ಪತ್ರಿಕಾ ಮಾಧ್ಯಮ: ವಾಣಿಜ್ಯದ ಆಯಾಮ

Author : ಕೂಡ್ಲಿ ಗುರುರಾಜ

Pages 84

₹ 95.00




Year of Publication: 2018
Published by: ಕರ್ನಾಟಕ ಮಾಧ್ಯಮ ಅಕಾಡೆಮಿ
Address: ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಟವರ್, ಡಾ. ಬಿ.ಆರ್. ಅಂಬೇಡ್ಕರ್ ಬೀದಿ, ಬೆಂಗಳೂರು-560001
Phone: 08022860164

Synopsys

ಲೇಖಕ-ಪತ್ರಕರ್ತ ಕೂಡ್ಲಿ ಗುರುರಾಜ ಅವರ ಕೃತಿ-ಪತ್ರಿಕಾ ಮಾಧ್ಯಮ: ವಾಣಿಜ್ಯದ ಆಯಾಮ. ಪತ್ರಿಕೋದ್ಯಮವು ವ್ಯಾಪಾರೀಕರಣಗೊಳ್ಳುತ್ತಿರುವ ಸಂದರ್ಭದಲ್ಲಿ ಅದರ ಸ್ವರೂಪವನ್ನು ತೋರುವ ಕೃತಿ ಇದು. ‘ಉದ್ಯಮವಾದ ಪತ್ರಿಕಾ ಮಾಧ್ಯಮ; ವ್ಯಾಪಾರೀಕರಣದ ಬಹಳ ಆಯಾಮದ ಒಂದು ಅಧ್ಯಯನ’ ವಿಷಯವಾಗಿ ಮಂಗಳೂರು ವಿ.ವಿ.ಗೆ ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧ. ಅದರ ಸಂಪೂರ್ಣ ಸಾರವೇ ಈ ಪುಸ್ತಕ. ಸಾಹಿತಿ ಕೆ. ಸತ್ಯನಾರಾಯಣ ಅವರು ಕೃತಿಗೆ ಮುನ್ನುಡಿ ಬರೆದು ‘ಮಾಧ್ಯಮದ ಮುಖ್ಯ ಆಸ್ತಿ ವಿಶ್ವಾಸಾರ್ಹತೆ. ಅದಕ್ಕೆ ಲೋಪ ಬಂದಾಗ ಪತ್ರಿಕೆಯ ಜೀವ ಹೋಗಬಹುದು. ಆದರೆ, ವರ್ಷಗಳ ದುಡಿಮೆಯಿಂದ ಗಳಿಸಿದ ವಿಶ್ವಾಸಾರ್ಹತೆಯನ್ನು ಪತ್ರಕರ್ತ ಎಂದೆಂದಿಗೂ ಕಳೆದುಕೊಳ್ಳಬಾರದು. ಈ ಸಂದೇಶವನ್ನು ಸ್ಪಷ್ಟವಾಗಿ ನೀಡಿರುವ ಡಾ. ಕೂಡ್ಲಿ ಗುರುರಾಜ ಅವರು ಅಭಿನಂದನಾರ್ಹರು’ ಎಂದು ಪ್ರಶಂಸಿಸಿದ್ದಾರೆ.

ಓದುಗರ ಏನಂತಾರೆ...?, ಮಾಧ್ಯಮ ವಾಣಿಜ್ಯೀಕರಣದ ಸುತ್ತ, ಕಾಸಿಗಾಗಿ ಸುದ್ದಿ, ಸಂದರ್ಶನಗಳು, ಕೆಲ ಮಾತು -ಹೀಗೆ ವಿವಿಧ ಅಧ್ಯಾಯಗಳಡಿ ವ್ಯಾಪಾರೀಕರಣ ಗೊಳ್ಳುತ್ತಿರುವ ಪತ್ರಿಕೋದ್ಯಮ ಕುರಿತು ಸಾಧಕ-ಬಾಧಕಗಳ ವಿವಿಧ ಆಯಾಮಗಳನ್ನು ಲೇಖಕರು ಇಲ್ಲಿ ಚರ್ಚಿಸಿದ್ದಾರೆ. 

About the Author

ಕೂಡ್ಲಿ ಗುರುರಾಜ

ಲೇಖಕ-ಪತ್ರಕರ್ತ ಕೂಡ್ಲಿ ಗುರುರಾಜ ಅವರು ಕನ್ನಡಪ್ರಭ, ವಿಜಯಕರ್ನಾಟಕ ದಿನಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ರಿಲಿಸಿದ್ದು, ರಾಜಕೀಯ ವಿಶ್ಲೇಷಕರು. ಕರ್ನಾಟಕ ಮಾಧ್ಯಮ (2012-13) ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತರು. ಕಲಬುರ್ಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರು.   ಕೃತಿಗಳು: ಪತ್ರಿಕಾ ಮಾಧ್ಯಮದ ವಾಣಿಜ್ಯಿಕ  ಆಯಾಮಗಳು (ಕರ್ನಾಟಕ ಮಾಧ್ಯಮ ಅಕಾಡೆಮಿಯ 2019ನೇ ಸಾಲಿನ ಮಾಧ್ಯಮಿಕ ಪ್ರಶಸ್ತಿ ಲಭಿಸಿದೆ.) , ಸುದ್ದಿ ಬರಹ ಮತ್ತು ವರದಿಗಾರಿಕೆ,  ...

READ MORE

Related Books