ಹರಿದಾಸರ ಸಮಾಜಮುಖಿ ಚಿಂತನೆಗಳು ಸಂಪುಟ-4

Author : ಜಿ. ಅಶ್ವತ್ಥನಾರಾಯಣ

Pages 252

₹ 200.00




Published by: ವಿಜಯ ಪ್ರಕಾಶನ
Address: ವಿಜಯಪುರ
Phone: 9342018470

Synopsys

‘ಹರಿದಾಸರ ಸಮಾಜಮುಖಿ ಚಿಂತನೆಗಳು ಸಂಪುಟ-4’ ಕೃತಿಯು ಜಿ. ಅಶ್ವತ್ಥನಾರಾಯಣ ಅವರ ಲೇಖನಸಂಕಲವಾಗಿದೆ. ಈ ಕೃತಿಯಲ್ಲಿ ಕೆಲವು ದಾಸರ ತತ್ವಗಳು ವ್ಯಕ್ತವಾಗುತ್ತದೆ. ಸಂಸ್ಕೃದಿಂದಲೇ ಮುಕ್ತಿ ಶಾಸ್ತ್ರಪಾಂಡಿತ್ಯವಿಲ್ಲದವರು ಪಾಮರರು, ಪಾಪಿಗಳು ಎನ್ನುವ ಮನೋಧರ್ಮ ಪ್ರಚಲಿತದಲ್ಲಿದ್ದಾಗ ದಾಸರು ಕನ್ನಡದಲ್ಲಿ ವೇದಾಂತದ ಗಹನ ತತ್ವಗಳನ್ನು ಹೇಳಿದರು. ಕನ್ನಡದಲ್ಲಿಯೇ ಜನಸಾಮಾನ್ಯರು ಮುಕ್ತಿಗೆ ಪೂರ್ವಕವಾದ ಜ್ಞಾನವನ್ನುಪಡೆಯಲು ದಾರಿ ಮಾಡಿಕೊಟ್ಟರು. ದಾಸರ ಕೀರ್ತನೆಗಳಲ್ಲಿ ಬರದೇ ಇದ್ದ ವಿಚಾರಗಳೇ ಇಲ್ಲ. ಧರ್ಮ ನೀತಿ ಸಂಸಾರ, ವೇದಾಂತ ರಾಜಕಾರಣ, ಅರ್ಥನೀತಿ, ಸಾಮಾನ್ಯ ನೀತಿ, ವಿನೋದ ಎಲ್ಲವೂ ಇವೆ. ಮುಖ್ಯವಾಗಿ ಜೀವನಗಂಗೆಯ ಬೃಹಹದ್ದರ್ಶನವನ್ನು ಅವರು ತಮ್ಮ ಸಾಹಿತ್ಯದಲ್ಲಿ ಮಾಡಿಸಿದ್ದಾರೆ ಎಂದು ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.

About the Author

ಜಿ. ಅಶ್ವತ್ಥನಾರಾಯಣ
(12 May 1938)

ಸಂಶೋಧಕರು, ಸಾಹಿತಿ, ಭಾಷಾ ತಜ್ಞ, ವಿಶ್ರಾಂತ ಕನ್ನಡ ಪ್ರಾಧ್ಯಾಪಕರಾದ ಜಿ. ಅಶ್ವತ್ಥನಾರಾಯಣ ಅವರು 1938 ಮೇ 12 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಎಚ್.ಗುಂಡಪ್ಪ, ತಾಯಿ ಜಾನಕಮ್ಮ. ಸಮಾಜಶಾಸ್ತ್ರ ಮತ್ತು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ರಾಜ್ಯದ ನಾನಾ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಪುರುಷೋತ್ತಮ ದಾಸರ ಸಮಗ್ರ ಕೃತಿಗಳು, ವಿಜಯ ದಾಸರ ಸಮಗ್ರ ಕೀರ್ತನೆಗಳು, ರತ್ನಾಕರವರ್ಣಿಯ ಶತಕತ್ರಯ, ಜ್ಞಾನವಂತರಾಗಿ ಜಾಗರೂಕರಾಗಿರಿ, ಉತ್ತಮ ಕ್ಷಮಾಧರ್ಮ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.  ...

READ MORE

Related Books