ. ರಾಮಚಂದ್ರ ರಾವ್ ಅವರು ಅದ್ವಿತೀಯ ವಿದ್ವಾಸರು. ಹಾಸನದಲ್ಲಿ ಜನಿಸಿದರು. ತಂದೆ ಶ್ರೀಕೃಷ್ಣ ನಾರಾಯಣ ರಾವ್, ತಾಯಿ ಕಮಲಾಬಾಯಿ. ಬೆಂಗಳೂರಿನಲ್ಲಿಯ ತಾತನ ಮನೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಇವರು 12ನೇ ವಯಸ್ಸಿನಲ್ಲಿದ್ದಾಗ ತಾತನವರು ತೀರಿಕೊಂಡರು. ನಂತರ ನಂಜನಗೂಡಿಗೆ ಹೋಗಿ ತಂದೆಯವರಲ್ಲಿ ನೆಲೆಸಿ ಸಂಸ್ಕೃತಾಭ್ಯಾಸ ಮುಂದುವರಿಸಿದರು. ಅಲ್ಲಿ ಶೃಂಗೇರಿಯ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ವಾಮಿಗಳ ಸಂಪರ್ಕದಲ್ಲಿ ವಿದ್ಯಾಭ್ಯಾಯ ನಡೆಯಿತು. ಮೈಸೂರಿನ ಮಹಾರಾಜ ಕಾಲೇಜು ಹಾಗೂ ಮಾನಸ ಗಂಗೋತ್ರಿಯಲ್ಲಿ ವಿದ್ಯಾಭ್ಯಾಸ ಮಾಡಿ, ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇವರಿಗೆ ಸಂಗೀತಾಭ್ಯಾಸದ ಆಸಕ್ತಿ ಯೂ ಆಪಾರವಾಗಿತ್ತು. ಭಾರತೀಯ ವಿಜ್ಞಾನ ಸಂಶೋಧನೆ ಸಂಸ್ಥೆಯಲ್ಲಿ ...

READ MORE

Related Books