ಕರ್ನಾಟಕ ಜನಪದ ಮಹಾಕಾವ್ಯ ಮೀಮಾಂಸೆ ಮತ್ತು ತಾತ್ವಿಕತೆ

Author : ಹಿ.ಚಿ. ಬೋರಲಿಂಗಯ್ಯ

Pages 274

₹ 240.00




Year of Publication: 2018
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಕರ್ನಾಟಕ ಜಾನಪದ ಮತ್ತು ಬುಡಕಟ್ಟು ಅಧ್ಯಯನ ಕ್ಷೇತ್ರದ ಪ್ರಮುಖ ವಿದ್ವಾಂಸ ಡಾ.ಹಿ.ಚಿ.ಬೋರಲಿಂಗಯ್ಯನವರು ಕೈಗೊಂಡಿದ್ದ “ಜನಪದ ಮಹಾಕಾವ್ಯ ಮೀಮಾಂಸೆ ಮತ್ತು ತಾತ್ವಿಕತೆ” ಎಂಬ ಈ ಯೋಜನೆ ಇದೀಗ ಗ್ರಂಥರೂಪದಲ್ಲಿ ಹೊರಬರುತ್ತಿದೆ.

ಕನ್ನಡದ ಆರು ಜನಪದ ಮಹಾಕಾವ್ಯಗಳ ಕಥನ ಪರಂಪರೆಯನ್ನೂ ಅವುಗಳ ಅಂತರಾಳದ ತಾತ್ವಿಕತೆಯನ್ನೂ ಕುರಿತು ಕೃತಿಯು ಗಂಭೀರ ಸ್ವರೂಪದಲ್ಲಿ ಚರ್ಚಿಸುತ್ತದೆ. ಕನ್ನಡ ಕಾವ್ಯಮೀಮಾಂಸೆ ಮತ್ತು ಜಾನಪದ ಕಾವ್ಯಮೀಮಾಂಸೆಯ ತಳಹದಿಗಳನ್ನು ತೌಲನಿಕವಾಗಿ ಅಧ್ಯಯಿನಿಸುತ್ತಾ ಹೊಸ ದೇಸಿ ಮೀಮಾಂಸೆ ಯೊಂದನ್ನು ಕಟ್ಟುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.

About the Author

ಹಿ.ಚಿ. ಬೋರಲಿಂಗಯ್ಯ
(25 October 1955)

ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ಜಾನಪದ ವಿದ್ವಾಂಸರು. ತುಮಕೂರು ಜಿಲ್ಲೆಯ ತಲಪುರ ಮೂಲದವರಾದ ಬೋರಲಿಂಗಯ್ಯ ಅವರ ತಂದೆ ಚಿಕ್ಕೇಗೌಡ ಮತ್ತು ತಾಯಿ ಕಾಳಮ್ಮ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾಗಿ, ನಾಟಕ ಅಕಾಡೆಮಿ ರಿಜಿಸ್ಟಾರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಸಾಂಸ್ಕೃತಿಕ ಪ್ರತಿನಿಧಿಯಾಗಿ ಫ್ರಾನ್ಸ್‌, ಇಟಲಿ, ಹಾಲೆಂಡ್, ಸೌದಿ, ದುಬಾಯ್, ಇರಾನ್ ದೇಶಗಳಿಗೆ ಭೇಟಿ ನೀಡಿದ್ದಾರೆ. ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಗುಂಡ್ಮಿ ಜಾನಪದ ಪ್ರಶಸ್ತಿ ದೊರೆತಿವೆ. 'ಕಾಡು ಮತ್ತು ಕಾಂಕ್ರೀಟ್', 'ಜಾನಪದ ಗಂಗೋತ್ರಿ', 'ಗಿರಿಜನ ನಾಡಿಗೆ ಪಯಣ', ಉಜ್ಜನಿ ಚೌಡಮ್ಮ, ದಾಸಪ್ಪ ಜೋಗಪ್ಪ, ಎಸ್ಕೃತಿ ಮತ್ತು ...

READ MORE

Related Books