ಸಂಪೂರ್ಣ ಆರೋಗ್ಯಕ್ಕೆ ಸಿರಿಧಾನ್ಯಗಳು

Author : ರಾಜೇಶ್ವರಿ ಕೆ.ವಿ.

Pages 120

₹ 200.00




Year of Publication: 2022
Published by: ಹೇಮಂತ ಸಾಹಿತ್ಯ,
Address: # 972, ಸಿ, 4ನೇ ಇ ಬ್ಲಾಕ್, 10ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560060
Phone: 08023507170

Synopsys

ಆಹಾರ ತಜ್ಞ ಡಾ. ಖಾದರ ವಲಿ ಅವರು ತೆಲುಗು ಭಾಷೆಯಲ್ಲಿ ಬರೆದ ವಿಚಾರ-ಸಲಹೆಗಳನ್ನು ಚೇಕಟಿ ಶ್ರೀನಿವಾಸ್ ಅವರು ಸಂಗ್ರಹಿಸಿದ್ದು, ಲೇಖಕಿ ಕೆ.ವಿ. ರಾಜೇಶ್ವರಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಸಂಪೂರ್ಣ ಆರೋಗ್ಯಕ್ಕೆ ಸಿರಿಧಾನ್ಯಗಳು. ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳ ಸೇವನೆಯು ಬಹು ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಇವುಗಳ ಕುರಿತು ಗ್ರಾಮೀಣ ಜನರಿಗೆ ಒಂದಿಷ್ಟು ಮಾಹಿತಿ ಹೊರತುಪಡಸಿದರೆ ನಗರ ಜನರಿಗೆ ಸಿರಿಧಾನ್ಯಗಳ ಮಹತ್ವ ತಿಳಿದಿಲ್ಲ ಎಂದೇ ಹೇಳಬೇಕು. ರಾಗಿ, ತೊಗರಿ, ಹೆಸರು, ಅಲಸಂದಿ ಹೀಗೆ ಸಿರಿಧಾನ್ಯಗಳು ಆರೋಗ್ಯವನ್ನು ಹೆಚ್ಚಿಸುತ್ತವೆ ಮಾತ್ರವಲ್ಲಕ; ರೋಗನಿರೋಧಕಗಳಾಗಿಯೂ ಕೆಲಸ ಮಾಡುತ್ತವೆ. ಸಿರಿಧಾನ್ಯಗಳನ್ನು ಸೇವಿಸುವ ವ್ಯಕ್ತಿಯ ಆರೋಗ್ಯವು ರೋಗಮುಕ್ತವಾಗಿದ್ದು, ಬಹು ಕಾಲ ಬಾಳುವ ಭಾಗ್ಯವನ್ನೂ ಪಡೆಯುತ್ತಾನೆ. ತಪ್ಪಿದರೆ, ವ್ಯಕ್ತಿಯು ರೋಗಗಳಿಗೆ ಬಹುಬೇಗನೆ ತುತ್ತಾಗುತ್ತಾನೆ ಎಂದರೆ ಅತಿಶಯೋಕ್ತಿಯಲ್ಲ. ಈ ಸಂಗತಿಗಳ ಕುರಿತು ಮಾಹಿತಿ ಒಳಗೊಂಡಿರುವ ಕೃತಿ ಇದು.

About the Author

ರಾಜೇಶ್ವರಿ ಕೆ.ವಿ.

ಕಾದಂಬರಿಗಾರ್ತಿ ರಾಜೇಶ್ವರಿ ಕೆ. ವಿ.  ಅವರು  ಕನ್ನಡದ ಜನಪ್ರಿಯ ಕಾದಂಬರಿಗಾರ್ತಿಯರಲ್ಲಿ ಒಬ್ಬರು. ಅಂಚೆ ಕಛೇರಿಯಲ್ಲಿ ವೃತ್ತಿ ಆರಂಭಿಸಿದ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಂದೆ ವೆಂಕಟಪತಿ, ತಾಯಿ ಸಾವಿತ್ರಮ್ಮ.  ‘ಬಾಳೆಂಬ ದೋಣಿ, ವಂಶೋದ್ದಾರಕ, ಮಧೂಲಿಕ, ಚಿಗುರಿದ ಕುಡಿ, ಪಂಜರದ ಗಿಳಿ, ಸೌಂದರ್ಯ, ಮೊದಲ ಮೆಟ್ಟಿಲು, ಸೂತ್ರಧಾರ, ಹೊಸ ಬದುಕು, ಹರ್ಷದ ಹೊನಲು, ಹೊನ್ನ ಹರಿಗೋಲು’ ಕಾದಂಬರಿಗಳನ್ನು ರಚಿಸಿದ್ದಾರೆ. ಅವರು ಕಾದಂಬರಿಗಳಲ್ಲದೆ ವಾಸ್ತುಶಿಲ್ಪ, ವಿಜ್ಞಾನ, ಹೊಲಿಗೆ, ಪಾಕಶಾಸ್ತ್ರ, ಹಾಸ್ಯ, ಕಾವ್ಯ, ಕಂಪ್ಯೂಟರ್ ಮೊದಲಾಗಿ ವಿಷಯ ವಸ್ತುಗಳಿಗೆ ಸಂಬಂಧಿಸಿದಂತೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ.  ...

READ MORE

Related Books