ಉಟಾ...ಹಾರ

Author : ಕೆ.ಈ. ರಾಧಾಕೃಷ್ಣ

Pages 280

₹ 295.00




Year of Publication: 2022
Published by: ಸಪ್ನ ಬುಕ್ ಹೌಸ್
Address: ಆರ್ ಒ#11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು - 560 009
Phone: 080-40114455

Synopsys

‘ಉಟಾ… ಹಾರ’ ಕೃತಿಯು ಕೆ.ಈ ರಾಧಾಕೃಷ್ಣ ಅವರ ಲೇಖನಸಂಕಲನವಾಗಿದೆ. ಲಘುಧಾಟಿಯಲ್ಲಿ ಲೇಖಕರು ಇಲ್ಲಿನ ಬರಹಗಳಿಗೆ ಪ್ರವೇಶಿಕೆಯೊಂದನ್ನು ಕಲ್ಪಿಸುತ್ತಾರಾದರೂ, ಅವುಗಳಲ್ಲಿ ಅಪೂರ್ವ ಮಾಹಿತಿಯೂ ಅಡಕವಾಗಿರುವುದು ಗಮನಾರ್ಹ. ಇಲ್ಲಿ ಏಳು ಭಾಗಗಳಾಗಿ ಅವರು ಮೂವತ್ತೆಂಟು ಲೇಖನಗಳನ್ನು ವರ್ಗೀಕರಿಸಿದ್ದಾರೆ. ‘ನನ್ನಗೀತೆ-ಧರ್ಮಗೀತೆ’, ‘ಮೂಲಧಾರ-ಮೂಲಾಹಾರ’, ‘ನಿತ್ಯಾನಂದಕರೀ- ಬಲಕರೀ’, ‘ಪಿಬರೇ ಆನಂದರಸಮ್’.. ಹೀಗೆ ಅಧ್ಯಾಯಗಳಿಗೆ ಅವರು ನೀಡಿರುವ ಶೀರ್ಷಿಕೆಯೇ ಭಿನ್ನವಾಗಿದೆ. ಮೊದಲ ಭಾಗದಲ್ಲಿ ವಿವಿಧ ಧರ್ಮಗಳಲ್ಲಿ ಅನ್ನಾಹಾರದ ಕುರಿತ ಉಲ್ಲೇಖಗಳನ್ನು ಬಳಸಿಕೊಂಡು ರಾಧಾಕೃಷ್ಣ ಅವರು ಲೇ ಖನಗಳನ್ನು ಬರೆದಿದ್ದಾರೆ. ಸ್ತೋತ್ರಗಳು, ಬೈಬಲ್ ನಲ್ಲಿನ ಉಲ್ಲೇಖಗಳು, ಇಸ್ಲಾಂ ಧರ್ಮ ಯಾವ್ಯಾವುದನ್ನು ಪವಿತ್ರ ಆಹಾರ ಎನ್ನುತ್ತದೆ ಎನ್ನುವುದರ ಪ್ರಸ್ತಾಪ, ಜೈನಾಹಾರ ಹೇಗಿರುತ್ತದೆ ಎನ್ನುವ ಒಳನೋಟ ಎಲ್ಲವನ್ನೂ ಒಳಗೊಂಡ ಭಾಗವು ಲಘು ಧಾಟಿಯ ಬರಹಗಳಲ್ಲೂ ಇರುವ ಅಧ್ಯಯನಶೀಲ ಗುಣವನ್ನೂ ಅನಾವರಣಗೊಳಿಸುತ್ತದೆ.

About the Author

ಕೆ.ಈ. ರಾಧಾಕೃಷ್ಣ
(22 December 1946)

ಪ್ರೊ. ಕೆ.ಈ. ರಾಧಾಕೃಷ್ಣ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪೆರಾಜೆ (ಜನನ: 22-12-1946) ಮೂಲದವರು. ತಂದೆ ಈಶ್ವರಪ್ಪ, ತಾಯಿ ಕಾವೇರಮ್ಮ. ಬೆಂಗಳೂರು ವಿ.ವಿ.ಯಿಂದ ಇಂಗ್ಲಿಷ್ ನಲ್ಲಿ ಎಂ.ಎ. ಹಾಗೂ ಎಲ್.ಎಲ್. ಬಿ.ಪದವೀಧರರು. 1972 ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ 1988 ರಲ್ಲಿ ಪ್ರಾಂಶುಪಾಲರಾಗಿ, 2002 ರಲ್ಲಿ ಸ್ವಯಂ ನಿವೃತ್ತಿ ಪಡೆದರು. ಯುಜಿಸಿ ಯಲ್ಲಿ ವಿಷಯ ಪರಿಣಿತರ ಸಮಿತಿ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯದ ಉನ್ನತ ಶಿಕ್ಷಣ ನೀತಿ ರಚನೆಯ ಸಮಿತಿ ಸದಸ್ಯರಾಗಿದ್ದರು. ಬೆಂಗಳೂರು ವಿ.ವಿ.ಯಲ್ಲಿ ಅಭ್ಯಾಸ ಮಂಡಳಿ, ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಹೀಗೆ ವಿವಿಧ ವಿಭಾಗಗಳಲ್ಲಿ ...

READ MORE

Related Books