ಸುದ್ದಿಯ ಹಿಂದೆ

Author : ಡಿ.ವಿ. ರಾಜಶೇಖರ್‌



Published by: ದೇಸಿ ಪುಸ್ತಕ ಪ್ರಕಾಶನ
Address: #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040
Phone: 9845096668

Synopsys

ಹಿರಿಯ ಪತ್ರಕರ್ತ ಡಿ.ವಿ. ರಾಜಶೇಖರ ಅವರು ತಮ್ಮ ವೃತ್ತಿ ಬದುಕಿನ ಅನುಭವಗಳ ಹಿನ್ನೆಲೆಯಲ್ಲಿ ಸುದ್ದಿ-ವರದಿ ಹೀಗೆ ಇಡೀ ಪತ್ರಿಕೋದ್ಯಮ ಕುರಿತ ಪಕ್ಷಿನೋಟದ ಬರಹಗಳನ್ನು ಸಂಕಲಿಸಲಾಗಿದೆ. ಕೃತಿಗೆ ಬೆನ್ನುಡಿ ಬರೆದ ಔಟ್ ಲುಕ್ ರಾಷ್ಟ್ರೀಯ ವಾರಪತ್ರಿಕೆಯ ಹಿರಿಯ ಸಹ ಸಂಪಾದಕ ಸುಗತ ಶ್ರೀನಿವಾಸ ‘ಪತ್ರಿಕೋದ್ಯಮಕ್ಕೆ ಸೇರಲು ತುದಿಗಾಲಲ್ಲಿ ನಿಂತಿರುವ ಹಾಗೂ ಈಗಾಗಲೇ ಅದರಲ್ಲಿ ತಳವೂರಿರುವ ಎಲ್ಲರೂ ಅಗತ್ಯವಾಗಿ ಓದಲೇಬೇಕಾದ ಕೃತಿ ಇದು. ಒಳಗೆ ಬರಲು ಕಾದಿರುವವರಿಗೆ ಇದು ಭ್ರಮೆಯ ನಿವಾರಣೆಯನ್ನು, ಅಪೇಕ್ಷಿತ ಮನಸ್ಥಿತಿಯ ಚೌಕಟ್ಟುಗಳನ್ನು, ಒಳಗೆ ಇರುವವರಿಗೆ ಎಚ್ಚರವನ್ನು ಹಾಗೂ ತಾವು ಈಗಾಗಲೇ ತುಳಿದಿರುವ ಹಾದಿಯನ್ನು ಅವಲೋಕಿಸಲು ಅವಕಾಶವನ್ನು ಮಾಡಿಕೊಡುತ್ತದೆ. ಸಾಮಾನ್ಯ ಓದುಗ ಹಾಗೂ ಕುತೂಹಲಿಗಳು ಪ್ರತಿದಿನ ಸ್ವೀಕರಿಸುವ ಅಕ್ಷರ ರಾಶಿಯ ಹಿಂದಿನ ಸೂಕ್ಷ್ಮತೆಗಳು, ಸವಾಲುಗಳು, ಹತಾಶೆಗಳು ಹಾಗೂ ಆದರ್ಶಗಳನ್ನು ಪರಿಚಯ ಮಾಡದೇ ಇರುವುದಿಲ್ಲ. ಇವು ಕೇವಲ ಪಾಠ ಮಾಡುವ, ಮಾರ್ಗಗಳನ್ನು ಸೂಚಿಸುವ, ಸರಿ-ತಪ್ಪುಗಳ ಬಗ್ಗೆ ಖಡಾಖಂಡಿತವಾಗಿ ಮಾತನಾಡುವ ಲೇಖನಗಳಲ್ಲ. ಮೂರು ದಶಕಗಳಿಗೂ ಹೆಚ್ಚು ಕಾಲ,ಕಳಂಕರಹಿತ ವೃತ್ತಿ ಬದುಕು ನಡೆಸಿದವರ ಅನುಭವ ಜರಡಿಯಿಂದ ಹೊರಬಂದ ನಿರಂಹಕಾರ ಮತ್ತು ಪರಾನುಭೂತಿಯಿಂದ ಕೂಡಿದ ಅಪರೂಪದ ಬರವಣಿಗೆ. ಪತ್ರಿಕೋದ್ಯಮವನ್ನು ಬರೀ ಒಂದು ಉದ್ಯಮವಾಗಿ ಕಾಣುವ, ಅಧಿಕಾರ ಕೇಂದ್ರಗಳಿಗೆ ಹತ್ತಿರವಾಗಲು ಕಾಲುದಾರಿಗಳನ್ನು ಹುಡುಕುವ ಮತ್ತು ಹೊಟ್ಟೆಪಾಡಿನ ದಿಕ್ಕಾಗಿ ಕಾಣುವ ಮಂದಿಗೆ ಈ ವ್ಯಕ್ತಿಯ ನೈಜ ಉದ್ದೇಶವನ್ನು ತಿಳಿಸಿ ಹೇಳುತ್ತವೆ. ಪತ್ರಿಕೋದ್ಯಮದ ಗೆಲುವು ಇರುವುದು ಓದುಗರ ಪರವಾದಾಗಲಲ್ಲ. ಜನಪರವಾದಾಗ ಮತ್ತು ಧ್ವನಿ ಇಲ್ಲದವರ ಧ್ವನಿಯಾದಾಗ ಮಾತ್ರ ಎಂಬುದನ್ನು ಪರೋಕ್ಷವಾಗಿ ಪ್ರತಿಪಾದಿಸುತ್ತವೆ’ ಎಂದು ಪ್ರಶಂಸಿಸಿದ್ದಾರೆ.

 

About the Author

ಡಿ.ವಿ. ರಾಜಶೇಖರ್‌

ಹಿರಿಯ ಪತ್ರಕರ್ತ ಡಿ.ವಿ. ರಾಜಶೇಖರ ಅವರು ಅಂಕಣಕಾರರು. ಲೇಖಕರು.  ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ನಂತರ ಅವರು ವಿಜಯ ಕರ್ನಾಟಕ ದಿನಪತ್ರಿಕೆಗೆ ಸಂಪಾದಕೀಯ ಸಲಹೆಗಾರರಾಗಿ ನೇಮಕಗೊಂಡರು. ನಂತರ ಕನ್ನಡ ಪ್ರಭ ದಿನಪತ್ರಿಕೆ ಹಾಗೂ ದ ಸ್ಟೇಟ್ಸ್‌ ಆನ್‌ಲೈನ್‌ ಪೋರ್ಟಲ್‌ನಲ್ಲಿಯೂ ಸಂಪಾದಕೀಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಅವರು ಕೆಲಕಾಲ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಜಾವಾಣಿಯ ವರದಿಗಾರರಾಗಿ ನೇಮಕಗೊಂಡ ನಂತರ ಹುಬ್ಬಳ್ಳಿ, ನವದೆಹಲಿ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದರು. ಮೈಸೂರು ಆವೃತ್ತಿಯ ಮುಖ್ಯಸ್ಥರಾಗಿದ್ದ ಅವರು ಪ್ರಜಾವಾಣಿಯ ಭಾನುವಾರದ ...

READ MORE

Related Books