ಜಾನಪದ ‌ಹೂಬನ

Author : ಎ.ಎನ್. ಸಿದ್ದೇಶ್ವರಿ

Pages 86

₹ 80.00




Year of Publication: 2017
Published by: ಗಾಯತ್ರಿ ಪ್ರಕಾಶನ
Address: #193/1, 29ನೇ, ವಾರ್ಡ್, ಚರ್ಚ್ ಹೌಸೆಸ್ ಹತ್ತಿರ, ಬಂಡಿಹಟ್ಟಿ, ಕೌಲ್ ಬಜಾರ್, ಬಳ್ಳಾರಿ-583102
Phone: 9480208662

Synopsys

ಚಿಂತಕಿ ಡಾ. ಎ.ಎಸ್. ಸಿದ್ದೇಶ್ವರಿ ಅವರ ಜಾನಪದ ಹಾಡುಗಳ ಕೃತಿ-ಜಾನಪದ ಹೂಬನ. ಜಾನಪದ ಹಾಡುಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. 

ಬಳ್ಳಾರಿ ಗಡಿ ಭಾಗದಲ್ಲಿ ಚಾಲ್ತಿಯಲ್ಲಿರಿಉವ ಜಾನಪದ ಗೀತೆಗಳನ್ನು ಸಂಗ್ರಹಿಸಲಾಗಿದೆ. ಅಂತರಂಗದ ಹಾಡುಗಳು, ಹಾಸ್ಯದ ಹಾಡುಗಳು, ದೇವರ ಹಾಡುಗಳು ಹಾಗೂ ಇತರೆ ಹಾಡುಗಳು-ಒಟ್ಟು ವಿಷಯ ವಸ್ತುವನ್ನು ವಿಭಾಗಿಸಿ ಅಧ್ಯಯನಕ್ಕೂ ಯೋಗ್ಯವಾಗಿಸಿದೆ. ಮಾತ್ರವಲ್ಲ; ಆಧುನಿಕತೆಯ ಈ ಕಾಲದಲ್ಲಿ ಕೃತಿಯ ಪ್ರಾತಿನಿಧ್ಯವನ್ನು ಸಹ ಚರ್ಚಿಸಲಾಗಿದೆ. 

ಸಾಹಿತಿ ಡಾ. ಜಾಜಿ ದೇವೇಂದ್ರಪ್ಪ ಅವರು ಬರೆದ ಮುನ್ನುಡಿಯಲ್ಲಿ ‘ನಮ್ಮ ಮೂಲ ಸಾಂಸ್ಕೃತಿಕ ಅಸ್ಮಿತೆ ಇರುವುದು ಜಾನಪದ ಸಾಹಿತ್ಯ ಹಾಗೂ ಹಾಡುಗಳಲ್ಲಿ. ಇವು, ಗ್ರಾಮ ನಾಮ, ಸ್ಥಳನಾಮ, ಆಚರಣೆಗಳು, ಅವುಗಳ ಮಹತ್ವ ತಿಳಿಯಲು ಮೂಲ ಸಂಪನ್ಮೂಲಗಳು. ಈ ಹಾಡುಗಳಲ್ಲಿ ಬಂಡಾಯ ಮನೋಭಾವವೂ ಇರುವುದನ್ನು ಗುರುತಿಸಬಹುದು. ಜಾನಪದ ಹಾಡುಗಳ ಸಂಗ್ರಹ, ಸಂಪಾದನೆ, ಶೋಧನೆಯ ಫಲವಾಗಿ ಜಾನಪದ ಎಂಬ ಶಬ್ದ ಸಂಪತ್ತು ಕೃತಿಯಲ್ಲಿ ಅನಾವರಣಗೊಂಡಿದೆ. ಸ್ತ್ರಿವಾದಿ ನೆಲೆಯಲ್ಲಿ ಜಾನಪದ ಹಾಡು- ಸಾಹಿತ್ಯ ವಿಶ್ಲೇಷಣೆಯೆಡೆಗೆ ಹೆಚ್ಚು ಒಲವು ತೋರಿದ್ದನ್ನು ಕಾಣಬಹುದು’ ಎಂದು ಪ್ರಶಂಸಿಸಿದ್ದಾರೆ.. 

 

About the Author

ಎ.ಎನ್. ಸಿದ್ದೇಶ್ವರಿ
(01 June 1970)

ಡಾ. ಎ.ನ್. ಸಿದ್ದೇಶ್ವರಿ ಅವರು ಜಾನಪದ ಸಾಹಿತ್ಯ ಸಂಶೋಧಕರು. ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ತಾಲೂಕು ಘಟಕ ಅಧ್ಯಕ್ಷರು. ಬಳ್ಳಾರಿಯ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಅಧ್ಯಾಪಕರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ವಿಭಾಗದಲ್ಲಿ‘ ಬಳ್ಳಾರಿ ಜಿಲ್ಲೆಯ ಜಾನಪದ ಆಚರಣೆಗಳು’  ಎಂಬ ‌‌‌ಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ.  ಪ್ರಕಟಿತ ಕೃತಿಗಳು: ಬಳ್ಳಾರಿ ಜಿಲ್ಲೆಯ ಜಾನಪದ ಆಚರಣೆಗಳು ಸುವ್ವೆ ..ಸುವ್ವೆ..ಸುವ್ವಾಲಿ, ಜಾನಪದ ‌‌‌‌‌‌‌‌‌‌ಹೂಬನ, ಬಾಳೆ(ಸಂಶೋಧನಾ ಪ್ರಬಂಧಗಳು)  ನಮ್ಮೂರು ಅಮಕುಂದಿ(ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಗೊಟಗೋಡಿ ಪ್ರಕಟಿಸಿದೆ). ಕನ್ನಡ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌ ಹಾಗೂ‌ ಜಾನಪದ ವಿಶ್ವವಿದ್ಯಾಲಯದಲ್ಲಿ 15 ಲೇಖನಗಳು ಪ್ರಕಟವಾಗಿವೆ. ಉಪನ್ಯಾಸ, ಕಾರ್ಯಕ್ರಮ ನಿರೂಪಣೆ ಹಾಗೂ ಸಂಯೋಜನೆ, ಜಾನಪದ ಸಂಶೋಧನೆ ಸಂಪಾದನೆ ಸಂಗ್ರಹಣೆ ಇತ್ಯಾದಿ ಇವರ ಹವ್ಯಾಸಗಳು. ...

READ MORE

Related Books