ಐಸಿರಿ

Author : ಖಾದರ್

Pages 76

₹ 68.00




Year of Publication: 2018
Published by: ಅಭಿನವ ಪ್ರಕಾಶನ
Address: #17/18-2, 1ನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448804905

Synopsys

ಜೈವಿಕ ನಿಯಂತ್ರಣ ರಾಸಾಯನಿಕಗಳ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಡಾ. ಖಾದರ್ ಅವರು ಸಿರಿಧಾನ್ಯಗಳು (ಅರ್ಕ, ಸಾಮೆ, ನವಣೆ, ಊದಲು, ಕೊರಲೆ) ಹಾಗೂ ಅವುಗಳ ಮಹತ್ವವನ್ನು ತಿಳಿಸಿದ್ದು, ಈ ಮಾಹಿತಿ ಕುರಿತು ಅವರು ಆಗಾಗ್ಗೆ ನೀಡಿದ ಉಪನ್ಯಾಸಗಳನ್ನು ಲೇಖಕಿ ಪಿ. ಚಂದ್ರಿಕಾ ಅವರು ನಿರೂಪಿಸಿದ್ದಾರೆ. ಈ ಸಿರಿಧಾನ್ಯಗಳನ್ನು ದೇಹದ ಆರೋಗ್ಯಕ್ಕೆ ಪುಷ್ಟಿ ನೀಡುತ್ತವೆ ಎಂಬ ಪರಂಪರಾಗತ ಜ್ಞಾನವನ್ನು ವಿಸ್ತರಿಸುವುದು ಈ ಕೃತಿಯ ಉದ್ದೇಶವೂ ಆಗಿದೆ.

About the Author

ಖಾದರ್

ಡಾ.ಖಾದರ್ - ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರು. ಶಿಕ್ಷಣ ಹುಟ್ಟಿದೂರಿನಲ್ಲಿಯೇ. ಸ್ನಾತಕೋತ್ತರ ಪದವಿ ಮತ್ತು ಉನ್ನತ ಪದವಿ ಕರ್ನಾಟಕದಲ್ಲಿ. ಜೀವ ರಸಾಯನಶಾಸ್ತ್ರದಲ್ಲಿ ಸಂಶೋಧನೆ. ಆನಂತರ ಅಮೆರಿಕದಲ್ಲಿ ಡುಪಾಂಟ್ ಎಂಬ ಬಹುರಾಷ್ಟ್ರೀಯ ಕಂಪೆನಿಯಲ್ಲಿ ವಿಜ್ಞಾನಿಯಾಗಿ ಜೈವಿಕ ನಿಯಂತ್ರಣ ರಾಸಾಯನಿಕಗಳ ಸಂಶೋಧಕರಾಗಿ ಕೆಲಸ. ಅಮೆರಿಕದಲ್ಲಿ ಡಾ.ಖಾದರ್ ಪದವಿ, ಪ್ರಶಸ್ತಿ, ಸಂಪತ್ತುಗಳನ್ನು ಪಡೆದರೂ ಜೀವಮಾರಕ ರಾಸಾಯನಿಕಗಳ ಸಂಶೋಧನೆಯಿಂದ ಬೇಸತ್ತು ಮೈಸೂರಿಗೆ ಬಂದರು. ಕಾಡುಕೃಷಿ ವಿಧಾನದ ಮೂಲಕ ಅಧ್ಯಯನ ನಡೆಸಲು ಕಬಿನಿ ಜಲಾಶಯದ ದಿಬ್ಬದ ಮೇಲೆ ಬಂಜರು ಭೂಮಿಯನ್ನು ಖರೀದಿಸಿ ಸಿರಿಧಾನ್ಯಗಳ ಕೃಷಿಯಲ್ಲಿ ತೊಡಗಿಕೊಂಡರು. ಕೆಲವೇ ವರ್ಷಗಳಲ್ಲಿ ಅವರ ತಿಳುವಳಿಕೆ ಹೆಚ್ಚಿತು. ಇವರ ಎಂಟು ...

