ತಿಳಿದು ತಿನ್ನಿ...!

Author : ಖಾದರ್

Pages 80

₹ 50.00




Year of Publication: 2016
Published by: ಕೃಷಿ ಭಾರತ್ ಪ್ರಕಾಶನ
Address: ಬೆಂಗಳೂರು

Synopsys

ಸಿರಿಧಾನ್ಯಗಳ ತರಾವರಿ ತಿನಿಸುಗಳು ಹಿನ್ನೆಲೆಯಲ್ಲಿ ತಿಳಿದು ತಿನ್ನಿ ಎಂಬ ಉತ್ತಮ ಹಾಗೂ ಮಹತ್ವದ ಗ್ರಂಥವನ್ನು ಡಾ. ಖಾದರ್ ಅವರು ಚಂದ್ರಶೇಖರ ಬಾಳೆ, ಎನ್. ಇಂದಿರಮ್ಮ ಹಾಗೂ ರಾಮಕೃಷ್ಣಪ್ಪ ಅವರೊಂದಿಗೆ ಸೇರಿ ಪ್ರಕಟಿಸಿದ ಈ ಕೃತಿಯು , ಆಹಾರ ಸೇನೆಯ ಮಹತ್ವವನ್ನು ತಿಳಿಸಿದೆ. ರೋಗನಿವಾರಣೆಗೆ ಅಥವಾ ರೋಗ ನಿರೋಧಕ ಶಕ್ತಿ ಉತ್ಪಾದನೆಗೆ ಸಿರಿಧಾನ್ಯಗಳು ಉತ್ತಮ ಆಹಾರಗಳಾಗಿವೆ. ಆಹಾರಗಳ ಸ್ವಭಾವಗಳನ್ನು ತಿಳಿದು ಸೇವಿಸಿದರೆ ಉತ್ತಮ ಆರೋಗ್ಯ ಹೊಂದಬಹುದು ಎಂಬ ಸಲಹೆಗಳನ್ನು ಈ ಕೃತಿಯು ನೀಡುತ್ತದೆ.

About the Author

ಖಾದರ್

ಡಾ.ಖಾದರ್ - ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರು. ಶಿಕ್ಷಣ ಹುಟ್ಟಿದೂರಿನಲ್ಲಿಯೇ. ಸ್ನಾತಕೋತ್ತರ ಪದವಿ ಮತ್ತು ಉನ್ನತ ಪದವಿ ಕರ್ನಾಟಕದಲ್ಲಿ. ಜೀವ ರಸಾಯನಶಾಸ್ತ್ರದಲ್ಲಿ ಸಂಶೋಧನೆ. ಆನಂತರ ಅಮೆರಿಕದಲ್ಲಿ ಡುಪಾಂಟ್ ಎಂಬ ಬಹುರಾಷ್ಟ್ರೀಯ ಕಂಪೆನಿಯಲ್ಲಿ ವಿಜ್ಞಾನಿಯಾಗಿ ಜೈವಿಕ ನಿಯಂತ್ರಣ ರಾಸಾಯನಿಕಗಳ ಸಂಶೋಧಕರಾಗಿ ಕೆಲಸ. ಅಮೆರಿಕದಲ್ಲಿ ಡಾ.ಖಾದರ್ ಪದವಿ, ಪ್ರಶಸ್ತಿ, ಸಂಪತ್ತುಗಳನ್ನು ಪಡೆದರೂ ಜೀವಮಾರಕ ರಾಸಾಯನಿಕಗಳ ಸಂಶೋಧನೆಯಿಂದ ಬೇಸತ್ತು ಮೈಸೂರಿಗೆ ಬಂದರು. ಕಾಡುಕೃಷಿ ವಿಧಾನದ ಮೂಲಕ ಅಧ್ಯಯನ ನಡೆಸಲು ಕಬಿನಿ ಜಲಾಶಯದ ದಿಬ್ಬದ ಮೇಲೆ ಬಂಜರು ಭೂಮಿಯನ್ನು ಖರೀದಿಸಿ ಸಿರಿಧಾನ್ಯಗಳ ಕೃಷಿಯಲ್ಲಿ ತೊಡಗಿಕೊಂಡರು. ಕೆಲವೇ ವರ್ಷಗಳಲ್ಲಿ ಅವರ ತಿಳುವಳಿಕೆ ಹೆಚ್ಚಿತು. ಇವರ ಎಂಟು ...

READ MORE

Related Books