ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ

Author : ರವಿ ಬೆಳಗೆರೆ

Pages 144

₹ 135.00




Year of Publication: 2023
Published by: ರವಿ ಬೆಳಗೆರೆ ಪ್ರಕಾಶನ
Address: #19,16/1,ಯಶಸ್ವಿ,2ನೇ ಕ್ರಾಸ್‌,ಬಿಹೆಚ್‌ಇಎಲ್‌ 2ಹಂತ, ಕಿತ್ತೂರು ರಾಣಿ ಚೆನ್ನಮ್ಮ ಪಾರ್ಕ್,ರಾಘವೆಂದ್ರ ಲೇಔಟ್‌, ರಾಜಾರಾಜೇಶ್ವರಿ ನಗರ ಬೆಂಗಳೂರು 560 098

Synopsys

‘ನಕ್ಸಲೀಯರ ನಾಡಿನಲ್ಲಿ ರವಿ ಬೆಳಗೆರೆ’ ರವಿ ಬೆಳಗೆರೆ ಅವರ ಸಂದರ್ಶನದ ಕೃತಿಯಾಗಿದೆ. ನನ್ನ ನಾಲ್ಕು ದಶಕಗಳ ಆತ್ಮೀಯ ಮಿತ್ರ ರವಿ ಬೆಳೆಗರೆ ಇಪ್ಪತ್ತು ವರ್ಷಗಳ ಹಿಂದೆ ಆಂಧ್ರ ಪ್ರದೇಶದ ನಕ್ಸಲ್ ಸಂಘಟನೆಯ ಪ್ರಮುಖ ನಾಯಕರಾಗಿದ್ದ ಹಾಗೂ ಪ್ರಜಾ ಸಮರಂ ಅಥವಾ ಪೀಪಲ್ಸ್ ವಾರ್ ಗ್ರೂಪ್ ಸಂಘಟನೆಯನ್ನು ಹುಟ್ಟುಹಾಕಿದ್ದ ಕೊಂಡಪಲ್ಲಿ ಸೀತಾರಾಮಯ್ಯನವರನ್ನು ಅವರ ವೃದ್ಧಾಪ್ಯದ ದಿನಗಳಲ್ಲಿ ಬೆನ್ನತ್ತಿ ಮಾಡಿದ ಅನನ್ಯವಾದ ಸಂದರ್ಶನ ಇದಾಗಿದೆ. ಕೇವಲ ನೂರು ಪುಟಗಳಿರುವ ‘ನಕ್ಸಲೀಯರ ನಾಡಿನಲ್ಲಿ ರವಿ ಬೆಳೆಗೆರೆ’ ಎಂಬ ಈ ಕೃತಿಯು ಮೇಲುನೋಟಕ್ಕೆ ಒಂದು ರೀತಿಯಲ್ಲಿ ಅಪೂರ್ಣ ಕೃತಿ ಎನಿಸಬಹುದು. ಆದರೆ, ಈ ಕೃತಿಯಲ್ಲಿ ಏಕಕಾಲಕ್ಕೆ ಕೊಂಡಪಲ್ಲಿ ಸೀತಾರಾಮಯ್ಯ, ಅವರ ಪತ್ನಿ ಕೋಟೇಶ್ವರಮ್ಮ ಹಾಗೂ ಅರಣ್ಯದ ಭೂಗತ ಬದುಕಿನಲ್ಲಿ ಸಂಗಾತಿಯಾಗಿದ್ದ ಅನಸೂಯಮ್ಮ ಮತ್ತು ರಾಯಲಸೀಮೆಯ ಪ್ರದೇಶದಲ್ಲಿ ನಕ್ಸಲ್ ಹೋರಾಟವನ್ನು ಹುಟ್ಟುಹಾಕಿದ ಕೊಂಡಪಲ್ಲಿಯವರ ಸಹಚರ ಬಂಡಯ್ಯ ಮಾಸ್ತರು ಇವರುಗಳ ಸಂದರ್ಶನದ ಜೊತೆಗೆ ಅವರುಗಳು ತಮ್ಮ ಬದುಕಿನ ಕಥನವನ್ನು ಹಾಗೂ ಹೋರಾಟದ ಏಳು ಬೀಳಿನ ಕಥನವನ್ನು ಅವರೆಲ್ಲರೂ ಸ್ವತಃ ಹೇಳಿಕೊಳ್ಳುವುದರ ಮೂಲಕ ಆಂಧ್ರಪ್ರದೇಶದ ನಕ್ಸಲ್ ಹೋರಾಟದ ಇತಿಹಾಸಕ್ಕೆ ಅಧಿಕೃತವಾಗಿ ಸ್ಪಷ್ಟತೆ ದೊರಕಿರುವುದು ಈ ಕೃತಿಯ ವಿಶೇಷವಾಗಿದೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books