READ MORE

Reviews

ಹಸಿರು ಕ್ರಾಂತಿ ಎಂಬ ಮಾಯಾಮೃಗದ ಬೆನ್ನು ಹತ್ತಿದ್ದರಿಂದಾಗಿ ರೈತ ಮನೋರೋಗಿಯಾದ. ನೆಲದ ಜೀವಸತ್ವ ಹಾಳಾಯಿತು, ತಿನ್ನುವ ಅನ್ನ ವಿಷಮಯವಾಯಿತು, ನೆಲಮೂಲ ತಳಿಗಳ ಸಂತತಿ ನಾಶವಾಯಿತು. ಇದೆಲ್ಲದರ ಘೋರ ಪರಿಣಾಮ ಜೈವಿಕ ಸರಪಳಿಯಲ್ಲಿ ವ್ಯತ್ಯಯ ಉಂಟಾಗಿರುವುದು. ಹೊಸ ಹೊಸ ರೋಗಗಳಿಗೆ ಮನುಷ್ಯ ಬಲಿಯಾಗುತ್ತಾ ಹೋದ. ಇದರ ಅರಿವು ಸರಕಾರಕ್ಕಾಗಲಿ, ರೈತನಿಗಾಗಲಿ ಇನ್ನೂ ಪೂರ್ಣಪ್ರಮಾಣದಲ್ಲಿ ಆಗದೇ ಹೋಗಿರುವುದು ವಿಷಾದನೀಯ ಸಂಗತಿ.
ಡಾ. ಖಾದರ್ ಜೈವಿಕ ನಿಯಂತ್ರಣ ರಾಸಾಯನಿಕಗಳ ಸಂಶೋಧನೆಗೆ ತೊಡಗಿದ ವಿಜ್ಞಾನಿಯಾಗಿ ಅಮೆರಿಕದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರು, ತಮ್ಮ ಸಂಶೋಧನೆಯ ಘೋರ ಪರಿಣಾಮ ಅರಿವಾಗುತ್ತಿದ್ದಂತೆ ಆ ಕೆಲಸ ಬಿಟ್ಟು ಜೈವಿಕ ಪದ್ಧತಿಯ ಕೃಷಿಜ್ಞಾನವನ್ನು ಪ್ರತ್ಯಕ್ಷವಾಗಿ ಮಾಡಿ ತೋರಿಸುವ ರೈತನಾಗಿ "ಯು ಟರ್ನ್" ಜೀವನ ನಡೆಸುತ್ತಿರುವವರು. ನೆಲಮೂಲ ತಳಿಗಳಾದ ಬರಗು, ಹಾರಕ, ನವಣೆ, ಸಾಮೆ, ಕೊರಲೆ, ಊದಲು ಮೊದಲಾದ ಸಿರಿಧಾನ್ಯಗಳನ್ನು ಬೆಳೆಯುತ್ತಾ ಅವುಗಳಲ್ಲಿನ ಜೀವಸತ್ವದ ಅರಿವನ್ನು ಜನರಿಗೆ ಬೋಧಿಸುತ್ತಿದ್ದಾರೆ. ಸಿರಿಧಾನ್ಯಗಳ ವಿಶೇಷತೆಯ ಬಗ್ಗೆ, ಅವುಗಳ ಬಳಕೆಯ ಫಲಶ್ರುತಿಯ ಬಗ್ಗೆ ಡಾ. ಖಾದರ್ ಅವರ ಜ್ಞಾನ ಅಪಾರವಾದದ್ದು. ಇಂಥವರ ರಸಬಳ್ಳಿ ಹಬ್ಬಲಿ. ಜೈವಿಕ ಕೃಷಿಪದ್ಧತಿ ಜೀವಸಂವೃದ್ಧಿಯಿಂದ ಕಂಗೊಳಿಸಲಿ. ಇಂಥ ಅರಿವಿನ ಕೈಗನ್ನಡಿ ಈ ಪುಸ್ತಕ.

-ಎಸ್. ಜಿ. ಸಿದ್ಧರಾಮಯ್ಯ, ಕವಿ ಮತ್ತು ಜೈವಿಕ ಕೃಷಿಕ

Related Books