ಕಲ್ಲೆ ಶಿವೋತ್ತಮ ರಾವ್: ಜನಪ್ರಗತಿಯ ಪಂಜು

Author : ಪಾರ್ವತೀಶ ಬಿಳಿದಾಳೆ

Pages 390

₹ 300.00




Year of Publication: 2023
Published by: ಕರ್ನಾಟಕ ಅಧ್ಯಯನ ಕೇಂದ್ರ
Address: ಹಾರೋಹಳ್ಳಿ, ರಾಮನಗರ

Synopsys

‘ಕಲ್ಲೆ ಶಿವೋತ್ತಮ ರಾವ್: ಜನಪ್ರಗತಿಯ ಪಂಜು’ ಇದು ಲೇಖಕ, ಪತ್ರಕರ್ತ ಪಾರ್ವತೀಶ ಬಿಳಿದಾಳೆ ಅವರ ಸಂಪಾದನೆಯಲ್ಲಿ ಪ್ರಕಟವಾಗಿರುವ ಕೃತಿ. ಕಲ್ಲೆ ಶಿವೋತ್ತಮ ರಾವ್ ಕನ್ನಡ ಪತ್ರಿಕೋದ್ಯಮದ ಇತಿಹಾಸದ ಏರಿಳಿತದ ಹಾದಿಯಲ್ಲಿ, ಸಾಮಾಜಿಕ ನ್ಯಾಯಕ್ಕಾಗಿ ಸತತವಾಗಿ ಉರಿದ ಬೆಂಕಿ ಮತ್ತು ಬೆಳಕಿನ ಪಂಜು ಎಂದಿದ್ದಾರೆ ಪಾರ್ವತೀಶ ಬಿಳಿದಾಳೆ. ಕಲ್ಲೆ ಶಿವೋತ್ತಮ ರಾವ್ ಅವರು ಕನ್ನಡ ಪತ್ರಿಕೋದ್ಯಮದ ಹಿರಿಯರಲ್ಲಿ ಪ್ರಮುಖರು. ಹುಟ್ಟಿದ್ದು ಕಾರ್ಕಳ ಬಳಿಯ ಕಲ್ಯ ಗ್ರಾಮದಲ್ಲಿ, ಅದೇ ನಂತರ ಕಲ್ಲೆ ಆಗಿ ಅವರ ಹೆಸರಿನೊಂದಿಗೆ ಸೇರಿತು. ತಂದೆ ನಾರಾಯಣ ಕಲ್ಲೆ ಹಾಗೂ ಅವರ ತಂದೆ ಮೂಡ್ಲಿ ಮಂಜಪ್ಪನವರೂ ಸಹ ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆದ ಪತ್ರಕರ್ತರು ಹಾಗೂ ಬರಹಗಾರರಾಗಿದ್ದರು. ಪತ್ರಿಕೋದ್ಯಮದಲ್ಲಿ ಅವರು ನಿರ್ವಹಿಸಿದ ಮಹತ್ವದ ಪಾತ್ರದ ಮೇಲೆ ಈ ಕೃತಿ ಬೆಳಕು ಚೆಲ್ಲುತ್ತದೆ.

About the Author

ಪಾರ್ವತೀಶ ಬಿಳಿದಾಳೆ

ಪಾರ್ವತೀಶ ಹಾಗೂ ಬಿಳಿದಾಳೆ ಈಶ ಎಂಬ ಹೆಸರಿನಲ್ಲಿ ಬರೆಯುವ ಪತ್ರಕರ್ತ- ಲೇಖಕ ಪಾರ್ವತೀಶ್ ಜನಿಸಿದ್ದು 1967ರಲ್ಲಿ. ಬಾಲ್ಯ- ಪ್ರಾಥಮಿಕ ಶಿಕ್ಷಣ ಪಡೆದದ್ದು ಆನೇಕಲ್, ಮಾಲೂರು, ದೊಡ್ಡ ಬಳ್ಳಾಪುರದಲ್ಲಿ. ಬಿ.ಕಾಂ. ಪದವಿ ಪೂರ್ಣಗೊಳಿಸಿರುವ ಅವರು ಎಂ.ಎ. ಪತ್ರಿಕೋದ್ಯಮ ಕೋರ್ಸ್ ಅನ್ನು ಅರ್ಧಕ್ಕೆ ನಿಲ್ಲಿಸಿದವರು. ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮದವರಾದ ಅವರು ಅರೆಕಾಲಿಕ ರೈತರೂ ಹೌದು. ಕೆಲಕಾಲ ಸರ್ಕಾರಿ ನೌಕರಿ ಮಾಡಿದ ಪಾರ್ವತೀಶ್ ಅವರು ನಂತರ ಕರ್ನಾಟಕ ಪ್ರಗತಿರಂಗ ಹಾಗೂ ಕರ್ನಾಟಕ ವಿಮೋಚನಾ ರಂಗದ ಸಕ್ರಿಯ ಕಾರ್ಯಕರ್ತರಾಗಿದ್ದರು. ಲಂಕೇಶ್ ಪತ್ರಿಕೆ, ಗೌರಿ ಲಂಕೇಶ್ ಪತ್ರಿಕೆಗಳಲ್ಲಿ ವರದಿಗಾರನಾಗಿ ಕೆಲಸ ಮಾಡಿರುವ ಅವರು ಸಾಕೇತ್ ...

READ MORE

Related Books