ಜನಪದ ಗೀತಾಂಜಲಿ

Author : ದೇಜಗೌ (ದೇ. ಜವರೇಗೌಡ)

Pages 222

₹ 144.00

Buy Now


Year of Publication: 2014
Published by: ಸಪ್ನ ಬುಕ್ ಹೌಸ್
Address: ಆರ್.ಓ. #11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-9

Synopsys

ಖ್ಯಾತ ಸಾಹಿತಿ ದೇ. ಜವರೇಗೌಡ ಅವರು ಬರೆದ ಕೃತಿ-ಜನಪದ ಗೀತಾಂಜಲಿ. ಜನಪದ ಸಾಹಿತ್ಯವು ಅಮರ. ಜನಪದ ಸಾಹಿತ್ಯದ ಯಾವುದೇ ಪ್ರಕಾರದ ಸೃಷ್ಟಿಗೆ ಜೀವನಾನುಭವವೇ ಮೂಲ. ಈ ಅನುಭವದ ಮೂಲಕವೇ ಜೀವನ ಮೌಲ್ಯಗಳನ್ನು-ಆದರ್ಶಗಳನ್ನು-ಉದ್ದೇಶಗಳನ್ನುಸ್ಪಷ್ಟಪಡಿಸುತ್ತವೆ. ಕೇವಲ ಮೌಖಿಕ ಸಾಹಿತ್ಯವಾಗಿಯೇ ಮುಂದುವರಿದುಕೊಂಡು ಬಂದಿದ್ದ ಜನಪದ ಸಾಹಿತ್ಯಕ್ಕೆ, ನೈಸರ್ಗಿಕ ಸಾಮರ್ಥ್ಯವಿದೆ. ಗೀಗೀ ಪದಗಳು, ಕೋಲಾಟದ ಪದಗಳು, ಮೊಹರಂ ಆಚರಣೆಯ ಪದಗಳು, ಕುಟ್ಟುವ-ಬೀಸುವ ಹಾಡುಗಳು ಹೀಗೆ ಜನಪದ ಸಾಹಿತ್ಯವು ಜನಜೀವನದ ಶ್ರೀಮಂತಿಕೆಯನ್ನು ತೋರುತ್ತವೆ.

About the Author

ದೇಜಗೌ (ದೇ. ಜವರೇಗೌಡ)
(06 July 1918 - 30 April 2016)

ದೇಜಗೌ ಎಂದು ಚಿರಪರಿಚಿತರಾಗಿದ್ದ ದೇವೇಗೌಡ ಜವರೇಗೌಡ ಕೃಷಿಕ ಕುಟುಂಬದಿಂದ ಬಂದವರು. ಚನ್ನಪಟ್ಟಣ ತಾಲ್ಲೂಕಿನ ಮೂಡಿಗೆರೆಯಲ್ಲಿ 1918ರ ಜುಲೈ 6ರಂದು ಜನಿಸಿದರು. ತಂದೆ ದೇವೇಗೌಡ- ತಾಯಿ ಚೆನ್ನಮ್ಮ. ಚಕ್ಕೆರೆ, ಚನ್ನಪಟ್ಟಣಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡಿ ಬಿ.ಎ ಪದವಿ ಗಳಿಸಿ ಕೆಲವು ಕಾಲ ಗುಮಾಸ್ತರಾಗಿ ಕೆಲಸ ಮಾಡಿ ಅನಂತರ ಮೈಸೂರಿಗೆ ಹೋಗಿ ಎಂ.ಎ. ಪದವಿ ಗಳಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕ (1944) ಕೆಲಸಕ್ಕೆ ಸೇರಿದ ಅವರು ಅನಂತರ ಉಪಪ್ರಾಧ್ಯಾಪಕ, ಪರೀಕ್ಷಾಧಿಕಾರಿ, ಪ್ರಾಂಶುಪಾಲರು, ಇಲಾಖಾಮುಖ್ಯರು, ನಿರ್ದೇಶಕರು, ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಗೌರವಾನ್ವಿತ ಉಪಕುಲಪತಿಯಾಗಿ ನಿವೃತ್ತರಾದರು. ಕುವೆಂಪು ವಿದ್ಯಾವರ್ಧಕ ...

READ MORE

Related Books