ಕತ್ತಾಲ ದಾರಿ ದೂರ

Author : ಕೃಷ್ಣಮೂರ್ತಿ ಹನೂರು

Pages 408

₹ 350.00




Year of Publication: 2019
Published by: ಅಹರ್ನಿಶಿ ಪ್ರಕಾಶನ
Address: ಜ್ಞಾನವಿಹಾರ ಬಡಾವಣೆ, ಕಂಟ್ರಿ ಕ್ಲಬ್‌ ಎದುರು ವಿದ್ಯಾ ನಗರ ಶಿವಮೋಗ್ಗ.
Phone: 9449174662

Synopsys

‘ಕತ್ತಾಲ ದಾರಿ ದೂರ’ ಎಂಬುದು ಹಿರಿಯ ಲೇಖಕ ಕೃಷ್ಣಮೂರ್ತಿ ಹನೂರು ಅವರ ಕೃತಿ. ಜನಪದದ 11 ಕಥನಗೀತೆಗಳ ಸಂಕಲನವಿದು. ಸತಿ ನೆಪದಲ್ಲಿ ಬೆಂಕಿಗೆ ಬೀಳುವುದು, ಕೆರೆಗೆ ಹಾರದ ನೆಪದಲ್ಲಿ ಬಲಿ ಕೊಡುವುದು ಇಂತಹ ಕಥನಗೀತೆಗಳ ಸಂಗ್ರಹವಿದೆ. ದೇವತೆಗಳ ಹೆಸರಿನಲ್ಲಿ ಹೆಣ್ಣುಮಕ್ಕಳನ್ನೇ ಬಲಿ ತೆಗೆದುಕೊಳ್ಳುವ ಇಂತಹ ಸಂಪ್ರದಾಯಗಳು ಹಾಗೂ ಈ ಸಂಪ್ರದಾಯಗಳಿಗೆ ಅಧೀನಭಾವ ತಳೆಯುವ ಹೆಣ್ಣುಮಕ್ಕಳು, ಬಲಿಗೆ ತಯಾರಾಗುವ ಹೆಣ್ಣಿನ ವರ್ಣನೆಯಿಂದ ಗಮನ ಸೆಳೆಯುವ ಕಥನ ಗೀತೆಗಳು ಹೆಣ್ಣೊಬ್ಬಳ ಮನಸ್ಸಿನೊಳಗೆ ವ್ಯಕ್ತವಾಗುವ ವಿರೋಧವನ್ನೂ ಸೂಕ್ಷ್ಮವಾಗಿ ಹೊರಗೆಡುತ್ತವೆ ಎಂಬುದು ಗಮನಾರ್ಹ. ಪುರುಷ ಪ್ರದಾನ ಸಮಾಜವು ಹೆಣ್ಣುಗಳನ್ನು ತಮ್ಮ ಪ್ರತಿಷ್ಠೆಗಾಗಿ ಹೇಗೆ ಬಳಸಿಕೊಂಡಿತ್ತು ಎಂಬುದರ ವಿವರವಾಗಿಯೂ ಈ ಕಥನಗೀತೆಗಳಿವೆ.

About the Author

ಕೃಷ್ಣಮೂರ್ತಿ ಹನೂರು

ಜಾನಪದ ತಜ್ಞ, ಕತೆಗಾರ, ಕಾದಂಬರಿಕಾರ ಕೃಷ್ಣಮೂರ್ತಿ ಹನೂರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಮಾಡಿ ಸಂದರ್ಶಕ ಪ್ರಾಧ್ಯಾಪಕರಾಗಿ. 40 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಆಜ್ಞಾತನೊಬ್ಬನ ಆತ್ಮ ಚರಿತ್ರೆ ಕಾದಂಬರಿ ಓದುಗರ ಮೇರೆಯಿಲ್ಲದ ಮೆಚ್ಚುಗೆ ಪಡೆದಿದೆ. ಅದೀಗ ಇಂಗ್ಲೀಷ್ ಗೆ ಅನುವಾದಗೊಂಡು ಪ್ರಕಟವಾಗಿದೆ. ಕೇರಿಗೆ ಬಂದ ಹೋರಿ, ಕತ್ತಲಲ್ಲಿ ಕಂಡ ಮುಖ ಮತ್ತು ಕಳೆದ ಮಂಗಳವಾರ ಮುಸ್ಸಂಜೆ ಅವರ ಕಥಾಸಂಕಲನಗಳು. ಬಾರೋ ಗೀಜಗನೆ, ನಿಕ್ಷೇಪ ಅವರ ಕಾದಂಬರಿಗಳು. ಜಾನಪದಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರು ಸಂಪಾದಿಸಿದ ವಿಶ್ವಕೋಶ ಎನ್ ಸೈಕ್ಲೋಪೀಡಿಯಾ ಆಫ್ ಫೋಕ್ ಕಲ್ಚರ್ ...

READ MORE

Related Books