ಗರತಿಯ ಹಾಡು

Author : ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ)

Pages 140

₹ 75.00




Year of Publication: 2012
Published by: ಸಮಾಜ ಪುಸ್ತಕಾಲಯ
Address: ಸುಭಾಶ್ ರಸ್ತೆ, ಧಾರವಾಡ

Synopsys

ಹಲಸಂಗಿ ಗೆಳೆಯರ ಬಳಗದ ಪ್ರಮುಖ ಸದಸ್ಯರೆಂದೇ ಗುರುತಿಸಲಾಗುವ ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ) ಅವರ ಕೃತಿ-ಗರತಿಯ ಹಾಡು. ವರಕವಿ ಅಂಬಿಕಾತನಯದತ್ತ, ಬಿ.ಎಂ.ಶ್ರೀ ಹಾಗೂ ಸಿಂಪಿ ಲಿಂಗಣ್ಣ ಅವರ ಅರ್ಥಪೂರ್ಣ ವಿಮರ್ಶಾ ಲೇಖನಗಳೊಂದಿಗೆ ಈ ಕೃತಿ ಸಾಹಿತ್ಯಕವಾಗಿ ಸಮೃದ್ಧವಾಗಿದೆ. ಜಾನಪದೀಯ ಸಾಹಿತ್ಯದ ಮೂಲ, ಅದರ ವಿಸ್ತಾರ, ಅರ್ಥದ ಆಳ ಎಲ್ಲವನ್ನೂ ತಿಳಿಯಲು ಈ ಕೃತಿ ಉತ್ತಮ ಆಕರ ಗ್ರಂಥವಾಗಿದೆ. ಸುಪ್ರಸಿದ್ಧ ಜಾನಪದೀಯ ತ್ರಿಪದಿಗಳ ಸಂಗ್ರಹ ಕೃತಿ ಇದು.

About the Author

ಮಧುರ ಚೆನ್ನ (ಹಲಸಂಗಿ ಚೆನ್ನಮಲ್ಲಪ್ಪ)
(31 July 1903 - 15 August 1952)

ಮಧುರ ಚೆನ್ನ ಅವರ ಮೂಲ ಹೆಸರು ಚೆನ್ನಮಲ್ಲಪ್ಪ ಗಲಗಲಿ. 1907ರ ಜುಲೈ 31ರಂದು  ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಸೀಪದ ಹಿರೇಲೋಣಿಯಲ್ಲಿ ಜನಿಸಿದರು. ತಂದೆ ಸಿದ್ಧಲಿಂಗಪ್ಪ, ತಾಯಿ ಅಂಬವ್ವ. ಹಲಸಂಗಿಯಲ್ಲಿ ಪ್ರಾಥಮಿಕ-ಪ್ರೌಢಶಿಕ್ಷಣ. ಮುಲ್ಕಿ ಪರೀಕ್ಷೆಯಲ್ಲಿ ಜಿಲ್ಲೆಗೇ ಪ್ರಥಮ ಸ್ಥಾನ ಪಡೆದಿದ್ದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಮಧುರಚೆನ್ನರು, ಹಲಸಂಗಿ ಗೆಳೆಯರೆಂದೇ ಪ್ರಖ್ಯಾತಿ. ಬಿಜಾಪುರಕ್ಕೆ ಹೋಗಿ ಶ್ರೀ ಕೊಣ್ಣೂರು ಹಣಮಂತರಾಯರಿಂದ ಇಂಗ್ಲಿಷ್, ಸಂಸ್ಕೃತ, ಹಳಗನ್ನಡ ಕಲಿತರು. ಸಂಶೋಧನೆ, ಜನಪದ ಸಾಹಿತ್ಯದ ಅಧ್ಯಯನ, ಆಧ್ಯಾತ್ಮಿಕ ಸಾಹಿತ್ಯದ ವ್ಯಾಸಂಗ, ಬಹುಭಾಷೆಗಳ ಅಭ್ಯಾಸ ಇತ್ಯಾದಿ ಅವರ ಅನನ್ಯವಾದ ಸಾಹಿತ್ಯೋಪಾಸನೆಯ ಪ್ರತೀಕಗಳು. 12 ವರ್ಷದ ಬಸಮ್ಮ ಅವರೊಂದಿಗೆ 16 ವರ್ಷದ ...

READ MORE

Related Books